ರಾಯಗಢದಲ್ಲಿ ಅಗ್ನಿ ಆಕಸ್ಮಿಕ: 60 ಅಂಗಡಿಗಳು ಭಸ್ಮ
ರಾಯಗಢ, ಜನವರಿ 10: ಛತ್ತೀಸ್ ಗಢದ ರಾಯಗಢದಲ್ಲಿ ನಡೆದ ಭೀಕರ ಬೆಂಕಿ ಅವಗಢದಲ್ಲಿ 60 ಅಂಗಡಿಗಳು ಸುಟ್ಟು ಕರಕಲಾಗಿವೆ. ಇಲ್ಲಿನ ಸಂಜಯ್ ಕಾಂಪ್ಲೆಕ್ಸ್ ಎಂಬಲ್ಲಿಯ ತರಕಾರಿ ಮಾರುಕಟ್ಟೆಯ ಇಂದು(ಜ.10) ಬೆಳಿಗ್ಗೆ ಬೆಂಕಿ ಅವಗಢ ಸಂಭವಿಸಿತ್ತು. ಇದುವರೆಗೂ ಯಾವುದೇ ಸಾವುನೋವಿನ ವರದಿಯಾಗಿಲ್ಲ.
ಇತ್ತೀಚೆಗೆ ಬೆಂಕಿ ಅವಗಢದ ಪ್ರಕರಣಗಳು ಹೆಚ್ಚಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಕೈಲಾಶ್ ಬಾರಿನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಒಟ್ಟು 5 ಜನ ಮೃತರಾಗಿದ್ದರು.

ಡಿ.29 ರಂದು ಮುಂಬೈಯ ಕಮಲಾ ಮಿಲ್ ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 14 ಜನ ಮೃತರಾಗಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ತಾನೇ, ಗೋರಖ್ ಪುರ, ಅಹ್ಮದಾಬಾದ್ ಗಳಲ್ಲೂ ಅಗ್ನಿ ಆಸಕಸ್ಮಿಕಗಳು ಸಂಭವಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications