ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆಲಂಗಾಣದಿಂದ ಕಾಂಗ್ರೆಸ್, ಬಿಜೆಪಿ ಕಿತ್ತೊಗೆಯಲು ಓವೈಸಿ ಸಂಕಲ್ಪ
ಹೈದರಾಬಾದ್, ಮಾರ್ಚ್ 02: ತೆಲಂಗಾಣದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷವನ್ನು ಕಿತ್ತೊಗೆಯಬೇಕು ಎಂದು ಎಐಎಂಐಎಂ (All India Majlis-e-Ittehad-ul Muslimeen ) ನಾಯಕ ಅಸಾದುದ್ದಿನ್ ಓವೈಸಿ ಕರೆ ನೀಡಿದ್ದಾರೆ.
ತೆಲಂಗಾಣದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ತೆಲಂಗಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತೆಸೆಯಬೇಕಿದೆ. ಅದಕ್ಕಾಗಿ ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಿದೆ ಎಂದರು.
ಭಾರತೀಯ ಮುಸ್ಲಿಮರನ್ನು 'ಪಾಕಿಸ್ತಾನಿ' ಎಂದವರನ್ನು ಶಿಕ್ಷಿಸಿ: ಓವೈಸಿ
2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಪಕ್ಷವನ್ನು ಬುಡಮಟ್ಟದಲ್ಲಿ ಬಲಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ನಮ್ಮ ಪಕ್ಷದ ಶಾಸಕರನ್ನು ಹೆಚ್ಚಿಸಲು ಸಂಕಲ್ಪ ಮಾಡೋಣ. ಅದಕ್ಕಾಗಿ ಎಲ್ಲ ಕಾರ್ಯಕರ್ತರು ಪಣತೊಡಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
English summary
The All India Majlis-e-Ittehad-ul Muslimeen (AIMIM) chief Asaduddin Owaisi urged his party workers to uproot both the Bharatiya Janata Party (BJP) and the Congress from Telangana.
Story first published: Friday, March 2, 2018, 15:59 [IST]