ಲಕ್ನೋ, ಆಗಸ್ಟ್ 05: ಅಯೋಧ್ಯೆ ರಾಮಮಂದಿರ ಭೂಮಿ ಪೂಜನಾ ಕಾರ್ಯಕ್ರಮವು ಆಗಸ್ಟ್ 5 ರಂದು ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯದ ಮುಖ್ಯ ಶಿಲೆಯನ್ನು ಗರ್ಭಗ್ರಹದಲ್ಲಿ ಇರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.
ಐತಿಹಾಸಿಕ ಸಂಭ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಅತಿಥಿಗಳಿಗೆ ಆಹ್ವಾನ ಸಹ ಕಳುಹಿಸಿದೆ. ಇನ್ನು ಆಗಸ್ಟ್ 5 ರಂದು ಪ್ರಧಾನಿ ಮೋದಿ ಸುಮಾರು ಮೂರು ಗಂಟೆಗಳ ಕಾಲ ಅಯೋಧ್ಯೆಯಲ್ಲಿರಲಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಬೆಳಗ್ಗೆ 9.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಕ್ನೋ ಕಡೆ ಪ್ರಯಾಣ ಆರಂಭಿಸಲಿದ್ದಾರೆ.
Aug 05, 2020, 3:37 pm IST
ಹರಿಯಾಣ: 500 ವರ್ಷಗಳ ಹಳೆಯ ಕಾಯುವಿಕೆ ಅಂತಿಮವಾಗಿ ಮುಗಿದಿದೆ. ರಾಮ ದೇವಾಲಯ ನಿರ್ಮಾಣ ಪ್ರಾರಂಭವಾಗಿದೆ. ದಶಕಗಳಷ್ಟು ಹಳೆಯ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಪ್ರತಿಯೊಬ್ಬ ಭಾರತೀಯನನ್ನು ನಾನು ಅಭಿನಂದಿಸುತ್ತೇನೆ: ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್
Aug 05, 2020, 3:36 pm IST
ಮಹಾರಾಷ್ಟ್ರ: ರಾಮ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಕುಟುಂಬದೊಂದಿಗೆ ನಾಗ್ಪುರದಲ್ಲಿ ಭಗವಾನ್ ರಾಮನನ್ನು ಪೂಜಿಸಿದರು.
Maharashtra: Union Minister Nitin Gadkari recited Ram Raksha and worshiped Lord Ram with his family at Nagpur during the foundation stone laying ceremony of #RamTemple in #Ayodhyapic.twitter.com/o66WvmtoHT
ರಾಮಮಂದಿರಕ್ಕೆ ಅಡಿಪಾಯ ಹಾಕುವ ಮೂಲಕ, 500 ವರ್ಷಗಳ ಹಳೆಯ ವಿವಾದವನ್ನು ಹೇಗೆ ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂಬುದನ್ನು ಭಾರತ ತೋರಿಸಿದೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
Aug 05, 2020, 3:22 pm IST
ಅಸ್ಸಾಂ: ನಮಗೆ ಇಂದು ಬಹಳ ಮುಖ್ಯವಾದ ದಿನ. ರಾಮ ಜನ್ಮಭೂಮಿಯ ರಾಮ ದೇವಾಲಯಕ್ಕಾಗಿ ಜನರು ಅನೇಕ ವರ್ಷಗಳಿಂದ ಕಾಯುತ್ತಿದ್ದರು. ಇಂದು ಆ ಕನಸು ನನಸಾಗಿದೆ. ಈ ಕನಸನ್ನು ಈಡೇರಿಸಿದ ಪ್ರಧಾನಿ ಮೋದಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಈ ದೇವಾಲಯವು ದೇಶದಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಬಲಪಡಿಸುತ್ತದೆ: ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್
Aug 05, 2020, 3:21 pm IST
ರಾಮ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬದೊಂದಿಗೆ ಬುಧವಾರ ತಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು. "ದೇವಾಲಯದ ನಿರ್ಮಾಣವನ್ನು ಸತ್ಯ, ನೈತಿಕತೆ ಮತ್ತು ಆದರ್ಶಗಳ ಅತ್ಯುನ್ನತ ಮಾನವೀಯ ಮೌಲ್ಯಗಳ ಮರು ಪಟ್ಟಾಭಿಷೇಕ ಎಂದು ಉಪಾಧ್ಯಕ್ಷರು ವಿವರಿಸಿದ್ದಾರೆ ಎಂದು ಅವರ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.
Aug 05, 2020, 3:16 pm IST
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಜನರನ್ನು ಸ್ವಾಗತಿಸಿದರು. 1992 ರ ಡಿಸೆಂಬರ್ನಲ್ಲಿ ಕಾರ್ ಸೇವಕನಾಗಿರುವುದರಿಂದ ಹಿಡಿದು ನಮ್ಮ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದ ಈಗಿನ ಕ್ಷಣವನ್ನು ನೆನೆದು ಕನಸು ನನಸಾಗಿದೆ ಎಂದು ಯಡಿಯೂರಪ್ಪ ಬರೆದಿದ್ದಾರೆ.
Aug 05, 2020, 3:13 pm IST
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಭಾರತೀಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಈ ಹೇಳಿಕೆ ಬಂದಿದೆ.
Aug 05, 2020, 2:09 pm IST
ಪ್ರಧಾನಿ ಮೋದಿ ಭಾಷಣ ಮುಕ್ತಾಯ
Aug 05, 2020, 2:08 pm IST
ಎರಡು ಗಜ ದೂರ ಪ್ರತಿಯೊಬ್ಬರೂ ಮಾಸ್ಕ್ ಧಾರಣೆ ಇದು ನಮ್ಮೆಲ್ಲರ ಮರ್ಯಾದೆಯ ಸೂತ್ರವಾಗಿದೆ-ಕೊರೊನಾ ಸಂದರ್ಭದಲ್ಲಿ ಇದೇ ರಾಮ ಸೂತ್ರವಾಗಿರಲಿ- ಮೋದಿ
Aug 05, 2020, 2:07 pm IST
ರಾಮನ ಸೂತ್ರಗಳೊಂದಿಗೆ ಆತ್ಮ ವಿಶ್ವಾಸ ಹಾಗೂ ಆತ್ಮ ನಿರ್ಭರ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಕನಸಾಗಿದೆ. ಹೀಗಾಗಿ ಇಂದು ಭಾರತ ಕಾಯುವ ಹಂತದಲ್ಲಿಲ್ಲ, ಬೆಳವಣಿಗೆಗಾಗಿ ಮುಂದಡಿ ಇಡಬೇಕಾಗಿದೆ- ಮೋದಿ
Aug 05, 2020, 2:04 pm IST
ರಾಮ ಚರಿತ್ರೆಯೇ ಗಾಂಧೀಜಿಯ ರಾಮರಾಜ್ಯ ನಿರ್ಮಾಣದ ಮೂಲವಾಗಿದೆ, ರಾಮನು ನಮಗೆ ಸಮಯದ ಜೊತೆಗೆ ನಡೆಯುವ ಹಾಗೂ ಬೆಳೆಯುವುದನ್ನು ಕಲಿಸಿದ್ದಾರೆ- ಮೋದಿ
Aug 05, 2020, 1:59 pm IST
ರಾಮ ಜನ್ಮಭೂಮಿಯಲ್ಲಿ, ರಾಮಮಂದಿರ ನಿರ್ಮಾಣ =ವಾಗುತ್ತಿರುವುದು ವಿಶ್ವದೆಲ್ಲೆಡೆ ರಾಮ ಭಕ್ತರಿಗೆ ಖುಷಿ ತಂದಿದೆ ಎನ್ನುವ ವಿಶ್ವಾಸವಿದ. ಭವಿಷ್ಯದಲ್ಲಿ ಇವರೆಲ್ಲರೂ ಅಯೋಧ್ಯೆಯೆಡೆಗೆ ಬರಲಿದ್ದಾರೆ.ಈ ಮಂದಿರವು ಎಲ್ಲಾ ಮಾನವೀಯತೆ ನಿರ್ಮಾಣಕ್ಕೂ ಪ್ರೇರಣೆ ನೀಡಲಿದೆ- ಮೋದಿ
Aug 05, 2020, 1:58 pm IST
ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥೈಲೆಂಡ್, ಇರಾನ್, ಚೀನಾ, ಶ್ರೀಲಂಕಾ ನೇಪಾಳ ಸೇರಿ ಸಾಕಷ್ಟು ದೇಶಗಳ್ಲಲಿ ರಾಮನ ವಿಭಿನ್ನ ಕಥನಗಳು ಪ್ರತೀತಿಯಲ್ಲಿದೆ-ಮೋದಿ
Aug 05, 2020, 1:56 pm IST
ಕನ್ನಡದಲ್ಲಿ ಕುಮುದೇಂದು ರಾಮಾಯಣ, ಗುರುಗೋವಿಂದರ ಗೋವಿಂದ ರಾಮಾಯಣ ಸೇರಿ ಪ್ರತಿ ಭಾಷೆಯಲ್ಲೂ ಭಿನ್ನ ರೂಪದಲ್ಲಿ ಸಿಗುತ್ತಾರೆ. ಆದರೆ ರಾಮ ಎಲ್ಲಾ ಜಾಗದಲ್ಲೂ ಇದ್ದಾರೆ, ಎಲ್ಲರ ರಾಮನಾಗಿದ್ದಾರೆ. ಹೀಗಾಗಿ ರಾಮ ಏಕತೆಯಲ್ಲಿ ಅನೇಕತೆಯ ಪ್ರತೀಕವಾಗಿದ್ದಾರೆ- ಮೋದಿ
Aug 05, 2020, 1:50 pm IST
ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮ ಸೇತುವೆ ನಿರ್ಮಿಸಲಾಗಿತ್ತು ಅದೇ ರೀತಿ ದೇಶಾದ್ಯಂತ ಲಕ್ಷಾಂತರ ಭಕ್ತರು ದಿವ್ಯತೆಯಿಂದ ನೀಡಿರುವ ಶಿಲೆಗಳು ಹಾಗೂ ಪುಣ್ಯ ಭೂಮಿಯ ಮಣ್ಣಿನ ಮೂಲಕ ಇಂದು ರಾಮ ಮಂದಿರ ನಿರ್ಮಾಣದ ಮುಂದಡಿ ಇಡಲಾಗಿದೆ.- ಮೋದಿ
Aug 05, 2020, 1:48 pm IST
ಕೊರೊನಾ ಕಾರಣದಿಂದ ಇಂದಿನ ಭೂಮಿಪೂಜೆ ಕಾರ್ಯಕ್ರಮವು ಸಾಕಷ್ಟು ಕಟ್ಟುನಿಟ್ಟುಗಳ ಮಧ್ಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶ ಬಂದಾಗಲೂ ನಾವು ಇದೇ ರೀತಿಯ ಕಟ್ಟುನಿಟ್ಟಿನ ವರ್ತನೆ ತೋರಿದ್ದೆವು. ಶಾಂತಿಯುತವಾಗಿ ಮರ್ಯಾಎಯಿಂದ ನಡೆದುಕೊಂಡಿದ್ದೆವು, ಇಂದು ರಾಷ್ಟ್ರ ಅದೇ ರೀತಿಯಾಗಿ ನಡೆದುಕೊಂಡಿದೆ, ಇದು ಮರ್ಯಾದಾ ಪುರುಷೋತ್ತಮ ರಾಮನಿಗೆ ಸಲ್ಲಿಸಿದ ಗೌರವ-ಮೋದಿ
Aug 05, 2020, 1:47 pm IST
ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಯು ದೇಶ ಜೋಡಣೆಯ ವಿಚಾರವಾಗಿದೆ. ಮಂದಿರವು ಏಕತೆಯ ಪ್ರತೀಕವಾಗಿರಲಿದೆ-ಮೋದಿ
Aug 05, 2020, 1:45 pm IST
ರಾಮ ಮಂದಿರವು ಆಧುನಿಕತೆ, ರಾಷ್ಟ್ರೀಯತೆ, ಕೋಟ್ಯಂತರ ಜನರ ಸಂಕಲ್ಪದ ಪ್ರತೀಕವಾಗಿರಲಿದೆ. ಭವಿಷ್ಯದ ಪೀಳಿಗೆಗೆ ನಿಷ್ಠೆ, ಶ್ರದ್ಧೆ, ಸಂಕಲ್ಪದ ಪ್ರತೀಕವಾಗಿರಲಿದೆ.ಮಂದಿರದ ನಿರ್ಮಾಣ ಬಳಿಕ ಅಯೋಧ್ಯೆಯ ಚಿತ್ರಣವೇ ಬದಲಾಗಲಿದೆ. ಇಡೀ ವಿಶ್ವದ ಜನರೇ ಇತ್ತ ನೋಡಲಿದ್ದಾರೆ-ಮೋದಿ
Aug 05, 2020, 1:41 pm IST
ಮಂದಿರ ಹೋರಾಟಕ್ಕಾಗಿ ತ್ಯಾಗ ಮಾಡಿದ ಪ್ರತಿ ವ್ಯಕ್ತಿಗೂ ದೇಶದ 130 ಕೋಟಿ ಜನರ ಪರವಾಗಿ ಕೈ ಮುಗಿದು ನಾನು ನಮಸ್ಕರಿಸುತ್ತೇನೆ. ಅವರ ತ್ಯಾಗವನ್ನು ಮರೆಯಲಾಗದು-ಮೋದಿ
Aug 05, 2020, 1:41 pm IST
ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ಜನ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು.ಅದೇ ರೀತಿ ರಾಮಮಂದಿರ ನಿರ್ಮಾಣಕ್ಕಾಗಿ ಶತಮಾನಗಳ ಕಾಲ ಸಾಕಷ್ಟು ಪೀಳಿಗೆಯ ಜನ ನಿರಂತರ ಹೋರಾಟ ನಡೆಸಿದ್ದರು. ಇಂದು ಆ ತ್ಯಾಗ-ಸಂಕಲ್ಪದ ಪ್ರತೀಕದ ದಿನವಾಗಿದೆ, ಮಂದಿರ ಹೋರಾಟದಲ್ಲಿ ಅರ್ಪಣೆ, ಸಂಘರ್ಷ, ಸಂಕಲ್ಪ ಎಲ್ಲವೂ ಇತ್ತು. ಅವರೆಲ್ಲದರ ಪರಿಣಾಮವಾಗಿ ಇಂದು ಕನಸು ನನಸಾಗುತ್ತಿದೆ.-ಮೋದಿ
ಶತಮಾನಗಳ ಕಾಲ ಟೆಂಟ್ನಲ್ಲಿದ್ದ ರಾಮಲಲ್ಲಾ ವಿಗ್ರಹಕ್ಕೆ ಇನ್ನು ಭವ್ಯ ಮಂದಿರ ದೊರೆಯಲಿದೆ- ಮೋದಿ
Aug 05, 2020, 1:37 pm IST
ಸರಯೂ ನದಿಯ ತಟದಲ್ಲಿ ಇಂದು ಭಾರತ ಇತಿಹಾಸದಲ್ಲಿ ಸ್ವರ್ಣ ಅಧ್ಯಾಯ ತೆರೆದಿದೆ. ಕೋಟ್ಯಂತರ ರಾಮ ಭಕ್ತರ ನಿರೀಕ್ಷೆ ನಿಜವಾಗುತ್ತಿದೆ. ಇಂದು ಇಡೀ ಭಾರತವೇ ರಾಮಮಯವಾಗಿದೆ. ಪ್ರತಿ ಭಾರತೀಯನ ಮನಸ್ಸಿನಲ್ಲಿ ದೀಪ ಬೆಳಗುತ್ತಿದ. ಇಡೀ ದೇಶ ಭಾವುಕವಾಗಿದೆ, ಶತಮಾನದ ನಿರೀಕ್ಷೆ ಇಂದು ಅಂತ್ಯಗೊಂಡಿದೆ- ಮೋದಿ
Aug 05, 2020, 1:33 pm IST
ಸೀತಾರಾಮರ ಜಯಘೋಷದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
Aug 05, 2020, 1:33 pm IST
ಸಭೆಯನ್ನುದ್ದೇಶಿಸಿ ಮೋದಿ ಭಾಷಣ
Aug 05, 2020, 1:32 pm IST
ಕರ್ನಾಟಕದಲ್ಲಿ ಕೇವಲ ಆರು ತಿಂಗಳಿನಲ್ಲಿ ನಿರ್ಮಾಣ ಮಾಡಿರುವ ಕೋದಂಡರಾಮ ವಿಗ್ರಹವನ್ನು ಪ್ರಧಾನಿಗೆ ಅರ್ಪಿಸಿದ ಯೋಗಿ ಆದಿತ್ಯನಾಥ್
ನಮ್ಮ ಬಳಿ ಎಲ್ಲರೂ ರಾಮ ಮಂದಿರ ನಿರ್ಮಾಣ ಯಾವಾಗ ಎಂದು ಪ್ರಶ್ನಿಸುತ್ತಿದ್ದರು, ನಮಗೂ ಉತ್ತರ ಕೊಟ್ಟು ಸಾಕಾಗಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಭಾರತದಲ್ಲಿ ಮೋದಿ ಇದ್ದಾಗಲೂ ನಿರ್ಮಾಣವಾಗದಿದ್ದರೆ ಇನ್ಯಾವಾಗ ಎಂದು ನಾವೂ ಅಂದುಕೊಂಡಿದ್ದವು, ಆದರೆ ಅದು ಈಗ ಆರಂಭವಾಗಿದೆ-ನೃತ್ಯ ಗೋಪಾಲ ದಾಸ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಅಧ್ಯಕ್ಷ
Aug 05, 2020, 1:18 pm IST
ಆತ್ಮ ವಿಶ್ವಾಸದ ಭಾರತ, ಆತ್ಮ ನಿರ್ಭರದ ಭಾರತ ನಿರ್ಮಾಣದ ಆರಂಭಿಕ ಹೆಜ್ಜೆ ಮಂದಿರದ ನಿರ್ಮಾಣವಾಗಿದೆ. ಈ ಕ್ಷಣ ನೋಡಲು ವಿಎಚ್ಪಿಯ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಸೇರಿ ಹಿರಿಯರು ಇದ್ದರೆ ಇನ್ನಷ್ಟು ಖುಷಿ ಕೊಡುತ್ತಿತ್ತು-ಮೋಹನ್ ಭಾಗವತ್
So many people had sacrificed, they couldn't be here physically. There are some who couldn't come here, Advani ji must be at his home watching this. There are some who should've come but couldn't be invited because of the situation (COVID-19): Mohan Bhagwat, RSS Chief. #RamMandirpic.twitter.com/CLIcUhPAFt
30 ವರ್ಷಗಳ ಹಿಂದೆ ಹೋರಾಟ ಆರಂಭಿಸಿದಾಗ ಸುದೀರ್ಘ ಹೋರಾಟದ ನಿರೀಕ್ಷೆ ಇತ್ತು. ಈ ಹೋರಾಟ ಆರಂಭಿಸಿದ ಅಡ್ವಾಣಿ ಸೇರಿ ಸಾಕಷ್ಟು ಹೊರಿಯರು ಇಂದು ಬರಲಾಗಲಿಲ್ಲ. ಇಂದಿನ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ- ಮೋಹನ್ ಭಾಗವತ್
READ MORE
6:19 AM, 5 Aug
ಈ ದಿನ ಮೂರು ಹಂತಗಳಲ್ಲಿ ಪೂಜೆಯು ನೆರವೇರಲಿದೆ. ಭೂಮಿ ಪೂಜೆಯು ಧನಿಷ್ಠ ನಕ್ಷತ್ರದಲ್ಲಿ ಆರಂಭವಾಗಿ ಶತಭಿಷ ನಕ್ಷತ್ರದಲ್ಲಿ ಕೊನೆಗೊಳ್ಳಲಿದೆ. ಈ ನಕ್ಷತ್ರದಲ್ಲಿ ಭೂಮಿ ಪೂಜೆಗೆ ಕಾಶಿಯಿಂದ ಪಂಡಿತರು, ವಿದ್ವಾಂಸರು ಆಗಮಿಸಲಿದ್ದಾರೆ.
6:32 AM, 5 Aug
ಈಗಾಗಲೇ ಭೂಮಿಪೂಜೆಗೆಂದು ಆಯೋಜಸಿದ್ದ ಆಗಸ್ಟ್ 3 ಹಾಗೂ ಆಗಸ್ಟ 4ರ ಪೂಜಾ ಕಾರ್ಯಕ್ರಮಗಳು ಮುಗಿದಿವೆ. ಇನ್ನು ಮುಖ್ಯ ಭೂಮಿ ಪೂಜೆಯ ವಿಶೇಷತೆಗಾಗಿ ಕಾಯಬೇಕಿದೆ. ಮಧ್ಯಾಹ್ನ 12.30ಕ್ಕೆ ಭೂಮಿ ಪೂಜ ಭೂಮಿ ಪೂಜೆಯ ಕ್ಷಣಕ್ಷಣದ ಮಾಹಿತಿ ಒನ್ ಇಂಡಿಯಾದಲ್ಲಿ ಲಭ್ಯವಾಗಲಿದೆ.
6:58 AM, 5 Aug
ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ ಅಯೋಧ್ಯೆಯನ್ನು ಅಲಂಕರಿಸಲಾಗಿದೆ. ಇದು ಸರಯು ಘಾಟ್ನ ದೃಶ್ಯಗಳು.
ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ಶುಭ ಕೋರಿದ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್.
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸೋಣ.#Ayodhyapic.twitter.com/a5Np26SyKG
ಭಾರತಕ್ಕೆ ಇಂದು ಐತಿಹಾಸಿಕ ದಿನ. ಈ ದಿನ ಬಹಳ ವರ್ಷಗಳ ಕಾಲ ನೆನಪಿನಲ್ಲಿ ಉಳಿಯಲಿದೆ. ರಾಮ ಮಂದಿರ ನಿರ್ಮಾಣದಿಂದ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ ಎಂಬ ನಂಬಿಕೆ ನನಗಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
Today is a historic day. This day will be remembered for long. I am confident that with construction of Ram Temple, 'Ram Rajya' will be established in India: Yog Guru Ramdev at Hanuman Garhi temple in #Ayodhyapic.twitter.com/ftYeZ0s5LY
ಅಯೋಧ್ಯೆಗೆ ಪ್ರಧಾನಿ ಭೇಟಿ ನೀಡಿರುವುದು ಹೆಮ್ಮೆಯ ಕ್ಷಣ. ನಾವು ಅವರಿಗೆ ಬೆಳ್ಳಿ ಕಿರೀಟ ಮತ್ತು ಶ್ರೀರಾಮನ ಹೆಸರಿನ ಮುದ್ರಿತ ಶಾಲು ಹೊದಿಸಿ ಗೌರವಿಸುತ್ತೇವೆ - ಶ್ರೀ ಗದ್ದೀನ್ಶೀನ್ ಪ್ರೇಮದಾಸ್ ಜಿ ಮಹಾರಾಜ್, ಹನುಮಾನ್ ಗರ್ಹಿ ಮುಖ್ಯ ಅರ್ಚಕ
PM's visit to Ayodhya is a proud moment. We'll honour him with a headgear, a silver crown & a stole with name of Lord Ram printed. We also hope that he rings the 3.5 quintal bell and proceed towards Ram Janmabhoomi: Sri Gaddinsheen Premdas ji Maharaj, head priest of Hanuman Garhi pic.twitter.com/JG1TxsoFlg
ಮಂಡ್ಯ: ಅಯೋಧ್ಯೆಯಲ್ಲಿ ರಾಮಮಂದಿರ ಗುದ್ದಲಿ ಪೂಜೆ ಹಿನ್ನಲೆಯಲ್ಲಿ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ.
9:08 AM, 5 Aug
ಬೆಳಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜಾ ಕಾರ್ಯಕ್ರಮ ಹಿನ್ನೆಲೆ, ಆಗಸ್ಟ್ 5ರ ಬೆಳಿಗ್ಗೆ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧಾಜ್ಞೆ ಜಾರಿ. ಬೆಳಗಾವಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ. ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ.
9:29 AM, 5 Aug
ಕೆಲವೇ ಕ್ಷಣಗಳಲ್ಲಿ ದೆಹಲಿಯಿಂದ ಲಕ್ನೌಗೆ ಪ್ರಯಾಣ ಆರಂಭಿಸಲಿದ್ದಾರೆ ಪ್ರಧಾನಿ ಮೋದಿ
9:31 AM, 5 Aug
ರಾಮ ಮಂದಿರ ಭೂಮಿ ಪೂಜೆಗೆ ಅಯೋಧ್ಯೆಯಲ್ಲಿ ಎಲ್ಲ ಸಿದ್ಧತೆ ಆಗಿದೆ
Inside the venue of the foundation laying ceremony of #RamTemple in #Ayodhya.
PM Narendra Modi, RSS Chief Mohan Bhagwat, Ram Mandir Trust Chief Nritya Gopaldas, Uttar Pradesh Governor Anandiben Patel and CM Yogi Adityanath will be on the stage for the event. pic.twitter.com/6yVaRQpQoo
ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ಯುಎಸ್ನಲ್ಲಿ ಭಾರತೀಯರ ಸಂಭ್ರಮಾಚರಣೆ
USA: Members of the Indian community gathered outside the Capitol Hill in Washington DC to celebrate the foundation laying ceremony of #RamTemple in #Ayodhyapic.twitter.com/NofEWuM3E5
ರಾಮ ಮಂದಿರ ನಿರ್ಮಾಣದ ಮೂಲಕ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸವಿದೆ- ಯೋಗ ಗುರು ಬಾಬಾ ರಾಮ್ದೇವ್
10:20 AM, 5 Aug
ಭೂಮಿ ಪೂಜೆಗೆ ಆಹ್ವಾನಿಸಲಾದ ಪ್ರತಿಯೊಬ್ಬ ಗಣ್ಯರಿಗೂ ಬೆಳ್ಳಿ ನಾಣ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಬೆಳ್ಳಿ ನಾಣ್ಯದ ಒಂದು ಬದಿಯಲ್ಲಿ ರಾಮ ದರ್ಬಾರ್ ಚಿತ್ರವನ್ನು ಹೊಂದಿದೆ.
10:26 AM, 5 Aug
ಉತ್ತರಪ್ರದೇಶ: ಅಯೋಧ್ಯೆ ಪೂಮಿ ಪೂಜೆಗೆ ಧಾರ್ಮಿಕ ಮುಖಂಡರುಗಳು ಆಗಮಿಸಿದ್ದಾರೆ
Uttar Pradesh: Religious leaders who have arrived at #Ayodhya for 'Bhoomi Poojan' say, "Today marks the end of a long struggle. It will be a historical day."#RamMandirpic.twitter.com/EfIG8HemG1
ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಿಂದ ಲಕ್ನೋ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.
11:10 AM, 5 Aug
ಮಂದಿರದ ನನ್ನ ಕನಸು ನನಸಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ಕೆ ಅಡ್ವಾಣಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸದ ದಿನವು ಕೇವಲ ನನಗಷ್ಟೇ ಅಲ್ಲ ಇಡೀ ದೇಶಕ್ಕೇ ಭಾವನಾತ್ಮಕ ಮತ್ತು ಐತಿಹಾಸಿಕ ದಿನವಾಗಿದೆ.
11:14 AM, 5 Aug
ಅಯೋಧ್ಯೆಯು ಎಲ್ಲರನ್ನು ಒಗ್ಗೂಡಿಸಿದೆ. ಇನ್ಯಾವುದೇ ಬೇಧಭಾವ ಉಳಿದಿಲ್ಲ: ಬಿಜೆಪಿ ನಾಯಕಿ ಉಮಾ ಭಾರತಿ
#Ayodhya ne sabhi ko ek kar diya hai....Ab yeh desh poori duniya mein apna matha uncha utha kar kahega ki yahan koi bhed-bhav nahi hai: BJP leader Uma Bharti at Ram Janambhoomi site pic.twitter.com/NfRLqu2flD
ಅಯೋಧ್ಯೆ: ಪತಂಜಲಿ ವಿದ್ಯಾಪೀಠದಿಂದ ಅಯೋಧ್ಯೆಯಲ್ಲಿ ಗುರುಕುಲವನ್ನು ನಿರ್ಮಿಸಲಾಗುತ್ತದೆ. ದೇಶ, ವಿದೇಶದಿಂದ ವಿದ್ಯಾರ್ಥಿಗಳು ಬಂದು ಅಲ್ಲಿ ವಿದ್ಯಾಭ್ಯಾಸ ನಡೆಸಬಹುದಾಗಿದೆ-ಬಾಬಾ ರಾಮ್ದೇವ್
India's biggest fortune that we're witnessing #RamMandir event...To establish 'ram rajya' in this nation, Patanjali Yogpeeth will make a grand 'gurukul' in #Ayodhya. People from all over the world will be able to study Ved, Ayurved here: Yog Guru Ramdev at Ram Janambhoomi site pic.twitter.com/qygs6AlJau
ರಾಮಮಂದಿರ ನಿರ್ಮಾಣ ಸಾಂಸ್ಕೃತಿಕ ಪರಂಪರೆಯ ಬೆಸುಗೆ ಹಾಗೂ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಲಿ ಎಂಬ ಆಶಯ ನನ್ನದು- ಎಚ್ಡಿ ಕುಮಾರಸ್ವಾಮಿ
11:26 AM, 5 Aug
ಅಯೋಧ್ಯೆಯಲ್ಲಿ ಮಂದಿರವೊಂದನ್ನು ಕಟ್ಟಿಕೊಳ್ಳಲು ಭಾರತೀಯರಾದ ನಾವು ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದ್ದು, ಅದು ಕೆಲವರಿಗೆ ರಾಜಕೀಯ ದಾಳವಾಗಿದ್ದು, ಅಧಿಕಾರಕ್ಕೇರಲು ಏಣಿಯಾಗಿದ್ದು ನಮ್ಮ ಕೆಟ್ಟ ಘಳಿಗೆಗಳಲ್ಲಿ ಒಂದು. ರಾಮನ ಆದರ್ಶಗಳಿಗೆ ಈ ದೇಗುಲವು ಸಾಮರಸ್ಯದ ಸಂಕೇತವಾಗಿ ಉಳಿಯಲಿ. ಈ ಮೂಲಕ ಸ್ವಾರ್ಥ ನಶಿಸಲಿ. ಎಲ್ಲರಿಗೂ ಶುಭ ತರಲಿ.-ಎಚ್ಡಿ ಕುಮಾರಸ್ವಾಮಿ
11:28 AM, 5 Aug
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ-ಎಚ್ಡಿ ಕುಮಾರಸ್ವಾಮಿ
11:37 AM, 5 Aug
ಭೂಮಿ ಪೂಜೆ ಕಾರ್ಯ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿದ್ದಾರೆ.
Ayodhya Ram Mandir Bhumi Pujan Live Updates, News in Kannada: Check out the latest breaking news, live updates, images, videos about ram mandir bhumi pujan ceremony.