ರಾಮಮಂದಿರಕ್ಕಾಗಿ 1992 ರ ಮಾದರಿ ಹೋರಾಟ ಮಾಡಲು ಸಿದ್ಧ: RSS
ನಾಗಪುರ, ನವೆಂಬರ್ 02: ರಾಮ ಮಂದಿರ ನಿರ್ಮಾಣಕ್ಕೆ ಅವಶ್ಯಕತೆ ಬಿದ್ದರೆ 1992 ರ ಮಾದರಿಯ ಹೋರಾಟ ಮಾಡುವುದಕ್ಕೂ ಹಿಂದಡಿ ಇಡುವುದಿಲ್ಲ ಎಂದು ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಎಚ್ಚರಿಕೆ ನೀಡಿದೆ.
1992 ರಲ್ಲಿ ದೇಶದಾದ್ಯಂತ ರಥ ಯಾತ್ರೆ ಮಾಡಿ ಹಿಂದೂಗಳಲ್ಲಿನ ಧರ್ಮವನ್ನು ಜಾಗೃತಿಗೊಳಿಸಲಾಗಿತ್ತು. ರಾಮಮಂದಿರದ ಅವಶ್ಯಕತೆ ಬಗ್ಗೆ ಸಾರಲಾಗಿತ್ತು. ರಥ ಯಾತ್ರೆಯು ದೇಶದಲ್ಲಿ ಹಿಂದೂ ಧರ್ಮ ಪ್ರಜ್ಞೆ ಉಗ್ರವಾಗಲು ಬಹು ಸಹಕಾರಿಯಾಗಿತ್ತು.
'ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗುತ್ತಾ?'
ಬಿಜೆಪಿಯ ಹಿರಿಯ ಸದಸ್ಯ ಲಾಲ್ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದಿದ್ದ ಈ ರಥ ಯಾತ್ರೆಯ ನಂತರವೇ ರಾಮ ಮಂದಿರ ನಿರ್ಮಾಣದ ವಿಷಯ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈಗ ಮತ್ತೆ ಅದೇ ಮಾದರಿಯ ಹೋರಾಟ ಮಾಡುವುದಾಗಿ ಆರ್ಎಸ್ಎಸ್ ಹೇಳುತ್ತಿದೆ.
ಆರ್ ಬಿಐ ಮೇಲೆ ಬೆಂಕಿಯುಗುಳಿದ ಆರೆಸ್ಸೆಸ್ ಸಹವರ್ತಿ ಸಂಸ್ಥೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಬಿದ್ದರೆ 1992 ರ ಮಾದರಿಯಲ್ಲೇ ಹೋರಾಡಬೇಕಾಗುತ್ತದೆ ಎಂದು ಆರ್ಎಸ್ಎಸ್ನ ಪ್ರಮುಖ ವಕ್ತಾರ ಭಯ್ಯಾಜಿ ಜೋಶಿ ಹೇಳಿದ್ದಾರೆ.
ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ
ಅಯೋಧ್ಯೆ ಪ್ರಕರಣ ವಿಚಾರಣೆಯಲ್ಲಿ ಸುಪ್ರಿಂಕೋರ್ಟ್ ನಿಧಾನ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯೇಕ ಕಾಯ್ದೆಯನ್ನೇ ತರಲು ಒತ್ತಾಯಿಸಿದರು.