ಸೆಕ್ಸ್ ಜೀವನಕ್ಕಾಗಿ ಪತ್ನಿಗೆ ಲಾಯರ್ ನೋಟೀಸ್ ನೀಡಿದ ಪತಿ!
ಹೈದರಾಬಾದ್, ಜನವರಿ 12: ಹತ್ತನೇ ತರಗತಿ ಓದುತ್ತಿರುವಾಗಲೇ ಬಲವಂತದಿಂದ ಮದುವೆಯಾಗಿದ್ದ 16 ವರ್ಷದ ಬಾಲೆಯೊಬ್ಬಳು, ಗಂಡ ನೀಡುತ್ತಿದ್ದ ಲೈಂಗಿಕ ಹಿಂಸೆ ತಡೆಯಲಾರದೆ ತವರಿಗೆ ಓಡಿ ಬಂದಿದ್ದರಿಂದ ಕುಪಿತಗೊಂಡಿರುವ ಆಕೆಯ ಪತಿ ತನ್ನೊಂದಿಗೆ ಲೈಂಗಿಕ ಜೀವನ ನಡೆಸಬೇಕೆಂದು ಲಾಯರ್ ನೋಟೀಸು ಕಳುಹಿಸಿರುವ ವಿಲಕ್ಷಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಹಾಗಾಗಿ, ಆ ಹುಡುಗಿಯೀಗ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದು, ಆಯೋಗವು ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದೆ.
ಏನಿದು ಪ್ರಕರಣ: ಕಳೆದ ವರ್ಷ ಫೆಬ್ರವರಿಯಲ್ಲಿ, 10ನೇ ಇಯತ್ತೆಯಲ್ಲಿ ಓದುತ್ತಿದ್ದ ಈ ಬಾಲಕಿಯನ್ನು (ಹೆಸರು ಬಹಿರಂಗಗೊಂಡಿಲ್ಲ) ಅವರ ಸಂಬಂಧಿಯೊಬ್ಬರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಕಾರಣ, ಹುಡುಗ ಆಕೆಗಿಂತ 20 ವರ್ಷ ದೊಡ್ಡವನಾಗಿದ್ದ.

ಆದರೆ, ಹುಡುಗಿಯ ತಂದೆ, ತಾಯಿ ಹಾಗೂ ಸಂಬಂಧಿಕರು ಆಕೆಯ ಗಂಡನಾಗಬೇಕಿದ್ದ ಹುಡುಗನ ತಾಯಿ ಕಾಯಿಲೆ ಮಲಗಿದ್ದು, ಮಗನ ಮದುವೆ ನೋಡಿ ಸಾಯಬೇಕೆಂದು ಆಸೆ ಪಟ್ಟಿರುವುದಾಗಿ ಹೇಳಿ ಆಕೆಯನ್ನು ಭಾವುಕತೆಯ ಕೂಪಕ್ಕೆ ತಳ್ಳಿ ಮದುವೆ ಮಾಡಿದ್ದರು.
ಆದರೂ, ಮದುವೆಯಾಗಲು ತನ್ನನ್ನು 10ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಷರತ್ತನ್ನು ಇಟ್ಟಿದ್ದಳು. ಇದಕ್ಕೆ ಒಪ್ಪಿದ ಆಕೆಯ ಅತ್ತೆಯ ಮನೆಯವರು, ಆಕೆಯನ್ನು ತಮ್ಮ ಮಗನಿಗೆ ತಂದುಕೊಂಡು ಆನಂತರ ಪರೀಕ್ಷೆ ಮುಗಿಯುವವರೆಗೆ ತವರು ಮನೆಯಲ್ಲೇ ಇರಲು ಅವಕಾಶ ಕೊಟ್ಟಿದ್ದರು.
ಪರೀಕ್ಷೆ ಮುಗಿದ ನಂತರ ಗಂಡನ ಮನೆಗೆ ತೆರಳಿದ್ದ ಬಾಲಕಿಗೆ ಗಂಡ ಸಹಜವಾಗಿ ಲೈಂಗಿಕತೆ ಆಹ್ವಾನಿಸಿದಾಗ ಆಕೆ ಒಲ್ಲೆ ಎನ್ನುತ್ತಿದ್ದಳು. ಇದರಿಂದ ಕುಪಿತನಾದ ಆತನಿಂದ ಬೈಗುಳ, ಕೆಲವೊಮ್ಮೆ ಹೊಡೆತಗಳನ್ನೂ ತಿನ್ನಬೇಕಾಯಿತು. ಹೀಗಾಗಿ, ಆಕೆ ಮನೆಯಿಂದ ಓಡಿ ಬಂದು ತವರು ಸೇರಿಕೊಂಡಿದ್ದಾಳೆ.
ಇದು ಎರಡೂ ಕುಟುಂಬಗಳ ಜಗಳಕ್ಕೆ ಕಾರಣವಾಗಿ ಪಂಚಾಯ್ತಿಯೂ ಆಗಿದೆ. ಆದರೆ, ಪಂಚಾಯ್ತಿಯಲ್ಲಿ ಮಗಳ ಪರ ನಿಂತ ಆಕೆಯ ತಂದೆ, ತಾಯಿ ಮಗಳನ್ನು ಕಳುಹಿಸುವುದಿಲ್ಲ ಎಂದಿದ್ದಾರಲ್ಲದೆ, ಮದುವೆಯ ವೇಳೆ ತಾವು ನೀಡಿದ್ದ ವರದಕ್ಷಿಣ 1 ಲಕ್ಷ ರು. ಹಾಗೂ ಒಡವೆಗಳನ್ನು ಹಿಂದಿರುಗಿಸಬೇಕೆಂದು ಹಠ ಹಿಡಿದಿದ್ದಾರೆ.
ಇದರಿಂದ ಕುಪಿತಗೊಂಡಿರುವ ಹುಡುಗ ಇದೀಗ ತನ್ನ ಪತ್ನಿಗೆ ವಕೀಲರಿಂದ ನೋಟಿಸ್ ಕೊಡಿಸಿದ್ದಾನೆ. ಹಾಗಾಗಿ, ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications