ನಾರಾಯಣ ಮೂರ್ತಿ ಮಾತು ಕೇಳಿ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ? ಸಂಶೋಧಕರು ಹೊರಹಾಕಿದ ಭಯಾನಕ ಮಾಹಿತಿ ಏನು?
ದೇಶದ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ, ಹಾಗೇ ಹೃದಯ ಸಂಬಂಧಿ ರೋಗ ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಆಗಲು ಕಾರಣ ಏನು? ಎಂಬ ಹುಡುಕಾಟದಲ್ಲಿ ಮೊದಲಿಗೆ ಬರುವ ಮಾತೆಂದರೆ ಅದು ಕೆಲಸದ ಒತ್ತಡ. ಹೌದು, ಪರಿಸ್ಥಿತಿ ಹೀಗಿದ್ದಾಗ ನಾರಾಯಣ ಮೂರ್ತಿ ಅವರ ಮಾತು ಕೇಳಿ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ?
ದಿನಕ್ಕೆ 24 ಗಂಟೆಯಾದರೆ ವಾರಕ್ಕೆ ಎಷ್ಟು ಗಂಟೆ ಹೇಳಿ? ಅದು 168 ಗಂಟೆ ಆಗಲಿದೆ. ಆದ್ರೆ ಹೀಗೆ 168 ಗಂಟೆ ಸಮಯದಲ್ಲಿ ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರ ಸಲಹೆಯಂತೆ, ಯುವಕರು 70 ಗಂಟೆ ಕೆಲಸ ಮಾಡಿದ್ರೆ ಅವರಿಗೆ ಉಳಿಯುವುದು 98 ಗಂಟೆ ಕಾಲಾವಕಾಶ. ಇನ್ನು ಈ ಸಮಯದಲ್ಲಿ ದಿನಕ್ಕೆ 8 ಗಂಟೆಯಂತೆ ನಿದ್ದೆಯನ್ನು ಮೈನಸ್ ಮಾಡಿದರೆ ಬಾಕಿ ಉಳಿಯೋದು ಬರೀ 42 ಗಂಟೆ ಸಮಯ. ಹೀಗಿದ್ದಾಗ ಕೇವಲ 42 ಸಮಯದಲ್ಲಿ ಯುವಕ, ಯುವತಿಯರು ಕಚೇರಿಗೆ ಸಂಚಾರ ಮಾಡುವುದು ಹೇಗೆ? ಊಟ ಮಾಡುವುದು ಹೇಗೆ? ಈ ಒತ್ತಡದ ನಡುವೆ ಕುಟುಂಬಕ್ಕೆ ಸಮಯ ಕೊಡುವುದು ಹೇಗೆ? ಎಂಬ ಪ್ರಶ್ನೆಗಳು ಕಾಡುವಾಗ ಸಂಶೋಧಕರ ಮಾತು ಅಕ್ಷರಶಃ ಭಯ ಹುಟ್ಟಿಸುತ್ತಿದೆ.

70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ?
ಹೌದು, ನಾವು ಕೆಲಸ ಮಾಡುವುದು ಎಷ್ಟು ಮುಖ್ಯವೋ. ಹಾಗೇ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಆರೋಗ್ಯ ಇಲ್ಲದ ಜೀವನ, ಆರೋಗ್ಯವೇ ಇಲ್ಲದ ಹಣ ವ್ಯರ್ಥ ವ್ಯರ್ಥ. ಅಕಸ್ಮಾತ್ ಯುವ ಜನರು ವಾರಕ್ಕೆ 70 ಗಂಟೆ ಕೆಲಸ ಮಾಡುತ್ತಾರೆ ಅಂತಾ ಇಟ್ಟುಕೊಳ್ಳಿ, ಆಗ ಅವರು ಒಂದೇ ಕಡೆ ಕೂತಿರಬೇಕು. ಹೀಗೆ, ಗಂಟೆಗಳ ಸಮಯ ಒಂದೇ ಕಡೆ ಕೂತು ಐಟಿ ನೌಕರರು ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ? ದೇಹದಲ್ಲಿನ ಬದಲಾವಣೆ ಏನು? ಒಂದೆ ಕಡೆ ಕೂರುವ ಜನರಿಗೆ ಎದುರಾಗುವ ಭಯಾನಕ ಕಾಯಿಲೆಗಳು ಯಾವುವು ಗೊತ್ತಾ?
ಸೊಂಟ ಢಮಾರ್.. ಸಕ್ಕರೆ ಕಾಯಿಲೆ ಬಂಪರ್!
ಅಂದಹಾಗೆ ಮನುಷ್ಯ ಎಷ್ಟು ಆಹಾರ ಸೇವನೆ ಮಾಡುತ್ತಾನೋ, ಅಷ್ಟೇ ಅದನ್ನು ಕರಗಿಸಿ ಶಕ್ತಿಯಾಗಿ ಪರಿವರ್ತನೆ ಮಾಡಬೇಕು. ಇಲ್ಲವಾದರೆ ತಾನು ತಿಂದ ಆಹಾರ ಕೊಬ್ಬಾಗಿ ಒಂದೆ ಕಡೆ ಶೇಖರಣೆಯಾಗುತ್ತದೆ. ಇದು ದೇಹವ ನಿಶಕ್ತಗೊಳಿಸಿ & ಕಾಯಿಲೆಗಳ ಕಾರ್ಖಾನೆಯಾಗಿ ಮಾಡುತ್ತದೆ. ಪರಿಸ್ಥಿತಿ ಹೀಗಿದ್ದಾಗ ತಜ್ಞರು ಮತ್ತು ವೈದ್ಯರು ಹೇಳುವಂತೆ ನೌಕರರು ತಾವು ಕೂತಿರುವ ಜಾಗದಿಂದ 30 ನಿಮಿಷಯಕ್ಕೆ ಒಮ್ಮೆ ಎದ್ದು ಓಡಾಡಬೇಕು. ಹೀಗೆ ಮಾಡದೇ ಇದ್ದರೆ, ರಕ್ತದೊತ್ತಡ ಸೇರಿದಂತೆ ಸಕ್ಕರೆ ಕಾಯಿಲೆ, ಸೊಂಟದ ಸುತ್ತ ಕೊಬ್ಬು ಶೇಖರಣೆಯು ಸೇರಿ ಹೃದಯ ಹಾಗೂ ಸೊಂಟಕ್ಕೆ ಒತ್ತಡ ಹೆಚ್ಚಾಗುತ್ತದೆ ಅಂತೆ.

70 ಗಂಟೆ ಕೆಲಸದ ಎಫೆಕ್ಟ್ ಏನು?
ವೈದ್ಯರು ಹೇಳ್ತಾರೆ ಕೂತ ಕಡೆಯಿಂದ ಪ್ರತಿ 30 ನಿಮಿಷಯಕ್ಕೆ ಒಮ್ಮೆ ಎದ್ದು ಓಡಾಡಬೇಕು ಅಂತ. ಆದರೆ ಐಟಿ ನೌಕರರು ಅಥವಾ ಯುವ ಸಮುದಾಯ ಬೇರೆ ಯಾವುದೇ ಉದ್ಯೋಗ ಮಾಡುವಾಗ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಎದ್ದು ಓಡಾಡೋದಕ್ಕೆ ಆಗುತ್ತಾ? ಹೀಗೆ ಎದ್ದು ಓಡಾಡಲು 30 ನಿಮಿಷಯಕ್ಕೆ ಒಮ್ಮೆ ಅವಕಾಶ ಸಿಗುತ್ತಾ? ಎಂಬ ಡೌಟ್ ಕಾಡ್ತಿದೆ. ಇದು ಬಿಡಿ ಕೊರೊನಾ ಬಂದ ಬಳಿಕ ಅದೆಷ್ಟು ಯುವಕರು ಹೃದಯಾಘಾತಕ್ಕೆ ಬಲಿಯಾಗಿ ಜೀವ ಬಿಟ್ಟಿದ್ದಾರೆ ಹೇಳಿ? ಪರಿಸ್ಥಿತಿ ಹೀಗಿದ್ದಾಗ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ & ಜಗತ್ತಿನ ಐಟಿ ದಿಗ್ಗಜರಲ್ಲಿ ಒಬ್ಬರಾಗಿರುವ ನಾರಾಯಣ ಮೂರ್ತಿ ಅವರ ಸಲಹೆ ಕುರಿತಾಗಿ ಭಾರಿ ಚರ್ಚೆ ಶುರುವಾಗಿದೆ.
ಐಟಿ ದಿಗ್ಗಜ ಹೇಳಿದ್ದು ಏನು?
ನಾರಾಯಣ ಮೂರ್ತಿ ಅವರು ಹೇಳಿದ್ದು ಏನು ಅಂದ್ರೆ, ಭಾರತದ ಒಟ್ಟಾರೆ ಉತ್ಪಾದಕತೆಯ ಹೆಚ್ಚಿಸಲು ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಶುರುವಾಗಿತ್ತು. ಅಲ್ಲದೆ ಈಗಿನ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಒತ್ತಡ ಹಾಗೂ ಇದರಿಂದ ಉಂಟಾಗುತ್ತಿರುವ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಜೋರಾಗಿತ್ತು. ಈಗ ಕೂಡ ಬಿಸಿಬಿಸಿ ಚರ್ಚೆ ಮುಂದುವರಿದಿದೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications