ಕಾಡಿನಲ್ಲಿ ಮಂಗಗಳ ಜತೆಗೆ ಪತ್ತೆಯಾದ ಬಾಲಕಿಗೆ ಮಾತೇ ಬರುತ್ತಿಲ್ಲ!
ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳು ಉತ್ತರ ಪ್ರದೇಶ ಪೊಲೀಸರಿಗೆ ಕೈಗೆ ಸಿಕ್ಕಿದ್ದಾಳೆ. ಮಂಗಗಳ ಜತೆಗೇ ಬಾಳು ಬದುಕಿ ಈಕೆಗೆ ಮಾತನಾಡಲು ಬರುತ್ತಿಲ್ಲ.
ಲಕ್ನೋ, ಏಪ್ರಿಲ್ 6: ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳು ಉತ್ತರ ಪ್ರದೇಶ ಪೊಲೀಸರಿಗೆ ಕೈಗೆ ಸಿಕ್ಕಿದ್ದಾಳೆ. ಮಂಗಗಳ ಜತೆಗೇ ಬಾಳು ಬದುಕಿ ಈಕೆಗೆ ಮಾತನಾಡಲು ಬರುತ್ತಿಲ್ಲ. ಸದ್ಯ ಈಕೆ ಅಂತರಾಷ್ಟ್ರೀಯ ಸುದ್ದಿಗೆ ಗ್ರಾಸವಾಗಿದ್ದಾಳೆ.
ಬಹ್ರಿಚ್ ಗೆ ಸೇರಿದ ಕಟಾರ್ನಿಘಾಟ್ ಕಾಡಿನಲ್ಲಿ ಈಕೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ಆಕೆ ಮಂಗಗಳ ಗುಂಪಿನಲ್ಲಿದ್ದಾಗ ಸಬ್ ಇನ್ಸ್ ಪೆಕ್ಟರ್ ಸುರೇಶ್ ಯಾದವ್ ಪತ್ತೆ ಹಚ್ಚಿದ್ದಾರೆ. ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಈಕೆ ಬಿದ್ದಿದ್ದಾಳೆ.

ವರದಿಗಳ ಪ್ರಕಾರ ಬಾಲಕಿ ಮಂಗಗಳ ಜತೆ ನಿಕಟವಾದ ಸಂಬಂಧ ಹೊಂದಿದ್ದು ಆರಾಮವಾಗಿದ್ದಾಳೆ. ಮಾತ್ರವಲ್ಲ ಸುರೇಶ್ ಯಾದವ್ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ. ಇದೀಗ ಆಕೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕೆಯ ನಡವಳಿಕೆ ಮಂಗಗಳ ರೀತಿಯಲ್ಲೇ ಇದ್ದು, ನಡೆಯುವುದು, ತಿನ್ನುವುದು ಮಂಗಗಳನ್ನೇ ಹೋಲುತ್ತಿದೆ. ಪ್ರಾಣಿಗಳನ್ನು ಕಂಡಾಗ ಆಕೆ ಓಡಿ ಹೋಗುತ್ತಿದ್ದಾಳೆ. ಆಕೆಗೀಗ ನಡೆದಾಡುವ ತರಬೇತಿ ನೀಡಿದ್ದರೂ ಆಕೆ ನಾಲ್ಕು ಕಾಲಿನಲ್ಲೇ ನಡೆಯುತ್ತಿದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಿ.ಕೆ ಸಿಂಗ್ ಹೇಳಿದ್ದಾರೆ. ಆದರೆ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications