ಕಾರಿನೊಂದಿಗೆ ಹಿಂದೂ ಚಾಲಕ ಬೇಕು, ಓಲಾಗೆ ವಿಚಿತ್ರ ಬೇಡಿಕೆ
ಹೈದರಾಬಾದ್, ಏ. 8 : ಹಿಂದೂ ಚಾಲಕ ಇರುವ ಕಾರನ್ನು ಕಳಿಸುವಂತೆ ಓಲಾ ಕ್ಯಾಬ್ಗೆ ಮನವಿ ಮಾಡಿದ್ದ ವ್ಯಕ್ತಿಗೆ ಮುಖಭಂಗವಾಗಿದೆ. ಮನವಿ ಸಲ್ಲಿಸಿದ್ದ ವ್ಯಕ್ತಿಗೆ ಓಲಾ ಕ್ಯಾಬ್ ಸರಿಯಾಗಿಯೇ ತಿರುಗೇಟು ಕೊಟ್ಟಿದೆ. ಈ ಬೇಡಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿದೆ.
ಹೈದರಾಬಾದ್ನ ಸೀಲಂ ವೀರಪ್ಪ ನಾಯ್ಡು ಓಲಾ ಕ್ಯಾಬ್ಗೆ ಹಿಂದೂ ಚಾಲಕ ಇರುವ ಕಾರು ಕಳಿಸಿ ಎಂದು ಮನವಿ ಮಾಡಿದವರು. 'ಹಿಂದೂವಾಗಿ ನಾನು ಹೈದರಾಬಾದ್ನಲ್ಲಿ ಹಿಂದೂ ಚಾಲಕರ ಬಗ್ಗೆ ನಂಬಿಕೆ ಹೊಂದಿದ್ದೇನೆ. ಆದ್ದರಿಂದ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ' ಎಂದು ಮನವಿ ಮಾಡಿದ್ದರು. ನಾಯ್ಡು ಟ್ವೀಟ್ ಮಾಡಿ ತನ್ನ ಬೇಡಿಕೆಯನ್ನು ಓಲಾ ಕ್ಯಾಬ್ ಮುಂದಿಟ್ಟಿದ್ದರು. [2050ಕ್ಕೆ ಹಿಂದೂಗಳ ಸಂಖ್ಯೆ 140 ಕೋಟಿ]

ಓಲಾ ಸ್ಪಷ್ಟನೆ : 'ಕ್ಷಮಿಸಿ ನಾವು ಧರ್ಮದ ಆಧಾರದಲ್ಲಿ ಚಾಲಕರನ್ನು ವಿಂಗಡನೆ ಮಾಡುವುದಿಲ್ಲ ಎಂದು ಓಲಾ ನಾಯ್ಡು ಅವರ ಬೇಡಿಕೆಗೆ ತಿರುಗೇಟು ಕೊಟ್ಟಿದೆ'. ಓಲಾ ದಿಟ್ಟ ಉತ್ತರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. [ಓಲಾ, ಉಬರ್ ಟ್ಯಾಕ್ಸಿ ಮೊಬೈಲ್ ಅಪ್ಲಿಕೇಷನ್ ಗೆ ನಿಷೇಧ?]
@SVeerapaNaidu Sorry, we do not discriminate against our drivers on the basis of their religion.
— Ola (@Olacabs) April 6, 2015 ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾದ ನಂತರ 'ಈ ಬೇಡಿಕೆಯನ್ನು ತಾರತಮ್ಯ ಎನ್ನುವುದರ ಬದಲು ಗ್ರಾಹಕರ ಆಯ್ಕೆ ಎಂದು ಯಾಕೆ ಪರಿಗಣಿಸಬಾರದು?' ಎಂದು ನಾಯ್ಡು ಸಮರ್ಥನೆ ನೀಡಿದ್ದಾರೆ. ಅಂತಿಮವಾಗಿ 'ಯಾರನ್ನೂ ನೋಯಿಸುವ ಉದ್ದೇಶ ನನಗೆ ಇಲ್ಲ' ಎಂದು ಟ್ವೀಟ್ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
Ola cabs I want a Hindu driver as it is #MyChoice ; the liberal paradox.
— kartikeya (@b_kartikeya) April 7, 2015 ನಾಯ್ಡುಗೆ ಟ್ವೀಟರ್ನಲ್ಲಿ ಪ್ರಶ್ನೆ
@SVeerapaNaidu Hey mate. Do you make the same requests to Airlines for the pilot to be of a certain faith? @Olacabs
— Sheikh Rehmatullah (@Sheikh_Rehmat) April 7, 2015 ನನಗೆ ದಲಿತ ಡ್ರೈವರ್ ಬೇಕು
Hi Ola Cabs please send me a blue car with Dalit driver ~ #Mayawati
— आप चोर हैं (@AapChorHain) April 7, 2015 -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications