ಮಂಗಳವಾರದಂದು, ಹಗಲು ವೇಳೆಯಲ್ಲಿ ಮಾತ್ರ ಕದಿಯುತ್ತಿದ್ದ ಕಳ್ಳರು ಅಂದರ್
ಹೈದರಾಬಾದ್, ಅಕ್ಟೋಬರ್ 22: ಈ ಇಬ್ಬರು ಕಳ್ಳರ ಬಗೆಗಿನ ವರದಿ ಬಹಳ ಆಸಕ್ತಿಕರವಾಗಿದೆ. ಇವರಿಬ್ಬರು ಮಂಗಳವಾರದ ದಿನ ಮಾತ್ರ ಕಳವು ಮಾಡುತ್ತಿದ್ದರಂತೆ. ಅದು ಕೂಡ ಹಗಲು ಹೊತ್ತಿನಲ್ಲಿ. ಅಂತೂ ಒಂದು ದಿನ ಕೈ ಕೊಟ್ಟಿದೆ. ಇದೀಗ ಇವರಿಬ್ಬರು ಹೈದರಾಬಾದ್ ಪೊಲೀಸರ ಅತಿಥಿಗಳಾಗಿದ್ದಾರೆ.
ಮೊಹಮದ್ ಸಮೀರ್ ಖಾನ್ ಹಾಗೂ ಆತನ ಸಹಚರ ಮೊಹಮದ್ ಶೋಯೆಬ್ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ಬಳಿ 21 ಲಕ್ಷ ಮೌಲ್ಯದ 700 ಗ್ರಾಮ್ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮದ್ ಸಮೀರ್ ಖಾನ್ ನ ಹಿಂದಿನ ತಲೆಮಾರಿನವರು ಮೂಲತಃ ಅಫ್ಘಾನಿಸ್ತಾನದವರು. ಆತನಿಗೆ ದೃಷ್ಟಿ ಸಮಸ್ಯೆ ಇದೆ. ಆದ್ದರಿಂದಲೇ ಹಗಲು ಹೊತ್ತಿನಲ್ಲೇ ಕಳವು ಮಾಡುತ್ತಿದ್ದ. ಮಂಗಳವಾರದಂದು ಕಳವು ಮಾಡಿದರೆ ಅದರಲ್ಲಿ ತಾನು ಯಶಸ್ವಿ ಆಗುತ್ತೇನೆ ಎಂಬುದು ಆತನ ಬಲವಾದ ನಂಬಿಕೆ. ಆ ಕಾರಣಕ್ಕೆ ಹೈದರಾಬಾದ್ ನವನಾದ ಮೊಹಮದ್ ಶೋಯೆಬ್ ಜತೆ ಸೇರಿ ಪ್ರತಿ ಮಂಗಳವಾರ ಕಳವು ಮಾಡುತ್ತಿದ್ದ.

ಇಬ್ಬರೂ ಸೇರಿ ಮೋಟಾರ್ ಬೈಕ್ ನಲ್ಲಿ ಹಗಲು ಹೊತ್ತು ಸುತ್ತಾಡುತ್ತಿದ್ದರು. ಯಾವ ಮನೆ ಬಾಗಿಲು ಹಾಕಿರುತ್ತಿತ್ತೋ ಅದೇ ಇವರ ಗುರಿ ಆಗುತ್ತಿತ್ತು. ಒಬ್ಬ ಮನೆಯ ಹೊರಗೆ ಕಾವಲು ನಿಂತಿರುತ್ತಿದ್ದ. ಮತ್ತೊಬ್ಬ ಬೀಗ ಒಡೆದು, ಒಳ ಪ್ರವೇಶಿಸಿ, ಕೈ ಚಳಕ ತೋರಿಸುತ್ತಿದ್ದ. ಇವೆಲ್ಲ ಐದರಿಂದ ಹತ್ತು ನಿಮಿಷದಲ್ಲಿ ಮುಗಿದು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರ ವಿರುದ್ಧ ತೆಲಂಗಾಣ ಹಾಗೂ ಬೆಂಗಳೂರಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣವಿದೆ. ಅಂದಹಾಗೆ ಇವರಿಬ್ಬರ ಮೊದಲ ಪರಿಚಯ ಆಗಿದ್ದು ಹೈದರಾಬಾದ್ ನ ಜೈಲಿನಲ್ಲಿಯಂತೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications