ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲೇ 4ನೇ ಭ್ರಷ್ಟ ಪಕ್ಷವಂತೆ!
ಬೆಂಗಳೂರು, ಆಗಸ್ಟ್ 11: ಇಡೀ ಪ್ರಪಂಚದಲ್ಲಿರುವ ಎಲ್ಲಾ ದೇಶಗಳ ರಾಜಕೀಯ ಪಕ್ಷಗಳಲ್ಲಿ ಭಾರತೀಯ ಜನತಾ ಪಾರ್ಟಿಯು 4ನೇ ಅತಿ ಭ್ರಷ್ಟ ಪಕ್ಷವೆಂದು ಹೈದರಾಬಾದ್ ನ ಪತ್ರಿಕೆಯೊಂದು ವರದಿ ಮಾಡಿದೆ.
ಖ್ಯಾತ ಸುದ್ದಿ ಸಂಸ್ಥೆ ಸಿಎನ್ಎನ್ ನ ಸಮೀಕ್ಷಾ ವರದಿಯೆಂದು ಪ್ರಕಟಿಸಿಲಾಗಿದ್ದ ಈ ಸುದ್ದಿಯನ್ನು ಸಿಎನ್ಎನ್ ಸುದ್ದಿ ಸಂಸ್ಥೆಯೇ ಅಲ್ಲಗಳೆದಿದೆ.

ಅಂದಹಾಗೆ, ಇಂಥದ್ದೊಂದು ಸುದ್ದಿಯನ್ನು ಪ್ರಕಟಿಸಿದ್ದು, 'ದ ಸಿಯಾಸಟ್ ಡೈಲಿ' ಎಂಬ ಪತ್ರಿಕೆ. ಈ ಪತ್ರಿಕೆಯಲ್ಲಿ ಇತ್ತೀಚೆಗೆ ಬಂದಿರುವ ವರದಿಯೊಂದರ ಪ್ರಕಾರ, ಪಾಕಿಸ್ತಾನದ 'ಪಾಕಿಸ್ತಾನ ಮುಸ್ಲಿಂ ಲೀಗ್' ಪಕ್ಷವು ಜಗತ್ತಿನ ಅತಿ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದ್ದು ಭ್ರಷ್ಟ ಪಕ್ಷಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಇನ್ನು, ಉಗಾಂಡದ 'ನ್ಯಾಷನಲ್ ರೆಸಿಸ್ಟನ್ಸ್ ಮೂವ್ ಮೆಂಟ್' ಪಕ್ಷವು ದ್ವಿತೀಯ ಸ್ಥಾನ, ಕ್ಯೂಬಾದ 'ಪ್ರೊಗ್ರೆಸ್ಸಿವ್ ಆ್ಯಕ್ಷನ್ ಪಾರ್ಟಿ'ಯು ಮೂರನೇ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ 'ಭಾರತೀಯ ಜನತಾ ಪಾರ್ಟಿ' ಇದೆ.
ಅಂದಹಾಗೆ, ಈ ಪತ್ರಿಕೆ ಸುಮ್ಮನೇ ಈ ಸುದ್ದಿಯನ್ನು ಪ್ರಕಟಿಸಿಲ್ಲ. ತನ್ನ ವರದಿಗೆ ಖ್ಯಾತ ಸುದ್ದಿಸಂಸ್ಥೆ ಸಿಎನ್ಎನ್ ನಡೆಸಿರುವ ಸಮೀಕ್ಷೆ ವರದಿಯೇ ಕಾರಣ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ, ಸಿಎನ್ಎನ್ ಸುದ್ದಿಸಂಸ್ಥೆಯ ಚಿಹ್ನೆ ಇರುವ ಇನ್ಫೋ ಗ್ರಾಫಿಕ್ಸ್ ಅನ್ನೂ ಅದು ವರದಿಯ ಜತೆಯಲ್ಲಿ ಪ್ರಕಟಿಸಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ವಿಚಾರ ಕೊನೆಗೆ ಸಿಎನ್ಎನ್ ಗೂ ಗೊತ್ತಾಗಿ, ಅದು ಈ ಸುದ್ದಿ ಸುಳ್ಳೆಂದು ಸ್ಪಷ್ಟನೆ ನೀಡಿದೆ.
ಆದರೆ, ಇನ್ನೊಂದು ಮಜಾ ಏನು ಗೊತ್ತಾ? ಇದೇ ವರ್ಷ, ಇದೇ ಪತ್ರಿಕೆ ಇಂಥದ್ದೇ ಸುದ್ದಿಯೊಂದನ್ನು ವರದಿ ಮಾಡಿತ್ತು. ಇದರಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷವು ಜಗತ್ತಿನ 4ನೇ ಭ್ರಷ್ಟ ಪಕ್ಷವೆಂದು ಹೇಳಲಾಗಿತ್ತು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications