ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಸೋರಿಕೆಗೆ ಆಧಾರ್ ಪ್ರಾಧಿಕಾರದವರನ್ನು ಬಂಧಿಸಿ: ಎಡ್ವರ್ಡ್ ಸ್ನೂಡೆನ್

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 9: "ಆಧಾರ್ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದವರನ್ನು ಬಂಧಿಸಿ; ಪತ್ರಕರ್ತರನ್ನಲ್ಲ," ಎಂದು ಅಮೆರಿಕಾ ಮೂಲದ ಖ್ಯಾತ ವಿಷಲ್ ಬ್ಲೋವರ್ ಎಡ್ವರ್ಡ್ ಸ್ನೂಡೆನ್ ಕಿಡಿಕಾರಿದ್ದಾರೆ.

ಆಧಾರ್ ಮಾಹಿತಿ ಸೋರಿಕೆಯ ಬಗ್ಗೆ ತನಿಖಾ ವರದಿ ಪ್ರಕಟಿಸಿದ್ದ 'ದಿ ಟ್ರಿಬ್ಯೂನ್' ಪತ್ರಿಕೆ ಹಾಗೂ ಪತ್ರಿಕೆಯ ವರದಿಗಾರ್ತಿ ರಚ್ನಾ ಖೈರಾ ವಿರುದ್ಧ 'ಯುಐಡಿಎಐ' (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಎಫ್ಐಆರ್ ದಾಖಲಿಸಿತ್ತು.

ಉಳಿತಾಯ ಯೋಜನೆ ಜತೆ ಆಧಾರ್ ಜೋಡಣೆಗೆ ಹೊಸ ಡೆಡ್ ಲೈನ್ಉಳಿತಾಯ ಯೋಜನೆ ಜತೆ ಆಧಾರ್ ಜೋಡಣೆಗೆ ಹೊಸ ಡೆಡ್ ಲೈನ್

ಈ ಬಗ್ಗೆ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗಿದ್ದು ಇದಕ್ಕೆ ಎಡ್ವರ್ಡ್ ಸ್ನೂಡೆನ್ ಕೂಡ ಧ್ವನಿಗೂಡಿಸಿದ್ದಾರೆ.

Arrest Aadhaar authorities, not journalist: Edward Snowden

"ಆಧಾರ್ ಮಾಹಿತಿ ಸೋರಿಕೆಯನ್ನು ಬಹಿರಂಗಪಡಿಸಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕು; ಅವರ ವಿರುದ್ಧ ತನಿಖೆ ಮಾಡುವುದಲ್ಲ. ನ್ಯಾಯದ ಬಗ್ಗೆ ನಿಜವಾಗಿಯೂ ಸರಕಾರಕ್ಕೆ ಕಾಳಜಿ ಇದ್ದರೆ ಬಿಲಯನ್ ಭಾರತೀಯರ ಖಾಸಗಿತನ ಸರ್ವನಾಶವಾಗುವುದರ ವಿರುದ್ಧ ಪಾಲಿಸಿಗಳನ್ನು ಸುಧಾರಣೆ ಮಾಡಬೇಕು. ಇದಕ್ಕೆ ಕಾರಣಕರ್ತರ಻ದವರನ್ನು ಬಂಧಿಸಬೇಕಾ? ಅವರ ಹೆಸರು ಯುಐಡಿಎಐ," ಎಂದು ಟ್ವೀಟ್ ಮಾಡಿದ್ದಾರೆ.

English summary
"The journalists exposing the Aadhaar breach deserve an award, not an investigation. Instead of journalist government must arrest Aadhaar authorities," said American whistleblower Edward Snowden in his tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X