Get Updates
Get notified of breaking news, exclusive insights, and must-see stories!

Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಆಂಬ್ಯುಲೆನ್ಸ್‌ಗೆ ಬೆಂಕಿ, ಮೂವರು ಸಜೀವ ದಹನ

ಇಂಪಾಲ, ಜೂನ್. 06: ಮಣಿಪುರದಲ್ಲಿ ಹಿಂಸಾಚಾರ ನಿಲ್ಲುತ್ತಲೆ ಇಲ್ಲ. ಈಗ ಮತ್ತೊಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಲಮ್ಸಾಂಗ್ ಪಿಎಸ್ ವ್ಯಾಪ್ತಿಯ ಇರೊಸೆಂಬಾದಲ್ಲಿ ಗುಂಪು ದಾಳಿ ಸಂಭವಿಸಿದೆ. ಇದರ ಪರಿಣಾಮವಾಗಿ ಮೂವರು ವ್ಯಕ್ತಿಗಳು ಸಜೀವ ದಹನವಾಗಿದ್ದಾರೆ. ಇದರಲ್ಲಿ ಏಳು ವರ್ಷಗಳ ಮಗು ಕೂಡ ಮೃತಪಟ್ಟಿದೆ.

ವರದಿಗಳ ಪ್ರಕಾರ, ಫಾಯೆಂಗ್‌ನಿಂದ ಇಂಫಾಲ್ ವೆಸ್ಟ್ ಕಡೆಗೆ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮತ್ತು ಮಾರುತಿ ಜಿಪ್ಸಿಯನ್ನು ದೊಡ್ಡ ಜನಸಮೂಹ ತಡೆದಿದೆ. ಮೂಲಗಳ ಪ್ರಕಾರ, ಸಜೀವ ದಹನಗೊಂಡ ಮೂವರು ಬಲಿಪಶುಗಳಲ್ಲಿ ಸುಮಾರು ಏಳು ವರ್ಷ ವಯಸ್ಸಿನ ಅಪ್ರಾಪ್ತರೊಬ್ಬರು ಸೇರಿದ್ದಾರೆ.

7 year old boy, two women were burnt alive in an ambulance in Manipur

ಜನರು ಒಳಗೆ ಇದ್ದಂತೆಯೇ ಗುಂಪು ಆಂಬ್ಯುಲೆನ್ಸ್ ಅನ್ನು ಸುಟ್ಟು ಹಾಕಿದೆ. ಜೂನ್ 4 ರಂದು ಸಂಜೆ 6:30ರ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ಗೊಂದಲದ ಜೊತೆಗೆ, ಜೂನ್ 4 ರಂದು ಮುಂಜಾನೆ, ದುಷ್ಕರ್ಮಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕ ರಂಜಿತ್ ಅವರ ನಿವಾಸ ಸೇರಿದಂತೆ ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದ ಎರಡು ಗ್ರಾಮಗಳಿಗೆ ಬೆಂಕಿ ಹಚ್ಚಿದ್ದರು.

ಈ ಘಟನೆಯಲ್ಲಿ ಶಾಸಕರ ಮನೆ ಭಾಗಶಃ ಸುಟ್ಟು ಕರಕಲಾಗಿದ್ದು, ಈ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆ ಮತ್ತು ಅಶಾಂತಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಜೂನ್ 3 ರಂದು, ಸಂಜೆ 4:30 ರ ಸುಮಾರಿಗೆ, ಆಡಳಿತಾರೂಢ ಬಿಜೆಪಿಯ ಮೂವರು ಸೇರಿದಂತೆ ನಾಲ್ವರು ಮಣಿಪುರ ಶಾಸಕರನ್ನು ಸ್ಥಳೀಯರು ಸುಗ್ನು ಬಜಾರ್ ಮಹಿಳಾ ಕಾಂಗ್ರೆಸ್ ಕಟ್ಟಡದಲ್ಲಿ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಮತ್ತಷ್ಟು ತೊಂದರೆಯಾಗುವುದನ್ನು ತಡೆಯುವ ಪ್ರಯತ್ನದಲ್ಲಿ ಮಣಿಪುರ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂಟರ್ನೆಟ್/ಡೇಟಾ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 10 ರವರೆಗೆ ವಿಸ್ತರಿಸಿದೆ. ಮಣಿಪುರ ಸರ್ಕಾರ ಸೋಮವಾರ ಹೊರಡಿಸಿದ ಹೊಸ ಆದೇಶಗಳಲ್ಲಿ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಜೂನ್ 10 ರ ಮಧ್ಯಾಹ್ನ 3 ರವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದೆ.

7 year old boy, two women were burnt alive in an ambulance in Manipur

ರಾಜ್ಯ ಕಮಿಷನರ್ (ಗೃಹ) ಎಚ್ ಜ್ಞಾನ್ ಪ್ರಕಾಶ್ ಅವರು ಹೊರಡಿಸಿದ ಆದೇಶದಲ್ಲಿ, "ಭಾರತ್‌ನೆಟ್ ಹಂತ-II ರ VAST ಗಳ ಮೂಲಕ ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ಇಂಟರ್ನೆಟ್ / ಡೇಟಾ ಸೇವೆಗಳು ಸೇರಿದಂತೆ ಮೊಬೈಲ್ ಡೇಟಾ ಸೇವೆಗಳು / ಇಂಟರ್ನೆಟ್ / ಡೇಟಾ ಸೇವೆಗಳನ್ನು ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಅಮಾನತುಗೊಳಿಸಲಾಗಿದೆ. ಮಣಿಪುರ ರಾಜ್ಯ ಸರ್ಕಾರದಿಂದ ಈಗಾಗಲೇ ನಿರ್ದಿಷ್ಟವಾಗಿ ವಿನಾಯಿತಿ ಪಡೆದಿರುವವರನ್ನು ಹೊರತುಪಡಿಸಿ" ಎಂದು ಹೇಳಲಾಗಿದೆ.

ಮಣಿಪುರ ರಾಜ್ಯದ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಈ ಆದೇಶವನ್ನು ನೀಡಲಾಗಿದೆ ಎಂದು ಅದು ಹೇಳಿದೆ. ಜೂನ್ 5 ರಂದು ಮಣಿಪುರದ ಪೊಲೀಸ್ ಮಹಾನಿರ್ದೇಶಕ ಪತ್ರದ ಮೂಲಕ ಮನೆ ಮತ್ತು ಆವರಣಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳು ಇನ್ನೂ ವರದಿಯಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು, ದ್ವೇಷದ ಭಾಷಣ ಮತ್ತು ದ್ವೇಷದ ವಿಡಿಯೋ ಸಂದೇಶಗಳ ಪ್ರಸಾರಕ್ಕಾಗಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಬಹುದೆಂಬ ಆತಂಕವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೊಬೈಲ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಹರಡುವುದನ್ನು ತಡೆಯುವ ಮೂಲಕ ಸಾರ್ವಜನಿಕ ಹಿತಾಸಕ್ತಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನೂ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+