ಬಿಹಾರದಲ್ಲಿ JNU ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಮೇಲೆ ದಾಳಿ
ಪಾಟ್ನಾ, ಅಕ್ಟೋಬರ್ 17: ಜವಹರಲಾಲ್ ನೆಹ್ರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಅವರಿದ್ದ ವಾಹನಗಳ ಮೇಲೆ ದಅಳಿ ನಡೆದಿದ್ದು ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಂಗಳವಾರ ಬಿಹಾರದ ಬೆಗುಸಾರೈ ಜಿಲ್ಲೆಯ ದಾಹಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಾಳಿ ಮಾಡಿದ್ದು ಯಾರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಬಿಹಾರ ಡಿಸಿಎಂ ಸುಶೀಲ್ ಮೋದಿ 'ಪಿತೃ ಪಕ್ಷ' ಹೇಳಿಕೆಗೆ ಹಿಗ್ಗಾಮುಗ್ಗಾ ತರಾಟೆ
ಸೋಮವಾರವಷ್ಟೇ ಪಾಟ್ನಾದ ಏಮ್ಸ್(All India Institute of Medical Sciences ) ವೈದ್ಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಕನ್ನಯ್ಯ ಕುಮಾರ್ ಅವರ ವಿರುದ್ಧ ಇಲ್ಲಿನ ಪುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಮರುದಿನವೇ ಈ ಘಟನೆ ನಡೆದಿದೆ.
ಶತ್ರುಘ್ನ ಸಿನ್ಹಾಗೆ ತೀವ್ರ ಮುಖಭಂಗ: ಈ ಬಾರಿ ಬಿಜೆಪಿ ಟಿಕೆಟ್ ಸಿಕ್ಕೋಲ್ಲ?
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ(AISF) ನಾಯಕರೂ ಆಗಿರುವ ಕನ್ನಯ್ಯ ಕುಮಾರ್ ತಮ್ಮ ಬೆಂಬಲಿಗರೊಂದಿಗೆ ಏಮ್ಸ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರದ AISF ಅಧ್ಯಕ್ಷ ಸುಶೀಲ್ ಕುಮಾರ್ ನೋಡುವುದಕ್ಕೆದು ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಏಮ್ಸ್ ವೈದ್ಯರು ಅವರನ್ನು ತಡೆದಿದ್ದರು.
ಏಮ್ಸ್ಸ ವೈದ್ಯರ ಈ ಕ್ರಮವನ್ನು ಖಂಡಿಸಿ, ಕಿರಿಯ ವೈದ್ಯರ ಮತ್ತು AISF ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದಾಗಿ ಕೋಪಗೊಂಡ ಕಿರಿಯ ವೈದ್ಯರು ತಾವು ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರು. ನಂತರ ಹಲವರ ಮನವು ಮೇರೆಗೆ ಕರ್ತವ್ಯಕ್ಕೆ ಹಾಜರಾದರು.
ಜೆಡಿಯುವಿನಲ್ಲಿ ನಂ.2 ಸ್ಥಾನಕ್ಕೇರಿದ ರಾಜಕೀಯ ತಂತ್ರಜ್ಞ ಪ್ರಶಾಂತ್
ಈ ಘಟನೆಯ ನಂತರ ಕನ್ನಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.
2019 ರ ಲೋಕಸಭಾ ಚುನಾವಣೆಯಲಿ ಸಿಪಿಎಂ ಅಭ್ಯರ್ಥಿಯಾಗಿ ಬೆಗುಸಾರೈ ಲೋಕಸಭಾ ಕ್ಷೇತ್ರದಿಂದ ಕನ್ನಯ್ಯ ಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.