ಗೆದ್ದ ಖುಷಿಗೆ ಜಂಬೂ ಸವಾರಿ ಮಾಡಲು ಹೋಗಿ ಬಿದ್ದ ಉಪಸಭಾಪತಿ: ವೈರಲ್ ವಿಡಿಯೋ
Recommended Video

ಕರೀಂಗಂಜ್ (ಅಸ್ಸಾಂ), ಅಕ್ಟೋಬರ್ 8: ಒಂದು ಕ್ಷೇತ್ರಕ್ಕೆ ಅಲ್ಲಿನ ಜನಪ್ರತಿನಿಧಿ ಭೇಟಿ ನೀಡಿದಾಗ ಕಾರ್ಯಕರ್ತರು ವಿಶೇಷವಾಗಿ ಸ್ವಾಗತಿಸುವುದು ಸಹಜ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರತಬರಿ ಕ್ಷೇತ್ರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರು ತಮ್ಮ ಶಾಸಕ ವಿಧಾನಸಭೆಯ ನೂತನ ಉಪಸಭಾಪತಿಯಾಗಿ ಆಯ್ಕೆಯಾದ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಆಚರಿಸಲು ತಯಾರಿ ನಡೆಸಿದ್ದರು. ಆದರೆ, ಅದು ತಮಾಷೆಯ ಪ್ರಹಸನವಾಗಿ ಮಾರ್ಪಟ್ಟಿತು.
ಬಿಜೆಪಿ ಶಾಸಕ ಕೃಪಾನಾಥ್ ಮಲ್ಲಾ, ಅಸ್ಸಾಂ ವಿಧಾನಸಭೆಯ ನೂತನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ತವರು ಕ್ಷೇತ್ರಕ್ಕೆ ಮರಳಿದಾಗ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಕೋರಿದರು. ಅವರನ್ನು ಆನೆಯ ಮೇಲೆ ಕೂರಿಸಿ ಕರೆತಂದರು.
ಕಾರ್ಯಕರ್ತರ ಕೂಗಾಟ, ಹರ್ಷೋದ್ಗಾರ ಕಂಡು ಬೆಚ್ಚಿಬಿದ್ದ ಆನೆ ಅಡ್ಡಾದಿಡ್ಡಿ ಓಡಲು ಆರಂಭಿಸಿತು. ಮಾವುತ ಜತೆಗಿದ್ದರೂ ನಿಯಂತ್ರಣ ಸಾಧಿಸುವುದು ಮಲ್ಲಾ ಅವರಿಗೆ ಸಾಧ್ಯವಾಗಲಿಲ್ಲ. ಮಾವುತನನ್ನು ಹಿಡಿದುಕೊಂಡಿದ್ದ ಅವರು, ಆತನ ಸಮೇತ ಕೆಳಕ್ಕುರುಳಿದರು. ಇನ್ನಷ್ಟು ಬೆದರಿದ ಆನೆ ಓಡತೊಡಗಿತು. ಅದೃಷ್ಟವಶಾತ್ ಮಲ್ಲಾ ಮತ್ತು ಮಾವುತ ಇಬ್ಬರೂ ಅಪಾಯದಿಂದ ಪಾರಾದರು.

ಆನೆಯ ಬೆನ್ನ ಮೇಲೆ ಹೊದಿಸಿದ್ದ ಮೆತ್ತನೆಯ ಬಟ್ಟೆಗಳು ಅವರೊಂದಿಗೆ ನೆಲಕಚ್ಚಿದವು. ಸಾವರಿಸಿಕೊಂಡ ಮಾವುತ ಕೂಡಲೇ ಎದ್ದು ಆನೆಯನ್ನು ನಿಯಂತ್ರಣಕ್ಕೆ ತರಲು ಅದರ ಬೆನ್ನಟ್ಟಿದರೆ, ಇತ್ತ ಕಾರ್ಯಕರ್ತರು ತಮ್ಮ ನಾಯಕನ ಕತೆ ಏನಾಯಿತು ಎಂದು ನೋಡಲು ಅವರತ್ತ ಓಡಿದರು.
#WATCH: Newly-elected deputy speaker of Assam assembly Kripanath Mallah falls off an elephant. He was being welcomed by his supporters in
— ANI (@ANI) 8 October 2018
Ratabari, his own constituency, in Karimganj district. The deputy speaker was unhurt in the incident. (06.10.2018) #Assam pic.twitter.com/2UYHkS7zvx
ಬಿದ್ದ ಗಾಬರಿಯಿಂದ ಕೂಡಲೇ ಚೇತರಿಸಿಕೊಂಡ ಮಲ್ಲಾ, ಜೋರಾಗಿ ನಗತೊಡಗಿದರು. ಅದನ್ನು ಕಂಡು ಉಳಿದ ಕಾರ್ಯಕರ್ತರಲ್ಲಿಯೂ ನಗು ಮೂಡಿತು. ಜಂಬೂ ಸವಾರಿಯ ಪುಳಕ ಪಡೆಯುವ ಉತ್ಸಾಹದಲ್ಲಿದ್ದ ನೂತನ ಉಪಸಭಾಪತಿಗಳು ಕೊನೆಗೆ ತೆರೆದ ಜೀಪ್ನಲ್ಲಿ ತೆರಳಿದರು.
ಅಕ್ಟೋಬರ್ 5ರಂದು (ಶುಕ್ರವಾರ) ಮಲ್ಲಾ ಅವರು ವಿಧಾನಸಭೆಯ ನೂತನ ಉಪಸಭಾಪತಿಯಾಗಿ ನೇಮಕವಾಗಿದ್ದರು. ಅವರ ಆಯ್ಕೆಯ ಬಳಿಕ ಕಲಾಪ ಮುಂದೂಡಿಕೆಯಾಗಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications