ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಲಾಯಂ ಸೈಕಲ್ ಕಸಿದುಕೊಂಡ ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಗುರುತಾದ 'ಸೈಕಲ್' ಈಗ ಅಖಿಲೇಶ್ ಬಣದ ಪಾಲಾಗಿದೆ. ಮುಲಾಯಂ ಅವರು, ತಮ್ಮ ಬಣಕ್ಕಾಗಿ ಹೊಸ ಚಿಹ್ನೆಯನ್ನು ಹುಡುಕಿಕೊಳ್ಳಬೇಕಿದೆ.
ನವದೆಹಲಿ, ಜನವರಿ 16: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಗುರುತಾದ 'ಸೈಕಲ್' ಈಗ ಅಖಿಲೇಶ್ ಬಣದ ಪಾಲಾಗಿದೆ. ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದ ಮೇಲೆ, ಎರಡೂ ಬಣದ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ ಹಾಗೂ ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಇಬ್ಬರೂ ಪಕ್ಷದ ಚಿಹ್ನೆಯು ತಮಗೇ ಸಿಗಬೇಕೆಂದು ಕಿತ್ತಾಡಿದ್ದರು.
ಆನಂತರ ಅದು ಚುನಾವಣಾ ಆಯೋಗದ ಮೆಟ್ಟಿಲೇರಿತ್ತು. ಇದೀಗ, ಆಯೋಗವು ಈ ಚಿಹ್ನೆಯನ್ನು ಅಖಿಲೇಶ್ ಬಣಕ್ಕೆ ಸಿಗಬೇಕೆಂದು ತೀರ್ಪು ನೀಡಿದೆ. ಇದೀಗ, ಮುಲಾಯಂ ಅವರು, ತಮ್ಮ ಬಣಕ್ಕಾಗಿ ಹೊಸ ಚಿಹ್ನೆಯನ್ನು ಹುಡುಕಿಕೊಳ್ಳಬೇಕಿದೆ.
Comments
election commission akhilesh yadav samajwadi party uttar pradesh ಚುನಾವಣಾ ಆಯೋಗ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷ ಉತ್ತರ ಪ್ರದೇಶ
English summary
The Election Commission of India has said thatye Cycle symbol belongs to Akhilesh Yadav. The ECI reportedly ruled in favour of the Akhilesh faction since he had the numbers. With this order, the Mulayam faction would have to look for a new symbol.
Story first published: Monday, January 16, 2017, 19:10 [IST]