ನನ್ನನ್ನು ಸೇನೆಯೇ ಬದುಕಿಸಿತು: ಭಯೋತ್ಪಾದಕ ಪಶ್ಚಾತ್ತಾಪದ ನುಡಿ
ನವದೆಹಲಿ, ಮೇ 10: "ಭಾರತೀಯ ಸೈನಿಕರು ನನ್ನನ್ನು ಸುಲಭವಾಗಿ ಸಾಯಿಸಬಹುದಿತ್ತು. ಆದರೆ ಅವರು ನನ್ನ ಪ್ರಾಣವನ್ನು ಉಳಿಸಿದರು" ಎಂದು ಬಂಧಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ಭಯೋತ್ಪಾದಕನೊಬ್ಬ ಹೇಳಿದ್ದಾನೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಬಂಧಿಸಿದ ಐಜಾಜ್ ಗುರ್ಜಿ ಎಂಬ ಭಯೋತ್ಪಾದಕನ ತಪ್ಪೊಪ್ಪಿಗೆ ವಿಡಿಯೋವನ್ನು ಭಾರತೀ ಸೇನೆ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಆತನ ಹಲವು ಆಘಾತಕಾರಿ ಸತ್ಯಗಳನ್ನು ಬಯಲಿಗೆಳೆದಿದ್ದಾನೆ.
ಮೂವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ
"ನಮಗೆ ಕಾಶ್ಮೀರಿ ಕಣಿವೆಯಲ್ಲಿ ಹಿಂಸೆ ಎಬ್ಬಿಸುವಂತೆ ಪಾಕಿಸ್ತಾನಿಯರು ಆದೇಶಿಸಿದ್ದರು. ಸೇನೆ ಎಂಮದಿಗೂ ಮುಗ್ಧರ ಹತ್ಯೆ ಮಾಡುತ್ತದೆ ಎಂದು ನಮ್ಮ ತಲೆ ತಿರುಗಿಸಿದ್ದರು. ಈ ಪಿತೂರಿಗಳೆಲ್ಲವೂ ನಡೆಯುತ್ತಿದ್ದುದು ಪಾಕಿಸ್ತಾನದಲ್ಲಿ" ಎಂಬ ಸತ್ಯವನ್ನು ಗುರ್ಜಿ ಬಯಲಿಗೆಳೆದಿದ್ದಾನೆ.
ತನ್ನ ಜೊತೆಗಿದ್ದ ಇತರ ಭಯೋತ್ಪಾದಕರ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿರುವ ಗುರ್ಜಿ, "ಅವರು ತಪ್ಪು ಹಾದಿಯಲ್ಲಿದ್ದಾರೆ. ಕಾಡಿನಲ್ಲಿ ಬದುಕುತ್ತಿದ್ದಾರೆ, ತಮ್ಮ ತಂದೆ-ತಾಯಿಯನ್ನು ನೋಡುವುದಕ್ಕಾದರೂ ಅವರೆಲ್ಲ ಹಿಂದಿರುಗಿ ಬರಬೇಕು" ಎಂದು ಅವರು ಹೇಳಿದ್ದಾರೆ.
'ನನ್ನ ಸ್ನೇಹಿತ ನಾಸಿರ್ ಅಮಿನ್ ಬಳಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನಿನ್ನ ತಾಯಿ ತೀವ್ರ ಅನಾರೊಗ್ಯದಿಂದ ಬಳಲುತ್ತಿದ್ದಾರೆ. ದಯವಿಟ್ಟು ಹಿಂತಿರುಗಿ ಬಾ" ಎಂದು ಮನವಿ ಮಾಡಿಕೊಂಡಿದ್ದಾನೆ.