GHMC Election results: ಅಂಚೆಮತದಲ್ಲಿ ಬಿಜೆಪಿಗೆ ಜಯ
ಹೈದರಾಬಾದ್, ಡಿ. 4: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಗಿದ್ದು, ಬಿಜೆಪಿ ಜಯ ದಾಖಲಿಸಿದೆ.
ಇವಿಎಂ ಬದಲಿಗೆ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿದ್ದು, ಹೈದರಾಬಾದ್ ನಗರದ 30 ಮತ ಎಣಿಕೆ ಕೇಂದ್ರಗಳಲ್ಲಿ 8,152 ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಗ್ಗೆ 10 ಗಂಟೆ ಸಮಯದ ಟ್ರೆಂಡ್ ನಂತೆ ಬಿಜೆಪಿ 20 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದ್ದರೆ, ಟಿಆರ್ಎಸ್ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ವಿವಿಧ ಡಿವಿಷನ್ ಗಳಲ್ಲಿ ವಿವಿಧ ಪಕ್ಷಗಳಿಗೆ ಬಂದಿರುವ ಮತಗಳ ವಿವರ:
* ಗಾಜುಲರಾಮರಂನಲ್ಲಿ ಬಿಜೆಪಿಗೆ 3, ಟಿಆರ್ಎಸ್ 2 ಮತ್ತು ಕಾಂಗ್ರೆಸ್ಗೆ 1 ಅಂಚೆ ಮತಪತ್ರಗಳು ಬಂದಿವೆ
* ಸುರಾರಂ ಡಿವಿಷನ್ ನಲ್ಲಿ, ಟಿಆರ್ಎಸ್ 1, ಬಿಜೆಪಿ 1, 2 ಮತಗಳು ಅಮಾನ್ಯವಾಗಿವೆ.
* ಪಟಾನ್ ಚೆರುದಲ್ಲಿ ಟಿಆರ್ಎಸ್ 1, ಕಾಂಗ್ರೆಸ್ 1,
* ಭಾರತಿನಗರ: ಟಿಆರ್ಎಸ್ 3 ಮತ್ತು ಬಿಜೆಪಿ 4
* ಚಿಂತಲ್: ಬಿಜೆಪಿ 2, ಅಮಾನ್ಯ 2 ಮತಗಳು.
* ಜೆಡಿಮೆಟ್ಲಾ: ಟಿಆರ್ಎಸ್ 4, ಬಿಜೆಪಿ 6, ಅಮಾನ್ಯ 1 ಮತಗಳನ್ನು ಹೊಂದಿದೆ.
* ಸುಭಾಷ್ ನಗರ: ಟಿಆರ್ಎಸ್ 9, ಬಿಜೆಪಿ 3, ಅಮಾನ್ಯ 2 ಮತಗಳು ದೊರೆತಿವೆ.
* ಚಂಪಪೆಟಾ: ಬಿಜೆಪಿಗೆ 5, ಟಿಆರ್ಎಸ್ 2, ಕಾಂಗ್ರೆಸ್ 1 ಮತ.
* ಲಿಂಗೋಜಿಗುಡ: ಬಿಜೆಪಿ 5, ಟಿಆರ್ಎಸ್ 2, ಟಿಜೆಎಸ್ 1 ಮತಗಳನ್ನು ಹೊಂದಿದೆ.
* ವನಸ್ಥಲಿಪುರಂ: ಬಿಜೆಪಿ 5, ಟಿಆರ್ಎಸ್ 2, ನೋಟಾ 1 ಬಂದಿದೆ.
* ಹಸ್ತಿನಾಪುರಂ: ಬಿಜೆಪಿಗೆ 2 ಮತಗಳಿವೆ.
ಆದರೆ, ಕೆಲವು ಸ್ಥಳಗಳಲ್ಲಿ ಮತ ಎಣಿಕೆ ಇನ್ನೂ ಪ್ರಾರಂಭವಾಗಿಲ್ಲ. ಓಲ್ಡ್ ಮಲಕ್ಪೇಟೆ, ಗೋಶಮಹಲ್ ಮತ್ತು ರಾಮನಗರದಲ್ಲಿ ಮತ ಎಣಿಕೆ ಪ್ರಾರಂಭವಾಗಿಲ್ಲ. ತಾಂತ್ರಿಕ ಕಾರಣ, ಟಿಆರ್ಎಸ್ -ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ, ಮತ ಎಣಿಕೆ ಏಜೆಂಟರುಗಳು ಬಂದಿಲ್ಲ ಎಂಬ ಕಾರಣ ಸಿಕ್ಕಿದೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ಹೈದರಾಬಾದ್ ಚುನಾವಣೆಯನ್ನು ಮತ್ತೊಮ್ಮೆ ತೆಲಂಗಾಣ ರಾಷ್ಟ್ರ ಸಮಿತಿ ಗೆಲ್ಲಲಿದೆ ಎಂಬ ವರದಿ ಬಂದಿದೆ. 150 ಸ್ಥಾನಕ್ಕಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಡಿಸೆಂಬರ್ 1ರಂದು ಶೇ 46ರಷ್ಟು ಮತದಾನ ದಾಖಲಾಗಿತ್ತು. ಸುಮಾರು 1,122 ಅಭ್ಯರ್ಥಿಗಳ ಭವಿಷ್ಯ ಇಂದು ತಿಳಿಯಲಿದೆ. 2016ರಲ್ಲಿ ಟಿಆರ್ ಎಸ್ 99(43%), ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಹಾಗೂ ಬಿಜೆಪಿ 4 (10.34%) ಫಲಿತಾಂಶ ಬಂದಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications