ನಾಗರಹಾವಿನ ಹೊಟ್ಟೆಯಲ್ಲಿದ್ದದ್ದೇನು? ವೈರಲ್ ವಿಡಿಯೋ
ನವದೆಹಲಿ, ಜನವರಿ 10: ಹೊಟ್ಟೆಯನ್ನು ತುಂಬಿಸಿಕೊಂಡ ನಾಗರಹಾವು ತೆವಳಿ ಮುಂದೆ ಸಾಗಲು ಒದ್ದಾಡುತ್ತಿದೆ. ಭಾರಿ ಗಾತ್ರದ ಹೊಟ್ಟೆಯನ್ನು ನೋಡಿದಾಗ ಅದು ದೊಡ್ಡ ಪ್ರಾಣಿಯನ್ನು ನುಂಗಿದೆ ಎಂದೇ ಭಾಸವಾಗುತ್ತದೆ. ನುಂಗಿದ್ದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ಅರಿತ ಹಾವು ಹೆಣಗಾಡಿ ಅದನ್ನು ಹೊರಹಾಕುತ್ತದೆ.
48 ಸೆಕೆಂಡುಗಳ ಈ ವಿಡಿಯೋ ಆರಂಭದಲ್ಲಿ ಕುತೂಹಲ ಕೆರಳಿಸಿದರೂ ಕೊನೆಯಲ್ಲಿ ಮನಕಲಕುತ್ತದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರಾಣಿ ಪಕ್ಷಿಗಳ ಜೀವಕ್ಕೆ ಎರವಾಗುತ್ತಿದ್ದೇವೆ ಎಂಬ ಖೇದವೂ ಆಗುತ್ತದೆ. ಹಾಗೆಯೇ ಈ ವಿಚಾರದಲ್ಲಿ ಮನುಷ್ಯರು ಬದಲಿಸಿಕೊಳ್ಳಬೇಕಾದ ಮನಸ್ಥಿತಿಯನ್ನು ಕೂಡ ನೆನಪಿಸುತ್ತದೆ.
ಎರಡು ಲೀಟರ್ ಗಾತ್ರದ ತಂಪು ಪಾನೀಯದ ಬಾಟಲಿಯನ್ನು ಆಹಾರವೆಂದು ನುಂಗಿದ್ದ ನಾಗರಹಾವಿನ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಗೊತ್ತಾಗಿಲ್ಲ.

ಉರಗ ಸಂರಕ್ಷಕರೊಬ್ಬರು ಕೋಲಿನಿಂದ ಹಾವನ್ನು ಚಲನಶೀಲವಾಗಿ ಇರುವಂತೆ ಮಾಡುತ್ತಾರೆ. ನೋವಿನಿಂದ ನರಳಾಡುವ ಹಾವು ಪ್ರಯಾಸಪಟ್ಟು ದೊಡ್ಡ ನೀರಿನ ಬಾಟಲಿಯನ್ನು ಹೊರಗೆ ಕಕ್ಕುತ್ತದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಸುಮಾರು 30 ಸಾವಿರ ಬಾರಿ ವೀಕ್ಷಣೆಗೆ ಒಳಗಾಗಿದೆ.
When it comes to #plastic there is nothing called as throwing away. See how single use plastic like bottles effecting the wildlife & other species. Video may disturb you. pic.twitter.com/swnxAjbyCx
— Parveen Kaswan, IFS (@ParveenKaswan) January 10, 2020
'ಪ್ಲಾಸ್ಟಿಕ್ ವಿಚಾರಕ್ಕೆ ಬಂದಾಗ ಎಸೆಯುವಂತಹದ್ದು ಎನ್ನುವುದು ಯಾವುದೂ ಇಲ್ಲ. ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳು ಹೇಗೆ ವನ್ಯಜೀವಿಗಳು ಮತ್ತು ಇತರೆ ಪ್ರಬೇಧಗಳಿಗೆ ಹಾನಿ ಮಾಡುತ್ತಿವೆ ನೋಡಿ. ವಿಡಿಯೋ ನಿಮ್ಮ ಮನಸ್ಸನ್ನು ಘಾಸಿ ಮಾಡಬಹುದು' ಎಂದು ಪ್ರವೀಣ್ ಕಾಸ್ವಾನ್ ಹೇಳಿದ್ದಾರೆ.
ಇದು ನಾಗರಹಾವು. ಅದಕ್ಕೆ ತಾನು ತಿಂದಿದ್ದನ್ನು ಹೊರಗೆ ಹಾಕುವ ಸಾಮರ್ಥ್ಯವಿದೆ. ಆದರೆ ಇತರೆ ಪ್ರಾಣಿಗಳಿಗೆ ಈ ಶಕ್ತಿ ಇಲ್ಲ. ಅವು ನೋವಿನಿಂದ ಸಾಯುತ್ತವೆ ಎಂದು ಅವರು ತಿಳಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications