ತೆಲಂಗಾಣ ಚುನಾವಣೆ: ದಾಖಲೆ ಮೊತ್ತದ ಅಕ್ರಮ ಹಣ ವಶ
ಹೈದರಾಬಾದ್, ಡಿಸೆಂಬರ್ 06: ತೆಲಂಗಾಣ ಚುನಾವಣೆ ಭಾರಿ ಜಿದ್ದಾಜಿದ್ದಿನ ಕಣವಾಗಿದ್ದು, ಮತದಾರರನ್ನು ಸೆಳೆಯಲು ಹಣ-ಹೆಂಡದ ಹೊಳೆಯೇ ಹರಿಯುತ್ತಿದೆ.
ಚುನಾವಣೆ ಘೋಷಣೆ ಆದಂದಿನಿಂದಲೂ ನಿನ್ನೆಯವರೆಗೆ ತೆಲಂಗಾಣದಲ್ಲಿ 120 ಕೋಟಿ ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆಯಂತೆ.
ತೆಲಂಗಾಣ ಚುನಾವಣಾ ಆಯುಕ್ತ ರಜತ್ ಕುಮಾರ್ ಅವರೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಭಾರಿ ಪ್ರಮಾಣದಲ್ಲಿ ಹಣ ಮತ್ತು ಹೆಂಡವನ್ನು ಮತದಾರರನ್ನು ಸೆಳೆಯಲು ಬಳಸುಲಾಗುತ್ತಿದೆ ಎಂದಿದ್ದಾರೆ.

230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 29 ಕೋಟಿ ವಶಪಡಿಸಿಕೊಳ್ಳಲಾಗಿದೆ. ಆದರೆ 119 ಕ್ಷೇತ್ರಗಳಿರುವ ಸಣ್ಣ ರಾಜ್ಯ ತೆಲಂಗಾಣದಲ್ಲಿ 120 ಕೋಟಿ ವಶಪಡಿಸಿಕೊಳ್ಳಲಾಗಿದೆ. ಇದು ಬಹು ದೊಡ್ಡ ಪ್ರಮಾಣದ ಹಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು 330 ಕೋಟಿ ಅದರಲ್ಲಿ ಆಂಧ್ರಪ್ರದೇಶದ್ದೆ 150 ಕೋಟಿ ಇತ್ತು. ಆದರೆ ಈಗ ವಿಧಾನಸಭೆ ಚುನಾವಣೆಗೆ 120 ಕೋಟಿ ವಶಪಡಿಸಿಕೊಳ್ಳಲಾಗಿದೆ.
ಇನ್ನು ಮದ್ಯ ಸಹ ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಅಂಕಿ-ಅಂಶಗಳು ಇನ್ನಷ್ಟೆ ಗೊತ್ತಾಗಬೇಕಿದೆ. ಈ ವರೆಗೆ 11 ಸಾವಿರ ಜಾಮೀನು ರಹಿತ ವಾರೆಂಟ್ಗಳನ್ನು ಸಹ ನೀಡಲಾಗಿದೆಯಂತೆ.
ತೆಲಂಗಾಣದ ರಾಜ್ಯದ ಚುನಾವಣೆ ನಾಳೆ ನಡೆಯಲಿದ್ದು, ಚಂದ್ರಶೇಖರ್ ರಾವ್ ಅವರ ಟಿಆರ್ಎಸ್ ಪಕ್ಷಕ್ಕೆ ಈ ಚುನಾವಣೆ ಭಾರಿ ಮಹತ್ವದ್ದಾಗಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಸ್ಪರ್ಧಿಸುತ್ತಿವೆ. ಬಿಜೆಪಿ ಸಹ ಉತ್ತಮವಾಗಿ ಪ್ರಚಾರ ಮಾಡಿದ್ದು, ಉತ್ತಮ ಫಸಲು ತೆಎಗೆಯುವ ನಿರೀಕ್ಷಣೆಯಲ್ಲಿದೆ.












Click it and Unblock the Notifications