ಆಸ್ತಿ ವೃದ್ಧಿಯಲ್ಲಿ ಸಂಸದರಿಗಿಂತ ಶಾಸಕರ ಕೈ ಮೇಲು!
ಬೆಂಗಳೂರು, ನ. 4 : ಭಾರತದಲ್ಲಿ ಸಂಸದರಿಗಿಂತ ಶಾಸಕರ ಆಸ್ತಿಯೇ ಐದು ವರ್ಷಗಳ ಅವಧಿಯಲ್ಲಿ ವೇಗವಾಗಿ ಹೆಚ್ಚಾಗಿದೆ. ಎಡಿಆರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಸಂಸದರಿಗೆ ಹೋಲಿಸಿದರೆ ಶಾಸಕರ ಕ್ಷೇತ್ರ ವ್ಯಾಪ್ತಿ ಕಡಿಮೆ ಇರಬಹುದು. ಆದರೆ, ಸ್ಥಳೀಯ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೇ ಹೆಚ್ಚಿರುವುದರಿಂದ ಶಾಸಕರಿಗೇ ಜಾಸ್ತಿ ಪ್ರಾಮುಖ್ಯತೆ ಸಿಗುತ್ತದೆ. ಆದ್ದರಿಂದ ಸಹಜವಾಗಿಯೇ ಶಾಸಕರ ಆಸ್ತಿ ಮೌಲ್ಯದಲ್ಲಿ ದಿಢೀರ್ ಏರಿಕೆ ಕಂಡುಬರುತ್ತಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
2014ರ ಲೋಕಸಭೆ ಚುನಾವಣೆಯಲ್ಲಿ 168 ಸಂಸದರು ಪುನರಾಯ್ಕೆಯಾಗಿದ್ದಾರೆ. ಅವರ ಆಸ್ತಿಯಲ್ಲಿ 2009ರಲ್ಲಿ ಘೋಷಿಸಿದ್ದಕ್ಕಿಂತ ಶೇ. 137ರಷ್ಟು ಏರಿಕೆ ಉಂಟಾಗಿದೆ. ಆದರೆ, ಕೆಲವು ರಾಜ್ಯಗಳ ಶಾಸಕರ ಆಸ್ತಿಯಲ್ಲಿ ಇದಕ್ಕಿಂತ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ. ಪುನರಾಯ್ಕೆಗೊಂಡ ಶಾಸಕರ ಆಸ್ತಿ ಮಧ್ಯಪ್ರದೇಶದಲ್ಲಿ ಶೇ. 290ರಷ್ಟು, ಹರ್ಯಾಣದಲ್ಲಿ ಶೇ. 245ರಷ್ಟು, ಮಹಾರಾಷ್ಟ್ರದಲ್ಲಿ ಶೇ. 157ರಷ್ಟು ಹಾಗೂ ಛತ್ತೀಸ್ ಗಡದಲ್ಲಿ ಶೇ. 147ರಷ್ಟು ಏರಿಕೆ ಕಂಡುಬಂದಿದೆ.

ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪುನರಾಯ್ಕೆಗೊಂಡ ಶಾಸಕರ ಆಸ್ತಿ ಮೊತ್ತ ಇಡೀ ದೇಶದಲ್ಲಿ ಪುನರಾಯ್ಕೆಗೊಂಡ ಸಂಸದರ ಆಸ್ತಿಗೆ ಸಮನಾಗಿರುವುದು ಗಮನಾರ್ಹ ವಿಷಯ. ಈ ಎಲ್ಲ ರಾಜ್ಯಗಳಲ್ಲಿ ಕಳೆದ 10 ತಿಂಗಳಲ್ಲಿ ಚುನಾವಣೆ ನಡೆದಿದೆ ಎಂಬುದು ವಿಶೇಷ.
ಸಂಸದರ ಆಸ್ತಿ ಶೇ. ಶೇ. 786ರಷ್ಟು ಏರಿಕೆ: ಆದರೆ, ಬಿಜೆಪಿಯಿಂದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಪುನರಾಯ್ಕೆಗೊಂಡಿರುವ ಸಂಸದ ಪಿ.ಸಿ. ಮೋಹನ್ ಅವರ ಆಸ್ತಿ 2009ರಲ್ಲಿ ಕೇವಲ 5 ಕೋಟಿ ರೂ. ಇದ್ದದ್ದು, 2014ರಲ್ಲಿ 47 ಕೋಟಿ ರೂ. ಗಳಿಗೆ ಏರಿದೆ. ಈ ಮೂಲಕ ಅವರ ಆಸ್ತಿ ಶೇ. 786ರಷ್ಟು ಏರಿಕೆ ಕಂಡಿದೆ. ಅನೇಕ ಸಂಸದರ ಆಸ್ತಿಯಲ್ಲಿ ಶೇ. 200ರಷ್ಟು ಏರಿಕೆಯಾಗಿದೆ ಎಂದು ಕೂಡ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications