ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು
ಹೈದರಾಬಾದ್, ಸೆಪ್ಟೆಂಬರ್, 08 : ಅರಳುವ ಹೂಗಳು ದುಃಖದಲ್ಲಿ, ನೋವಿನಲ್ಲಿ ಮೀಯುತ್ತಿವೆ. ಈ ಹೂಗಳು ಅರಳಿ ನಿಂತು ಚಂದದ ನಗೆ ಬೀರೋಣವೆಂದು ಅಣಿಯಾಗುವ ಹೊತ್ತಿಗೆ ಜೀವನದ ಕಗ್ಗತ್ತಲು ಇವುಗಳನ್ನು ಬೆದರಿಸಿ ಕಮರುವಂತೆ ಮಾಡಿದೆ. ಇದರಿಂದ ಭಯಭೀತವಾದ ಹೂಗಳು ಹೆತ್ತವರನ್ನು ಬಾಚಿ ತಬ್ಬಿ ಅಪ್ಪುಗೆ ಸುಖ ಪಡೆಯೋಣ ಎಂದು ಓಡಿದರೆ ಆ ಎರಡು ಮಡಿಲುಗಳು ಕಾಣದ ಲೋಕದಲ್ಲಿ ಕಣ್ಮರೆಯಾಗಿವೆ
ಹೌದು ಇದುವರೆಗೂ ನಾ ಹೇಳಿದ್ದು, ತಂದೆ ತಾಯಿಯನ್ನು ಕಳೆದುಕೊಂಡು ಹೆತ್ತವರ ಅಕ್ಕರೆ, ಪ್ರೀತಿ, ವಾತ್ಸಲ್ಯ, ಮಮತೆ, ಕೈತುತ್ತು, ಲಾಲಿ ಹಾಡು, ಆರೈಕೆಗಳಿಂದ ದೂರವಾಗಿ ಅನಾಥಪ್ರಜ್ಞೆಯ ಮಡುವಿನಲ್ಲಿರುವ ಇಬ್ಬರು ಬಾಲಕರ ಬಗ್ಗೆ.[ಮೂರು ವರ್ಷದ ಹಸುಳೆ ಆಯ್ಲನ್ ಕುರ್ದಿ Rest In Peace]

12 ವರ್ಷದವರಾದ ವಿನೋದ್ ಮತ್ತು ಅವನ ತಮ್ಮ ನವೀನ್ ಮೂಲತಃ ಹೈದರಾಬಾದಿನ ತೆಲಂಗಾಣದ ಮೇಧಕ್ ಜಿಲ್ಲೆಯವರು. ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಬಡತನದಲ್ಲೂ ಸಂತಸ ಕಾಣುತ್ತಾ ಜೀವನ ನಡೆಸುತ್ತಿದ್ದ ಈ ಇಬ್ಬರು ಮಕ್ಕಳ ತಾಯಿಯೇ ಲಕ್ಷ್ಮೀ.
ತಂದೆ ಬಾಲನರಸಯ್ಯ ಹತ್ತಿ ಬೆಳೆಗಾರನಾಗಿದ್ದು, ಹೆಚ್ಚು ಮದ್ಯ ವ್ಯಸನಿಯಾಗಿದ್ದನು. ಹತ್ತಿ ಬೆಳೆಗಳ ಉಳಿಕೆಗಾಗಿ ಒಂದುವರೆ ಎಕರೆ ಭೂಮಿ ಮೇಲೆ 3 ಲಕ್ಷ ಸಾಲ ಮಾಡಿದ್ದನು. ಕುಡುಕ ಗಂಡನ ಜೊತೆಯಲ್ಲೇ ಏಗುತ್ತಲೇ ಜೀವನ ಸಾಗಿಸುತ್ತಾ ತನ್ನ ಮಕ್ಕಳ ಭವಿಷ್ಯದ ಕುರಿತಾಗಿ ಚಿಂತೆ ಮಾಡಿದ ತಾಯಿ ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ತುತ್ತಾದಳು.
ಕುಡುಗ ಗಂಡನ ಬಗ್ಗೆ ಭರವಸೆ ಕಳೆದುಕೊಂಡ ಈಕೆ ಕೊನೆಗೆ ತನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಬಾಲಕಾರ್ಮಿಕತನ ಮೈಗೆ ಅಂಟಿಕೊಳ್ಳುವಂತೆ ಮಾಡಿದರೂ ಮಕ್ಕಳಿಗೆ ಸ್ವಾಭಿಮಾನದ ಬದುಕನ್ನು ನಡೆಸುವಂತೆ ಪ್ರೇರೇಪಿಸಿದಳು.
ಮಕ್ಕಳ ಚಿಂತೆಯಲ್ಲಿ ತೊಡಗಿದ ಲಕ್ಷ್ಮೀಯ ಆರೋಗ್ಯದಲ್ಲಿ ತೀರಾ ವ್ಯತ್ಯಾಸವಾಗಿ ಕಳೆದ ವರ್ಷ ಸಾವನ್ನಪ್ಪಿದ್ದಳು. ಲಕ್ಷ್ಮೀಯ ಸಾವಿನಿಂದ ತೀರಾ ಪಶ್ಚಾತ್ತಾಪ ಪಟ್ಟ ಬಾಲನರಸಯ್ಯ ವಿಷ ಸೇವಿಸಿ ಪ್ರಾಣ ಕಳೆದುಕೊಂಡರು. ಇದೀಗ ಈ ಇಬ್ಬರು ಪುಟಾಣಿಗಳು ಅನಾಥರು.
ನನ್ನ ತಂದೆ ಕೇವಲ ಸಾಲಕ್ಕೆ ಹೆದರಿ ವಿಷ ಸೇವಿಸಿ ಸಾವನ್ನಪ್ಪಿದರೇ? ಎಂದು ಕೇಳುವ ವಿನೋದ್ ' ನನ್ನ ತಂದೆ ಪ್ರಾಣವನ್ನಪ್ಪುವ ವೇಳೆಗೆ ಕೊನೆಗೆ ಆಡಿದ್ದು 'ಕ್ಷಮಿಸು' ಎಂಬ ಪದ ಮಾತ್ರ ಎಂದು ತೀರಾ ಭಾವುಕನಾಗುತ್ತಾನೆ. ಬಹಳಷ್ಟು ಕಣ್ಣೀರುಗರೆಯುತ್ತಾನೆ.
ಕೊನೆಗೆ ತಾಯಿಯ ಬದುಕನ್ನು ಮಾದರಿಯಾಗಿರಿಸಿಕೊಂಡ ಈ ಇಬ್ಬರು ಮಕ್ಕಳು ' ಅಮ್ಮ ನಮ್ಮೊಂದಿಗೆ ಜೀವಂತವಾಗಿದ್ದಾಳೆ. ಅವಳು ನಮಗಾಗಿ ತನ್ನ ಬದುಕನ್ನು ಸವೆಸಿದ್ದಾಳೆ. ಸ್ವಾಭಿಮಾನದ ಬದುಕನ್ನು ಕಲಿಸಿದ್ದಾಳೆ. ನಮ್ಮನ್ನು ನಾವು ನಿಭಾಯಿಸಿಕೊಂಡು ಬದುಕಬಲ್ಲೆವು ಎಂಬ ಭರವಸೆ ನಮ್ಮಲ್ಲಿ ಮೂಡಿದೆ ಎಂದು ಬಹಳ ಸ್ವಾಭಿಮಾನದಿಂದಲೇ ನುಡಿಯುತ್ತಾರೆ ಈ 12 ವರ್ಷದ ಬಾಲಕರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications