'ಚಂದ್ರಬಾಬು ನಾಯ್ಡು ಬ್ಲ್ಯಾಕ್ ಮೇಲ್ ಬಿಜೆಪಿ ಹತ್ತಿರ ನಡೆಯಲ್ಲ'
Recommended Video

"ಇದು ನಮಗೆ ಅನಿರೀಕ್ಷಿತ ಏನಲ್ಲ. ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿವೆ. ಸಂಖ್ಯಾ ಬಲದ ದೃಷ್ಟಿಯಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಇಂಥ ಯಾವ ಬ್ಲ್ಯಾಕ್ ಮೇಲ್ ಗೂ ಬಿಜೆಪಿ ಬಗ್ಗುವುದಿಲ್ಲ" ಎಂದು ಪಕ್ಷದ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ದೊರೆಯಬೇಕಾದ ಮೂಲಸೌಕರ್ಯ, ಕೈಗಾರಿಕೆಗಳು, ಅಗತ್ಯ ಸಂಪನ್ಮೂಲ ಎಲ್ಲ ದೊರಕಿಸಿಕೊಡಲು ಕೇಂದ್ರ ಸರಕಾರ ಕೆಲಸ ಮಾಡಿದೆ. ಆದರೆ ತೆಲುಗು ದೇಶಂ ಪಕ್ಷವು ಕೇಂದ್ರ ಸರಕಾರದ ವಿರುದ್ಧ ಇಂತಹ ಪಿತೂರಿ ಮಾಡಿದೆ ಎಂದು ರಾವ್ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇನ್ನು ಟಿಡಿಪಿ ಮೈತ್ರಿ ಮುರಿದುಕೊಂಡ ಬಗ್ಗೆ ಮಾತನಾಡಿದ ಅವರು, ಬೆದರಿಕೆ ಅನ್ನೋದಕ್ಕಿಂತ ಬಹಳ ಮುಂದೆ ಇದು. ಆಂಧ್ರಪ್ರದೇಶದಲ್ಲಿ ಬೆಳೆಯುವುದಕ್ಕೆ ಬಿಜೆಪಿಗೆ ಇದು ಒಂದು ಅವಕಾಶ. ತಮ್ಮ ಆಡಳಿತದಲ್ಲಿನ ಲೋಪಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಹೀಗೆ ಕೇಂದ್ರ ಸರಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಂದು ಜಿ.ವಿ.ಎಲ್.ನರಸಿಂಹ ರಾವ್ ಹೇಳಿದ್ದಾರೆ.












Click it and Unblock the Notifications