Get Updates
Get notified of breaking news, exclusive insights, and must-see stories!

ಭಯೋತ್ಪಾದನೆ ಮಾತ್ರ ಮರಣದಂಡನೆ, ಕಾನೂನು ಆಯೋಗದ ಶಿಫಾರಸ್ಸು

ಎಲ್ಲಾ ಅಪರಾಧ ಚಟುವಟಿಕೆಗಳಲ್ಲೂ ಮರಣದಂಡನೆಯನ್ನು ರದ್ದುಗೊಳಿಸುವಂತೆ ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಭಯೋತ್ಪಾದನೆ ಕೃತ್ಯಗಳಿಗೆ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಿದೆ.

ನವದೆಹಲಿ, ಮಾರ್ಚ್ 22: ಎಲ್ಲಾ ಅಪರಾಧ ಚಟುವಟಿಕೆಗಳಲ್ಲೂ ಮರಣದಂಡನೆಯನ್ನು ರದ್ದುಗೊಳಿಸುವಂತೆ ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಭಯೋತ್ಪಾದನೆ ಕೃತ್ಯಗಳಿಗೆ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಿದೆ.

ಈ ಮಾಹಿತಿಯನ್ನು ಗೃಹ ಇಲಾಖೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಇಂದು ರಾಜ್ಯಸಭೆಯಲ್ಲಿ ನೀಡಿದ್ದಾರೆ.[ಎಸ್ಸೆಸ್ಸೆಲ್ಸಿ ಪರೀಕ್ಷೆ, ಜಾಗೃತದಳದವರಿಗೂ ಮೊಬೈಲ್ ಫೋನ್ ನಿಷೇಧ]

Abolish death penalty except in terror cases says Law Commission

ಆಯೋಗ ಹೇಳಿದ್ದೇನು?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರಲ್ಲಿರುವ ಮರಣದಂಡನೆಯನ್ನು ಭಯೋತ್ಪಾದನೆ ಹೊರಟು ಪಡಿಸಿ ಉಳಿದೆಲ್ಲಾ ಅಪರಾಧಗಳಿಗೂ ತೆಗೆದು ಹಾಕಬೇಕು ಎಂದು ಆಯೋಗ ಹೇಳಿದೆ. ಆದರೆ ದೇಶದ ವಿರುದ್ಧ ಯುದ್ಧ ಸಾರುವ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಮಾತ್ರ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಲಾಗಿದೆ.[ಮಹಾರಾಷ್ಟ್ರ: ಗದ್ದಲವೆಬ್ಬಿಸಿದ 19 ವಿಪಕ್ಷ ಶಾಸಕರು ಸಸ್ಪೆಂಡ್]

ಶಿಫಾರಸ್ಸು ಮಾಡುವ ವೇಳೆ ಪ್ರಮುಖ ಹೇಳಿಕೆಯೊಂದನ್ನು ಕಾನೂನು ಆಯೋಗ ಉಲ್ಲೇಖಿಸಿದೆ. ಭಯೋತ್ಪಾದನೆಯನ್ನು ಮಾತ್ರ ಮರಣದಂಡನೆ ಶಿಕ್ಷೆಯೊಳಗೆ ಸೇರಿಸಲು ಯಾವುದೇ ಗಟ್ಟಿಯಾದ ಕಾರಣಗಳಿಲ್ಲ. ಆದರೆ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಲಿದೆ ಎಂಬ ಒಂದೇ ಕಾರಣಕ್ಕೆ ಭಯೋತ್ಪಾದನಾ ಕೃತ್ಯಗಳಿಗೆ ಮಾತ್ರ ಮರಣದಂಡನೆ ಶಿಕ್ಷೆ ಇರಲಿ ಎಂದು ಕಾನೂನು ಆಯೋಗ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+