ಅಜಿತ್ ಪವಾರ್ ವಿಮಾನ ದುರಂತ ನಡೆದ ಬಾರಾಮತಿ ರನ್ವೇ ಹೇಗಿತ್ತು? ಇಲ್ಲಿದೆ ಸ್ಪೋಟಕ ಮಾಹಿತಿ
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬಾರಾಮತಿ ವಿಮಾನ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ಬೆನ್ನಲ್ಲೇ, "ಸುಸಜ್ಜಿತವಾಗಿದ್ದ ವಿಮಾನ ಇದ್ದಕ್ಕಿದ್ದಂತೆ ಪತನವಾಗಲು ಕಾರಣವೇನು?" ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಪಘಾತ ನಡೆದ ಸ್ಥಳದ ಭೌಗೋಳಿಕ ಸ್ಥಿತಿ ಮತ್ತು ಪ್ರಾಥಮಿಕ ತನಿಖಾ ವರದಿಗಳು ಕೆಲವು ಮಹತ್ವದ ಸುಳಿವುಗಳನ್ನು ನೀಡಿವೆ.
ಅಪಘಾತ ನಡೆದ ಜಾಗ ಹೇಗಿತ್ತು?
ಅಪಘಾತ ಸಂಭವಿಸಿದ ಬಾರಾಮತಿ ವಿಮಾನ ನಿಲ್ದಾಣವು ಅಪಾಯಕಾರಿ ಸ್ಥಳವೇನಲ್ಲ. ವಾಸ್ತವವಾಗಿ, ಇದು ಪೈಲಟ್ ತರಬೇತಿಗೆ ಮತ್ತು ವಿಐಪಿಗಳ ಸಂಚಾರಕ್ಕೆ ಹೇಳಿ ಮಾಡಿಸಿದಂತಹ ಜಾಗ.
ಭೌಗೋಳಿಕ ಸ್ಥಿತಿ: ಬಾರಾಮತಿ ಏರ್ಪೋರ್ಟ್ ಸಮತಟ್ಟಾದ ಭೂಪ್ರದೇಶದಲ್ಲಿದೆ. ಲ್ಯಾಂಡಿಂಗ್ ಅಥವಾ ಟೇಕಾಫ್ ವೇಳೆ ಪೈಲಟ್ಗಳಿಗೆ ಅಡ್ಡಿಯಾಗುವಂತಹ ದೊಡ್ಡ ಗುಡ್ಡಗಳಾಗಲಿ ಅಥವಾ ಎತ್ತರವಾದ ಕಟ್ಟಡಗಳಾಗಲಿ ರನ್ವೇ ಸುತ್ತಮುತ್ತ ಇಲ್ಲ.

ಹವಾಮಾನ: ಅಲ್ಲದೇ ಇಂದು ಬೆಳಿಗ್ಗೆ ಬಾರಾಮತಿಯಲ್ಲಿ ಹವಾಮಾನ ಸ್ಪಷ್ಟವಾಗಿತ್ತು.. ಮಂಜು ಅಥವಾ ಬಿರುಗಾಳಿಯಂತಹ ಯಾವುದೇ ಪ್ರತಿಕೂಲ ವಾತಾವರಣ ಇರಲಿಲ್ಲ. ಗೋಚರತೆ ಕೂಡ ಉತ್ತಮವಾಗಿಯೇ ಇತ್ತು ಎಂದು ಹವಾಮಾನ ವರದಿಗಳು ಹೇಳಿವೆ. ಹೀಗಾಗಿ, ಹವಾಮಾನ ವೈಪರೀತ್ಯ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ತೀರಾ ಕಡಿಮೆ.
ಅಪಘಾತಕ್ಕೆ ಕಾರಣ: ತಾಂತ್ರಿಕ ದೋಷವೋ? ಪೈಲಟ್ ತಪ್ಪೇ? ಪ್ರಾಥಮಿಕ ತನಿಖಾ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಇದು ಪೈಲಟ್ನಿಂದಾದ ತಪ್ಪಿಗಿಂತ ಹೆಚ್ಚಾಗಿ ತಾಂತ್ರಿಕ ವೈಫಲ್ಯ ಎಂದು ಶಂಕಿಸಲಾಗಿದೆ.
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ 'ಲಿಯರ್ಜೆಟ್ 45' ವಿಮಾನವು ಲ್ಯಾಂಡಿಂಗ್ಗೆ ಇನ್ನೇನು ಕೆಲವೇ ನಿಮಿಷಗಳಿರುವಾಗ ತಾಂತ್ರಿಕ ದೋಷವನ್ನು ಎದುರಿಸಿದೆ. ಪೈಲಟ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದರಾದರೂ, ವಿಮಾನದ ನಿಯಂತ್ರಣ ಕಳೆದುಕೊಂಡ ಪರಿಣಾಮ ಅದು ರನ್ವೇ ಸಮೀಪದ ಹೊಲದಲ್ಲಿ ಬಿದ್ದು ಸ್ಫೋಟಗೊಂಡಿದೆ. ಇಂಜಿನ್ ವೈಫಲ್ಯ ಅಥವಾ ಲ್ಯಾಂಡಿಂಗ್ ಗೇರ್ ಸಮಸ್ಯೆಯೇ ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ಅನುಭವಿಗಳಾಗಿದ್ದರು. ಕೊನೆಯ ಕ್ಷಣದವರೆಗೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಅವರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ವಿಮಾನವು ನಿಯಂತ್ರಣಕ್ಕೆ ಸಿಗದಷ್ಟು ತಾಂತ್ರಿಕವಾಗಿ ಕೆಟ್ಟುಹೋಗಿದ್ದರಿಂದ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿ.
ವಿಮಾನದ ಹಿನ್ನೆಲೆ
ಅಪಘಾತಕ್ಕೀಡಾದ ವಿಮಾನವು ಕೆನಡಾ ಮೂಲದ ಬೊಂಬಾರ್ಡಿಯರ್ ಕಂಪನಿಯ 'ಲಿಯರ್ಜೆಟ್ 45' ಮಾದರಿಯದ್ದಾಗಿದೆ. ಇದು ಸಾಮಾನ್ಯವಾಗಿ ಸುರಕ್ಷಿತ ವಿಮಾನವೆಂದು ಪರಿಗಣಿಸಲ್ಪಟ್ಟಿದ್ದರೂ, ಜಾಗತಿಕವಾಗಿ ಈ ಹಿಂದೆ ಇದೇ ಮಾದರಿಯ ವಿಮಾನಗಳು ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಉದಾಹರಣೆಗಳಿವೆ (ಮೆಕ್ಸಿಕೋ ಮತ್ತು ಮುಂಬೈನಲ್ಲಿ).
ಸದ್ಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ವಾಯು ಅಪಘಾತ ತನಿಖಾ ದಳ ಘಟನಾ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ. ಇವು ಸಿಕ್ಕ ನಂತರವಷ್ಟೇ, ಕೊನೆಯ ಕ್ಷಣದಲ್ಲಿ ಕಾಕ್ಪಿಟ್ನಲ್ಲಿ ಏನಾಯಿತು ಎಂಬ ನಿಖರ ಸತ್ಯ ಹೊರಬರಲಿದೆ.
ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತ ಅಜಿತ್ ಪವಾರ್ ಸೇರಿ ವಿಮಾನದಲ್ಲಿ ಇದ್ದ 5 ಪ್ರಯಾಣಿಕರು ಮೃತಪಟ್ಟಿದ್ದಾರೆ...
— oneindiakannada (@OneindiaKannada) January 28, 2026
#BreakingNews #AjitPawar #AjitPawarPlaneCrash #BaramatiIncident #MaharashtraNews #NewsUpdate #OIKannada #Oneindia pic.twitter.com/Sq4TCNi8pY
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications