ಉಗ್ರರು ವಶ, ಭಾರತದ ಮೊಟ್ಟ ಮೊದಲ 'ರಿಮೋಟ್ ಬಾಂಬ್' ಠುಸ್
ನವದೆಹಲಿ, ಡಿಸೆಂಬರ್ 28: ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಿಮೋಟ್ ಬಾಂಬ್ ಪ್ರಯೋಗ ಮಾಡಲು ಯತ್ನಿಸಿದ್ದ ಇಸ್ಲಾಮಿಕ್ ಸ್ಟೇಟ್ ಪ್ರೇರಿತ ಉಗ್ರರ ಯೋಜನೆ ಠುಸ್ ಆಗಿದೆ.
ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿದ ದಾಳಿಯಲ್ಲಿ ಈ ರಿಮೋಟ್ ಬಾಂಬ್ ಹಾಗೂ ಅದರ ಬಗ್ಗೆ ಪ್ರಾತ್ಯಕ್ಷಿಕೆ ವಿಡಿಯೋ ಕೂಡಾ ಸಿಕ್ಕಿದೆ.

ಹಿಂದುಗಳ ಪವಿತ್ರ ಸ್ಥಳಗಳು, ಕುಂಭಮೇಳ ಮುಂತಾದ ಜಾತ್ರೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಾರು ಬಾಂಬ್ ಬಳಸಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದನ್ನು ವಿಫಲಗೊಳಿಸಲಾಗಿದೆ.
46 ಸೆಕೆಂಡುಗಳ ವಿಡಿಯೋ ಕ್ಲಿಪ್ ನಲ್ಲಿ ಆರೋಪಿಯೊಬ್ಬ, ಇದು ಭಾರತದಲ್ಲಿ ಪ್ರಯೋಗಿಸಲ್ಪಡುವ ಮೊದಲ ರಿಮೋಟ್ ಬಾಂಬ್ ಎಂದು ವಿವರಿಸುತ್ತಾನೆ.
ಡಮ್ಮಿ ಬಾಂಬ್ ವೊಂದನ್ನು ವೈರುಗಳ ಮೂಲಕ ಸರ್ಕಿಟ್ ಗಳಿಗೆ ಜೋಡಿಸಲಾಗಿದೆ. ಬಟನ್ ಒತ್ತಿದ ನಂತರ ಎಲ್ಲರೂ 'ಅಹ್ಮೆದುಲ್ಲಾ, ಅಹ್ಮೆದುಲ್ಲಾ ಎಂದು ಕೈತಟ್ಟುತ್ತಾರೆ. ಕೊನೆಯಲ್ಲಿ ಮಹಿಳೆಯೊಬ್ಬಳು ಅವರೆಲ್ಲರೂ ಸಂತಸಪಡುತ್ತಾರೆ ಎಂದು ಹೇಳುತ್ತಾಳೆ.
ಎನ್ಐಎ ತಂಡ ನಡೆಸಿದ ದಾಳಿ ಸಂದರ್ಭದಲ್ಲಿ 25 ಕೆಜಿ ಸ್ಫೋಟಕ ಸಾಮಾಗ್ರಿಗಳಾದ ಪೋಟಾಷಿಯಂ ನೈಟ್ರೇಟ್, ಅಮೋನಿಯಂ ನೈಟ್ರೇಟ್, ಸಲ್ಫರ್, ಸಕ್ಕರೆ, 12 ಪಿಸ್ತೂಲ್, 150 ಸಜೀವ ಗುಂಡುಗಳು, ರಾಕೆಟ್ ಲಾಂಚರ್, 112 ಅಲಾರಂ ಕ್ಲಾಕ್, ಮೊಬೈಲ್ ಫೋನ್ ಸರ್ಕಿಟ್, ರಿಮೋಟ್ ಕಂಟ್ರೋಲ್ ಕಾರ್ ಟ್ರಿಗರಿಂಗ್ ಸ್ವಿಚ್, ವೈರ್ ಲೆಸ್ ಡಿಜಿಟಲ್ ಡೋರ್ ಬೆಲ್, 91 ಮೊಬೈಲ್ ಫೋನ್, 134 ಸಿಮ್ ಕಾರ್ಡ್, 3 ಲ್ಯಾಪ್ ಟಾಪ್, ಕತ್ತಿ, ಚಾಕು, ಐಎಸ್ಐಎಸ್ ಕುರಿತ ಸಾಹಿತ್ಯ, 7.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications