ಸದಾ ಒತ್ತಡದಲ್ಲಿರುವ ಉದ್ಯಮಿಗಳ ಆರೋಗ್ಯ ರಕ್ಷಣೆಗೆ ತ್ರಿಸೂತ್ರ
ನವದೆಹಲಿ, ಏಪ್ರಿಲ್ 24: ನೀವು ಉದ್ಯಮಿಗಳಾಗಿರಬಹುದು ಅಥವಾ ಉದ್ಯೋಗಿಗಳೇ ಆಗಿರಬಹುದು, ದಿನದಲ್ಲಿನ ಬಿಡುವಿನ ಅವಧಿಯಲ್ಲಿ ಏನು ಮಾಡುತ್ತೀರಿ ಎನ್ನುವುದು ನಿಮ್ಮ ಕೆಲಸದ ಅವಧಿಯ ಪರಿಣಾಮಕಾರಿತ್ವವನ್ನು ನಿರ್ಧರಿಸುತ್ತದೆ.
ಇಲ್ಲವಾದಲ್ಲಿ ನಿಮ್ಮ ಕಾರ್ಯದ ಮಧ್ಯೆಯೂ ಬಿಡುವನ್ನು ಮಾಡಿಕೊಂಡು ಕೆಲ ಆರೋಗ್ಯಕರ ವಿಚಾರಗಳನ್ನು ಪಾಲಿಸಿದರೆ ಅದರ ಪರಿಣಾಮ ಧನಾತ್ಮಕವಾಗಿರುತ್ತದೆ.
ಇದರರ್ಥ ನೀವು ಮ್ಯಾರಥಾನ್ ಓಡೆಬೇಕೆಂದಿದ್ದರೆ ಫಿಟ್ನೆಟ್, ದೈಹಿಕ ಸದೃಢತೆಯ ಅರ್ಥವೇ ಬೇರೆ ಇರುತ್ತದೆ. ನೀವು ಸಾಮಾನ್ಯವಾಗಿ ಫಿಟ್ ಆಗಿರಬೇಕಿದ್ದರೆ ಅದರ ಅರ್ಥವೇ ಬೇರೆ ಇರುತ್ತದೆ.

ಆದರೆ ನೀವು ವೈಯಕ್ತಿಯವಾಗಿ ಎಲ್ಲಿದ್ದೀರಿ ಹಾಗೂ ಎಲ್ಲಿ ನಿಲ್ಲಲು ನಿರ್ಧರಿಸಿದ್ದೀರಿ ಎನ್ನುವುದು ನಿಮ್ಮ ನಿಮ್ಮ ಆಯ್ಕೆಯಾಗಿರುತ್ತದೆ. ಹಾಗಿದ್ದರೂ ಉತ್ತಮ ಆರೋಗ್ಯ ರಕ್ಷಣೆಗೆ ನೀವು ಪಾಲಿಸಬೇಕಾದ ಸೂತ್ರಗಳು ಈ ಕೆಳಗಿನಂತಿವೆ.
ಅಪ್ಪರ್ ಬಾಡಿ ಸ್ಟ್ರೆಂತ್: ಅಮೆರಿಕದ ಕ್ರೀಡಾ ವಿಜ್ಞಾನ ಕಾಲೇಜು ಹೇಳುವಂತೆ, ಅಪ್ಪರ್ ಬಾಡಿ ಸ್ಟ್ರೆಂತ್ ಅನ್ನು ಪುಷ್ ಅಪ್ಗಳು ನಿರ್ಧರಿಸುತ್ತವೆ. ಮಹಿಳೆಯರು ಪ್ಲಾಂಕ್ ಮಾದರಿಯ ಪುಷ್ ಅಪ್ ಅಥವಾ ಸುಧಾರಿತ ಪುಷ್ ಅಪ್ ಮಾಡಬಹುದು. ಪುಷ್ ಅಪ್ ಮಾಡುವುದರಿಂದ ಹೃದಯಾಘಾತವಾಗುವ ಪ್ರಮಾಣ ಕಡಿಮೆಯಾಗಲಿದೆ.
ಸಂಶೋಧನೆಯ ಪ್ರಕಾರ 40ಕ್ಕೂ ಅಧಿಕ ಪುಷ್ ಅಪ್ ಮಾಡುವವರಿಗೆ ಹೈದಯಾಘಾತವಾಗುವ ಸಾಧ್ಯತೆ ಶೇ.96ಕ್ಕೂ ಕಡಿಮೆ. ಹತ್ತಕ್ಕಿಂತ ಕಡಿಮೆ ಪುಷ್ ಅಪ್ ಮಾಡುವವರಿಗೆ ಈ ಸಾಧ್ಯತೆ ಹೆಚ್ಚಿರುತ್ತದೆ.
ಲೋವರ್ ಬಾಡಿ ಸ್ಟ್ರೆಂತ್: ಕುರ್ಚಿಯಲ್ಲಿ ಕುಳಿತುಕೊಂಡು ಸ್ಕ್ವಾಟ್ ಮಾಡಿರಿ, ಪ್ರತಿ ದಿನ ನಾಲ್ಕು ಅಥವಾ ಐದು ಹಂತದ ಸ್ಕ್ವಾಟ್ ಮಾಡುವುದರಿಂದ ನೀವು ಸದೃಢರಾಗುತ್ತೀರಿ, ಇದು ನಿಮ್ಮ ಲೋವರ್ ಬಾಡಿಯನ್ನು ಸದೃಢವಾಗಿಸುವುದಲ್ಲದೆ ಅನಗತ್ಯ ಗಾಯಗಳಿಂದ ರಕ್ಷಿಸುತ್ತದೆ.
Recommended Video
ಕಾರ್ಡಿಯೋ ವ್ಯಾಸ್ಕುಲರ್ ಫಿಟ್ನೆಸ್: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಕಿಂಗ್ ಜತೆಗೆ ಜಾಗಿಂಗ್ ಉತ್ತಮ ಹವ್ಯಾಸವಾಗಿದೆ. ಜತೆಗೆ ಸೈಕ್ಲಿಂಗ್, ಸ್ವಿಮ್ಮಿಂಗ್, ರೋವಿಂಗ್ ಕೂಡ ಸಹಾಯಕಾರಿಯಾಗಲಿದೆ.
-
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ











Click it and Unblock the Notifications