20 Special Trains to Tirupati: ತಿರುಪತಿಗೆ 20 ವಿಶೇಷ ರೈಲುಗಳು
ವಿಜಯವಾಡ ಡಿಸೆಂಬರ್ 25: ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ತಿರುಪತಿಗೆ ಹೆಚ್ಚಿನ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ. ರೈಲ್ವೆ ಇಲಾಖೆಯು ಈ ತಿಂಗಳ 27 ರಿಂದ 29 ರವರೆಗೆ ಹೈದರಾಬಾದ್ನಿಂದ ತಿರುಪತಿಗೆ ಮತ್ತು ತಿರುಪತಿಯಿಂದ ಕಾಕಿನಾಡ ಟೌನ್ಗೆ 20 ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಹೈದರಾಬಾದ್-ತಿರುಪತಿ (07489), ತಿರುಪತಿ-ಹೈದರಾಬಾದ್ (07490), ಹೈದರಾಬಾದ್-ತಿರುಪತಿ (07449), ತಿರುಪತಿ-ಹೈದರಾಬಾದ್ (07450), ಹೈದರಾಬಾದ್-ಕಾಕಿನಾಡ ಟೌನ್ (07451), ಕಾಕಿನಾಡ ಟೌನ್-ಹೈದರಾಬಾದ್ (07452) ರೈಲುಗಳು ಓಡುತ್ತಿವೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಈ ರೈಲುಗಳು ಸಿಕಂದರಾಬಾದ್, ಜನಗಾಮ, ಖಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಖಮ್ಮಂ, ವಿಜಯವಾಡ, ತೆನಾಲಿ, ಬಾಪಟ್ಲ, ಚಿರಾಲ, ರೇ ನಿಗುಂಟಾ, ಓಂಗೋಲ್, ನೆಲ್ಲೂರು, ಗುಡೂರು, ಸಾಮರ್ಲಕೋಟ, ರಾಜಮಂಡ್ರಿ, ತಣುಕು, ರಾಯನಪಾಡು, ಗುಡಿವಾಡ, ಕೈಕಳೂರು, ಬಿ ಅಹಿಕಳೂರು, ಬಿ. ಗುಂಟೂರು, ಸತ್ತೇನಪಲ್ಲಿ, ಪಿಡುಗುರಳ್ಳ, ಮಿರ್ಯಾಲಗೂಡ ಮತ್ತು ನಲ್ಗೊಂಡ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ವೈಕುಂಠ ಏಕಾದಶಿಯಾದ್ದರಿಂದ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದ (ಭಾನುವಾರ ಡಿ.24) ತಿರುಮಲದಲ್ಲಿ ಶ್ರೀವಾರಿ ವೈಕುಂಠ ದರ್ಶನ ಆರಂಭವಾಗಿದೆ. ವೈಕುಂಠನ ದರ್ಶನ ಪಡೆಯಲು ಭಕ್ತ ಸಾಗರವೇ ತಿರುಪತಿಯಲ್ಲಿ ನೆರೆದಿದೆ.
ತಿರುಮಲದಲ್ಲಿ ಶುಕ್ರವಾರ ಮಧ್ಯರಾತ್ರಿ ಶ್ರೀವಾರಿ ವೈಕುಂಠದ ಬಾಗಿಲು ತೆರೆಯಲಾಯಿತು. ಶ್ರೀಗಳಿಗೆ ವಿಶೇಷ ಪೂಜೆ ಬಳಿಕ ಮೊದಲು ಸೆಲೆಬ್ರಿಟಿಗಳಿಗೆ ದರ್ಶನ ಭಾಗ್ಯ ನೀಡಿ ನಂತರ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದರಿಂದಾಗಿ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಲೆಲ್ಲಾ ಜನ ಜಮಾಯಿಸಿದ್ದಾರೆ. ಜನವರಿ 1ರ ಮಧ್ಯರಾತ್ರಿ 12 ಗಂಟೆಯವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ. ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ವೈಕುಂಠನ ದರ್ಶನ ನೀಡಲಾಗುತ್ತಿದೆ.

ಇದಕ್ಕಾಗಿ ಈಗಾಗಲೇ ತಿರುಪತಿಯ ಕೌಂಟರ್ಗಳಲ್ಲಿ ದರ್ಶನದ ಟೋಕನ್ ನೀಡಲಾಗಿದೆ. ಇದರಿಂದಾಗಿ ನೂಕುನುಗ್ಗಲು ಹೆಚ್ಚಾಗಿದೆ. ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಜನವರಿ 1ರವರೆಗೆ ವೈಕುಂಠನ ದರ್ಶನ ಪಡೆಯಬಹುದು. ಭಕ್ತರು ಆತುರ ಪಡಬಾರದು ಎಂದು ಟಿಟಿಡಿ ಮನವಿ ಮಾಡಿದೆ.
ಮತ್ತೊಂದೆಡೆ, ವೈಕುಂಠ ದ್ವಾರಕ್ಕೆ ಭೇಟಿ ನೀಡಲು ವಿಐಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲ ತಲುಪುತ್ತಿದ್ದಾರೆ. ಆದರೆ ಕೆಲ ಭಕ್ತರು ವಸತಿಗಾಗಿ ಪರದಾಡುತ್ತಿದ್ದಾರೆ. ಈ ಹಿಂದೆ ಭಕ್ತರಿಗೆ ಟಿಟಿಡಿ ಮಹತ್ವದ ಸಲಹೆಯೊಂದನ್ನು ನೀಡಿತ್ತು. ಟಿಕೆಟ್ ಇಲ್ಲದವರೂ ತಿರುಪತಿಗೆ ಬರಬಹುದು ಆದರೆ ಅವರಿಗೆ ದರ್ಶನ ಇರುವುದಿಲ್ಲ ಎಂಬ ಹೇಳಿಕೆ ನೀಡಿತ್ತು.
ಅಲಿಪಿರಿ ಟೋಲ್ಗೇಟ್ ಬಳಿ ವಿಜಿಲೆನ್ಸ್ ಸಿಬ್ಬಂದಿ ಭಕ್ತರ ದರ್ಶನ ಟಿಕೆಟ್ ಪರಿಶೀಲಿಸಿದ್ದು, ಟಿಕೆಟ್ ಪಡೆದವರನ್ನು ಬೆಟ್ಟಕ್ಕೆ ಕಳುಹಿಸುತ್ತಿದ್ದಾರೆ. ಅಲಿಪಿರಿ ತಪಾಸಣಾ ಕೇಂದ್ರ, ಅಲಿಪಿರಿ ಮತ್ತು ಶ್ರೀವಾರಿಮೆಟ್ಟು ಪಾದಚಾರಿ ಮಾರ್ಗಗಳಲ್ಲಿ ವೈಕುಂಠದ್ವಾರ ದರ್ಶನ ಟಿಕೆಟ್ ಮತ್ತು ಟೋಕನ್ಗಳನ್ನು ಹೊಂದಿರುವ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಟಿಕೆಟ್ ಇಲ್ಲದವರಿಗೆ ದರ್ಶನ ಇಲ್ಲದಿರುವುದರಿಂದ ಭಕ್ತರ ಬೇಸರಗೊಂಡಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications