ಕಾರು ಚಾಲಕನನ್ನು ಕೊಂದ ಐಎಎಸ್ ಅಧಿಕಾರಿ ಬಂಧನ
ತನ್ನ ಕಾರು ಚಾಲಕನನ್ನು ಕೊಂದಿದ್ದ ಐಎಎಸ್ ಅಧಿಕಾರಿಯ ಮಗ ಹಾಗೂ ಕೊಲ್ಲಲು ಸಹಕರಿಸಿದ್ದ ಅಧಿಕಾರಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್, ಮಾರ್ಚ್ 22: ತನ್ನ ಕಾರು ಚಾಲಕನನ್ನು ಕೊಂದಿದ್ದ ಐಎಎಸ್ ಅಧಿಕಾರಿ ಮಗ ಹಾಗೂ ಕೊಲ್ಲಲು ಸಹಕರಿಸಿದ್ದ ಅಧಿಕಾರಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಧರವತ್ ವೆಂಕಟೇಶ್ವರ ರಾವ್ ಹಾಗೂ ಅವರ ಮಗ ಧರವತ್ ವೆಂಕಟ ಸುಕ್ರುತ್ ಅವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಬಿ ನಾಗರಾಜು ಎಂಬ ಕಾರು ಚಾಲಕನನ್ನು ಕಳೆದ ವಾರ ಕೊಲೆಗೈದ ಇವರಿಬ್ಬರು ನಾಪತ್ತೆಯಾಗಿದ್ದರು ಎಂದು ಹೈದರಾಬಾದಿನ ಪಶ್ಚಿಮ ವಲಯ ಡಿಸಿಪಿ ಎ ವೆಂಕಟೇಶ್ವರ ರಾವ್ ಹೇಳಿದ್ದಾರೆ.

ಕಳೆದ ಭಾನುವಾರದಂದು ಗೋಣಿಚೀಲದಲ್ಲಿ ನಾಗರಾಜು ದೇಹ ಪತ್ತೆಯಾಗಿತ್ತು. ಅಧಿಕಾರಿ ವೆಂಕಟೇಶ್ವರ್ ರಾವ್ ಹಾಗೂ ಕಾರುಚಾಲಕ ನಾಗರಾಜು ಇಬ್ಬರು ಆಪ್ತರಾಗಿದ್ದರು. ಯೂಸುಫ್ ಗಢ ಪ್ರದೇಶದಲ್ಲಿರುವ ಮನೆಯಲ್ಲಿ ಅಧಿಕಾರಿಯ ಮನೆ ತಾರಸಿಯಲ್ಲಿ ಮಾರ್ಚ್ 17ರಂದು ಇಬ್ಬರು ಚೆನ್ನಾಗಿ ಕುಡಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ 19 ವರ್ಷ ವಯಸ್ಸಿನ ಮಗ ಸುಕ್ರುತ್ ಜತೆ ನಾಗರಾಜು ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈಕೈ ಮುಟ್ಟಿದ್ದಾನೆ. ಇದರಿಂದ ಅಸಹ್ಯಗೊಂಡು ನಾಗರಾಜುವಿಗೆ ಸುಕ್ರುತ್ ಬಾರಿಸಿದ್ದಾನೆ. ಇಬ್ಬರ ನಡುವೆ ಜಗಳ ಶುರುವಾಗುತ್ತಿದ್ದಂತೆ ಅಧಿಕಾರಿ ಕೂಡಾ ಕೈಜೋಡಿಸಿದ್ದಾರೆ. ಸಿಟ್ಟಿನಲ್ಲಿ ಇಟ್ಟಿಗೆ ತೆಗೆದುಕೊಂಡು ನಾಗರಾಜು ತಲೆ ಒಡೆದಿದ್ದಾರೆ.
ನಂತರ ನಾಗರಾಜು ಮೊಬೈಲ್ ಫೋನ್ ಧ್ವಂಸಗೊಳಿಸಿ, ಆತನ ಶವವನ್ನು ಗೋಣಿಚೀಲದಲ್ಲಿ ತುಂಬಿ ಅಲ್ಲಿಂದ ಸಾಗಿಸಿದ್ದಾರೆ.
ಅಪ್ಪ -ಮಗನ ಚರ್ಯೆ ಕಂಡ ಅಕ್ಕ ಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಕಾನೂನು ವಿದ್ಯಾರ್ಥಿಯಾಗಿರುವ ವೆಂಕಟ ಹಾಗೂ ಐಎಎಸ್ ಅಧಿಕಾರಿ ಡಿ.ರಾವ್ ಅವರನ್ನು ಬಂಧಿಸಲಾಗಿದೆ.(ಪಿಟಿಐ)
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications