Ajit Pawar: ಸ್ಕೂಟಿ ಚಲಾಯಿಸದವರಿಗೆ ವಿಮಾನ ಕೊಟ್ಟರೆ ಹಿಂಗೇ ಆಗೋದು: ಸೋಷಿಯಲ್ ಮೀಡಿಯಾ ಟ್ರೋಲ್ಗೆ ನೆಟ್ಟಿಗರು ಕೆಂಡ
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಜನವರಿ 28ರ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳು ಅಸಹ್ಯಕರವಾಗಿದೆ. ಪುರುಷ ಪ್ರಧಾನ ಅಥವಾ ಇನ್ನೂ ಹಳೆಯ ಚಿಂತನೆಯಲ್ಲೇ ಇರುವ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಎನ್ನುವುದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯೇ ಸಾಕ್ಷಿಯಾಗಿದೆ.
ಜನವರಿ 28, 2026 ರಂದು ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮತ್ತು ನಾಲ್ವರು ಸಾವನ್ನಪ್ಪಿದರು. ವಿಮಾನವು ಬಾರಾಮತಿಯಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಪತನಗೊಂಡಿತ್ತು. ಅಜಿತ್ ಪವಾರ್ ಮತ್ತು ಸಹ - ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಈ ವಿಮಾನ ಅಪಘಾತ ಸಂಭವಿಸಿದ ಎರಡು ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೀಳು ಮಟ್ಟದ ಟ್ರೋಲ್ಗಳು ಶುರುವಾಗಿವೆ. ಮಹಿಳಾ ಪೈಲಟ್ ವಿಮಾನ ಚಲಾಯಿಸಿದರೆ ಇನ್ನೇನು ಆಗುತ್ತದೆ ಎಂದು ಕೆಲವರು ಮಾಡಿರುವ ಟ್ವೀಟ್ ಮತ್ತು ಟ್ರೋಲ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಪೈಲಟ್ಗಳಾದ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ಸೇರಿದಂತೆ ಇತರ ನಾಲ್ವರು ಪೈಲಟ್ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಸಹ - ಪೈಲಟ್ ಮಹಿಳೆಯಾಗಿದ್ದರು ಎನ್ನುವುದನ್ನೇ ಕೆಲವರು ಟ್ರೋಲ್ಗೆ ಬಳಸುತ್ತಿದ್ದಾರೆ.
ಸ್ಕೂಟರ್ ಓಡಿಸಲು ಕಲಿತಿಲ್ಲ
ಅಲೋಕ್ ಆನಂದ ಎನ್ನುವ ವ್ಯಕ್ತಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆ ಹುಡುಗಿ ವಿಶೇಷವಾಗಿ X ಕ್ರೋಮೋಸೋಮ್ ಇನ್ನೂ ಸ್ಕೂಟರ್ ಓಡಿಸಲು ಕಲಿತಿಲ್ಲ. ಅವಳಿಗೆ ವಿಮಾನ ನೀಡಿದರೆ, ಹೀಗಾಗುತ್ತದೆ. ಶಾಂಭವಿ ಕ್ಷಮಿಸಿ ಆದರೆ ಪುರುಷ ಪ್ರಧಾನ ಉದ್ಯೋಗಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದು ಒಂದು ರೀತಿಯ ಆತ್ಮಹತ್ಯಾ ಕೆಲಸ. ಇದಕ್ಕೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದಿದ್ದಾನೆ. ಈ ಟ್ವೀಟ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
Meet Alok Anand, an average Indian man & a proud Andhbhakt.
— Ankit Mayank (@mr_mayank) January 28, 2026
A young pilot lost her life while flying alongwith #AjitPawar 💔
But he chooses to blame her, vilify her & calls for the boycott of women.
He doesn't know that Sambhavi was the first officer but the Captain was a man,… pic.twitter.com/NDyVOs93gR
ಅಂಕಿತ್ ಮಾಯಾಂಕ್ ಎನ್ನುವವರು, ಅಲೋಕ್ ಆನಂದ್ ಟ್ವೀಟ್ ನೋಡಿ, ಒಬ್ಬ ಸಾಮಾನ್ಯ ಭಾರತೀಯ ಪುರುಷ ಮತ್ತು ಹೆಮ್ಮೆಯ ಆಂಧಭಕ್ತ. ಅಜಿತ್ ಪವಾರ್ ಅವರೊಂದಿಗೆ ಹಾರಾಟ ನಡೆಸುವಾಗ ಯುವ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವನು ಅವಳನ್ನು ದೂಷಿಸಲು, ಅವಳನ್ನು ನಿಂದಿಸಲು ಮತ್ತು ಮಹಿಳೆಯರ ಬಹಿಷ್ಕಾರಕ್ಕೆ ಕರೆ ನೀಡಲು ಮುಂದಾಗಿದ್ದಾನೆ. ಸಾಂಭವಿ ಮೊದಲ ಅಧಿಕಾರಿ ಎಂದು ಅವನಿಗೆ ತಿಳಿದಿಲ್ಲ ಆದರೆ ಕ್ಯಾಪ್ಟನ್ ಒಬ್ಬ ಪುರುಷ, ಇಬ್ಬರೂ ಅಲೋಕ್ಗಿಂತ ಭಿನ್ನವಾಗಿ ಪ್ರತಿಭಾನ್ವಿತರಾಗಿದ್ದರು. ಅಲೋಕ್ ನಂತೆ ಇರಬೇಡಿ. ಮಹಿಳೆಯರನ್ನು ಗೌರವಿಸಿ ಎಂದು ತಿವಿದಿದ್ದಾರೆ.

ಮತ್ತೊಬ್ಬ ನೆಟ್ಟಿಗ ಸಾರ್, ಪುರುಷ ಪ್ರಧಾನ ಉದ್ಯೋಗಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದು ಒಂದು ರೀತಿಯ ಹೀನ ಕೆಲಸ, ಇದಕ್ಕೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದಿದ್ದಾನೆ. ವರುಣ್ ತ್ಯಾಗಿ ಎನ್ನುವವನು ಸ್ಕೂಟಿ ಓಡಿಸುವುದಕ್ಕೂ ಬರದ ಮಹಿಳೆ ವಿಮಾನ ಓಡಿಸಬಾರದು ಪೈಲಟ್ ಮಾಡಿದ ತಪ್ಪು ಎಂದಿದ್ದಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications