ಅರವಿಂದ ಕೇಜ್ರಿವಾಲಾಗೆ ಆಮ್ ಆದ್ಮಿ ಆತ್ಮೀಯ ಪತ್ರ
ಏರಿದಷ್ಟೇ ವೇಗದಲ್ಲಿ ಕೆಳಗೆ ಜಾರಿದ ದಿಲ್ಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲಾ ಅವರಿಗೆ Mahesh Peri ಒಂದು ಪತ್ರ ಬರೆದಿದ್ದಾರೆ.
ಡಿಯರ್ ಅರವಿಂದ್ ಕೇಜ್ರಿವಾಲ್ - ಪ್ರಸ್ತುತ ಎಕೆ ಅಂದ್ರೆ ಎಎಪಿ, ಎಎಪಿ ಅಂದ್ರೆ ಆಮ್ ಆದ್ಮಿ ಪಕ್ಷ ಅಂತಾಗಿದೆ.

ಈ ಹಿಂದೆ ಕೆಲವು ಬಾರಿ ನಿಮ್ಮೊಂದಿಗೆ ಚರ್ಚೆ ನಡೆಸಿದ್ದೇನೆ. ನಿಮ್ಮ ಅಖಂಡತೆ, ಉದ್ದೇಶಗಳ ಬಗ್ಗೆ ನನ್ನ ಸಹಮತವಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಂತ್ಯ ಮತ್ತು ಮುಂದಿನ 5 ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎದೆ ತಟ್ಟಿಕೊಂಡು ಹೇಳುವೆ.
ಚಳವಳಿ ಮತ್ತು ಕುಟುಂಬದ ಹಿತಾಸಕ್ತಿ ನಡುವೆ ತಿಕ್ಕಾಟ ನಡೆದಾಗ ಮೊದಲನೆಯದೇ ಜಯ ಸಾಧಿಸಬೇಕು. ಆದಾಗ್ಯೂ, ಅನೇಕ ಸಚಿಂತಕ ಜನರಿಗೆ ನಿಮ್ಮ ಬಗ್ಗೆ ಬಹಿರಂಗವಾಗಿ ಗುರುತಿಸಿಕೊಳ್ಳಲು ಕೆಲವು ವಿಚಾರಗಳು ತೊಡಕಾಗಿವೆ. ಪ್ರಚಲಿತ ರಾಜಕೀಯ ವ್ಯವಸ್ಥೆ ನಮ್ಮನ್ನು ವಿಫಲಗೊಳಿಸಿದೆ ಎಂಬುದನ್ನು ನಾವೆಲ್ಲಾ ಬಲ್ಲೆವು. ಆದರೂ ಎಎಪಿ ಸ್ವಯಂ ಆಯ್ಕೆ ಅಲ್ಲ ಎಂಬುದು ನಮ್ಮ ಅನಿಸಿಕೆ.
ಹಾಗಾಗಿ ಈಗ ಜನರಲ್ಲಿ ಮನೆ ಮಾಡಿರುವ ಆಕ್ರೋಶ ಮತ್ತು ಜಿಗುಪ್ಸೆಯನ್ನು ನಿಮ್ಮ ಬಲವಾಗಿ ಪರಿವರ್ತಿಸಿಕೊಳ್ಳದಿದ್ದರೆ ಅದು ನಿಮ್ಮ ವೈಫಲ್ಯ ಎಂದೇ ನಾನು ಭಾವಿಸುವೆ. ನಾನು ನಿಮ್ಮ ಪರ ವಕಾಲತ್ತು ವಹಿಸುತ್ತಿರುವುದಕ್ಕೆ ನನ್ನ ವಿರುದ್ಧ ವ್ಯಾಪಕ ಟೀಕೆಗಳು ಬರುತ್ತವೆ. ಬದಲಾವಣೆಯ ಮಹಾಪರ್ವದ ಹರಿಕಾರನಾಗಿ ಮತ್ತು ಹೋರಾಟಗಾರರಾಗಿ ನೀವು ಹಳೆಯ ರಾಜಕೀಯ ವ್ಯವಸ್ಥೆಯನ್ನು ಮಣಿಸಿ, ಹೊಸ ವ್ಯವಸ್ಥೆಗೆ ನಾಂದಿ ಹಾಡಬೇಕು. ಈ ಸಂದರ್ಭದಲ್ಲಿ ಎಎಪಿ ಬಗ್ಗೆ ನನಗೆ ಆತಂಕಗಳೂ ಇವೆ. ಹಾಗಾಗಿ ನಾನಿಲ್ಲಿ 10 ಅಂಶಗಳನ್ನು ಪಟ್ಟೀಕರಿಸಿ, ನಿಮ್ಮ ಗಮನಕ್ಕೆ ತರಬಯಸುವೆ. 10 ಅಂಶಗಳು ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications