8th Pay Commission: ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ಜಾರಿಯ ಅಪ್ಡೇಟ್: ದಿನಾಂಕ, ಪ್ರಯೋಜನ ವಿವರ
ಬೆಂಗಳೂರು, ಫೆಬ್ರವರಿ 26: 7ನೇ ವೇತನ ಆಯೋಗದಡಿ (7th Pay Commission) ತುಟ್ಟಿಭತ್ಯೆ (DA) ಶೇ. 4ರಷ್ಟು ಹೆಚ್ಚಳ ಪಡೆಯಲು ಸಿದ್ಧವಾಗಿರುವ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. 8ನೇ ವೇತನ ಆಯೋಗದ (8th Pay Commission) ಜಾರಿಗೆ ಬಗ್ಗೆ ಕೇಂದ್ರ ಸರ್ಕಾರ ಅಪ್ಡೇಟ್ ಮಾಹಿತಿ ನೀಡಿದೆ.
8ನೇ ವೇತನ ಆಯೋಗಕ್ಕಾಗಿ ಕಾಯುತ್ತಿರುವ ಎಲ್ಲಾ ಸರ್ಕಾರಿ ನೌಕರರು 2026ರ ಜನವರಿ 1 ರಿಂದ 8 ನೇ ವೇತನ ಆಯೋಗ ಆರಂಭವಾಗುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಂಬಳದ ಹೆಚ್ಚಳ ಮತ್ತು VIII ನೇ ವೇತನ ಆಯೋಗದ ಅರ್ಜಿದಾರಿಗೆ ಸಂಬಂಧಿಸಿದಂತೆ ಈ ಮಾಹಿತಿ ಪೂರಕವಾಗಬಹುದು.

ಹೊಸ ಅಯೋಗ 2026 ರಿಂದ ಜಾರಿ ನಿರೀಕ್ಷೆ
ಎಂಟನೇ ವೇತನ ಆಯೋಗದ ಇದೇ ದಿನಾಂಕವರೆಗೆ ಯಾವುದೇ ಅಧಿಕೃತವಾಗಿ ತಿಳಿಸಿಲ್ಲ. ಇತ್ತೀಚಿನ ಸುದ್ದಿಗಳ ಪ್ರಕಾರ, ಸರ್ಕಾರವು ಜನವರಿ 2026ರಿಂದ ಜಾರಿಗೆ ತರಲಿದೆ. ಯಾವುದೇ ವಲಯದ ಸರ್ಕಾರಿ ನೌಕರರು ತಮ್ಮ ಮಾಸಿಕ ವೇತನವನ್ನು ಹೆಚ್ಚಿಸುವುದರಿಂದ 8 ನೇ ವೇತನದ ಲಾಭ ಪಡೆಯಲಿದ್ದಾರೆ.
ತುಟ್ಟಿ ಭತ್ಯೆ (DA), ಸಾರಿಗೆ ಭತ್ಯೆ (TA), ಆರೋಗ್ಯ ಭತ್ಯೆ, ಮನೆ ಬಾಡಿಗೆ ಭತ್ಯೆ (HRA) ಮುಂತಾದ ಎಲ್ಲಾ ಭತ್ಯೆಗಳನ್ನು ಸರ್ಕಾರವು ಮುಂದಿನ ಮಾರ್ಚ್ಗೆ ಹೆಚ್ಚಿಸಲಿದೆ. 7ನೇ ವೇತನ ಆಯೋಗದಡಿ ತುಟ್ಟಿಭತ್ಯೆ ಏರಿಕೆ ಹುಡುಕುತ್ತಿರುವ ಅರ್ಜಿದಾರರು 8ನೇ ವೇತನ ಆಯೋಗದ ವೇತನ ಹೆಚ್ಚಳದ ಲಾಭಗಳನ್ನು ಮುಂದಿನ ದಿನಗಳಲ್ಲಿ ಪಡೆಯಲಿದ್ದಾರೆ.
8ನೇ ವೇತನ ಆಯೋಗದ ಅಧಿಕೃತ ಪ್ರಕಟಣೆ
ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ಜಾರಿಗೆ ಬರಲಿದೆ. ಹಾಲಿ ಏಳನೇ ವೇತನ ಇದರಲ್ಲಿ ಎಲ್ಲಾ ಸರ್ಕಾರಿ ಸೇವಾ ನೌಕರರು ಪ್ರಯೋಜನಗಳನ್ನು ಪಡೆಯುತ್ತಾರೆ. 8ನೇ ವೇತನ ಆಯೋಗದ ದಿನಾಂಕಕ್ಕಾಗಿ ಕಾಯುತ್ತಿರುವ ಅರ್ಜಿದಾರರಿಗೆ 8ನೇ ವೇತನ ಆಯೋಗದ ಅನುಷ್ಠಾನದ ದಿನಾಂಕವನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ತಿಳಿಸಲಾಗಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರವು, ಸರ್ಕಾರವು 8ನೇ ವೇತನ ಆಯೋಗವನ್ನು ಜನವರಿ 2026 ರೊಳಗೆ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
2014ರ ಫೆಬ್ರವರಿ 28 ರಂದು ಅಧಿಕೃತವಾಗಿ ಸರ್ಕಾರವು ಕೊನೆಯ ಬಾರಿಗೆ 7ನೇ ವೇತನ ಶ್ರೇಣಿಯ ಆಯೋಗ ಹಾಕಿತು. ನೌಕರರ ಬೇಡಿಕೆಯನ್ನು ಅಂಗೀಕರಿಸಲು ರಾಜ್ಯ ಹಣಕಾಸು ಸಚಿವ ಪಂಕಜ್ ಚೌಧರಿ ಅವರು ಮುಂದಿನ ವರ್ಷದಿಂದ 8 ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.
ಸದ್ಯ ಮುಂದಿನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡಾ 4ರಷ್ಟು ತುಟ್ಟಿಭತ್ಯೆ ಏರಿಕೆ ಪಡೆಯಲಿದ್ದಾರೆ. ಇದರೊಂದಿಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆಯನ್ನು ಸಹ ಇದೇ ಮಾರ್ಚ್ ತಿಂಗಳಲ್ಲಿ ಪಡೆಯುವ ಸಾಧ್ಯತೆ ಇದೆ.
ಇದೇ ಮಾರ್ಚ್ಗೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಅಗತ್ಯ ಹೆಚ್ಚಳ ಸಿಗಲಿದೆ. ಅಲ್ಲಿಂದ ಎರಡು ವರ್ಷದಲ್ಲಿ ಎಂಟನೇ ವೇತನ ಆಯೋಗವು ಜಾರಿಗೆ ಬರುವ ಮುನ್ಸೂಚನೆ ಸಿಕ್ಕಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications