ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ.ದಲ್ಲಿ ಮತ್ತೆ ಹಳಿತಪ್ಪಿದ ರೈಲು: 30 ದಿನದಲ್ಲಿ 4ನೇ ದುರಂತ!

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 7: ಮುಜಾಫರ್ ನಗರದ ರೈಲು ದುರಂತದ ಚಿತ್ರ ನೆನಪಿನಿಂದ ಮಾಸುವ ಮೊದಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದ ಘಟನೆ ನಡೆದಿದೆ.

ರೈಲ್ವೇ ಅಧಿಕಾರಿಗಳ ಬೇಜವಾಬ್ದಾರಿಗೆ 23 ಜೀವಗಳು ಬಲಿರೈಲ್ವೇ ಅಧಿಕಾರಿಗಳ ಬೇಜವಾಬ್ದಾರಿಗೆ 23 ಜೀವಗಳು ಬಲಿ

ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲವಾದರೂ ಇದು ಕಳೆದ 30 ದಿನಗಳಲ್ಲಿ ಭಾರತದಲ್ಲಿ ನಡೆದ ನಾಲ್ಕನೇ ರೈಲು ದುರಂತ ಎಂಬುದು ಆತಂಕದ ಸಂಗತಿ! ಹೌಲಾ-ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಪುಂಜ್ ಎಕ್ಸ್‌ಪ್ರೆಸ್ ರೈಲಿನ 7 ಬೋಗಿಗಳು ಇಂದು(ಸೆ.7) ಹಳಿತಪ್ಪಿವೆ.

7 coaches of Shaktipunj express derail in Uttar Pradesh

ಆಗಸ್ಟ್ 19 ರಂದು ಮುಜಾಫರ್ ನಗರದಲ್ಲಿ ನಡೆದ 'ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್' ದುರಂತದಲ್ಲಿ 23 ಜನ ಬಲಿಯಾಗಿದ್ದರು.

ಆಗಸ್ಟ್ 23 ರಂದು ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ಕೈಫಿಯಾತ್ ಎಕ್ಸ್ ಪ್ರೆಸ್ ಹಳಿ ತಪ್ಪಿದ ಪರಿಣಾಮ 50 ಜನರಿಗೆ ಗಾಯವಾಗಿತ್ತು.

7 coaches of Shaktipunj express derail in Uttar Pradesh

ಆಗಸ್ಟ್ 29 ರಂದು ಮುಂಬೈಯ ಡುರೆಂಟೊ ಎಕ್ಸ್ ಪ್ರೆಸ್ ಮಹಾರಾಷ್ಟ್ರದ ತಿತ್ವಾಲಾ ಜಿಲ್ಲೆಯಲ್ಲಿ ಹಳಿ ತಪ್ಪಿತ್ತು. ಪದೇ ಪದೇ ಸಂಭವಿಸುತ್ತಿರುವ ರೈಲ್ವೇ ದುರಂತಕ್ಕೆ ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವರಾಗಿದ್ದ ಸುರೇಶ್ ಪ್ರಭು ರಾಜೀನಾಮೆ ನೀಡಿದ್ದರು. ನಂತರ ಸೆ.3 ರಂದು ನಡೆದ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಪಿಯೂಷ್ ಗೋಯೆಲ್ ಅವರನ್ನು ನೂತನ ರೈಲ್ವೇ ಸಚಿವರನ್ನಾಗಿ ಆರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಮುಂಬೈನಲ್ಲಿ ಹಳಿ ತಪ್ಪಿದ ಲೋಕಲ್ ರೈಲು ಮುಂಬೈನಲ್ಲಿ ಹಳಿ ತಪ್ಪಿದ ಲೋಕಲ್ ರೈಲು

ಒಟ್ಟಿನಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ರೈಲು ದುರಂತಗಳು ರೈಲ್ವೇ ಇಲಾಖೆಯ ಕಾರ್ಯದಕ್ಷತೆಯ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಹುಟ್ಟಿಸಿದೆ.

English summary
7 coaches of Shaktipunj express which was on its way to Jabalpur to Howrah have derailed near Obara Railway station in Sonbhadra, Uttar Pradesh on 7th Sep morning, around 6 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X