ಇಡಿ ದಾಳಿ: ತೆಲಂಗಾಣ ಮಾಜಿ ಸಚಿವರ ಅಳಿಯ ಮನೆಯಲ್ಲಿ ಕೋಟಿ ಕೋಟಿ!

ಹೈದ್ರಾಬಾದ್, ಏಪ್ರಿಲ್ 11: ತೆಲಂಗಾಣದ ಏಳು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಗಳಿಕೆ ಆರೋಪ ಹಿನ್ನೆಲೆ ರಾಜ್ಯದ ಮಾಜಿ ಗೃಹ ಸಚಿವ ನಯಿನಿ ಎನ್ ರೆಡ್ಡಿ ಅಳಿಯ ಶ್ರೀನಿವಾಸ್ ರೆಡ್ಡಿ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

ತೆಲಂಗಾಣದಲ್ಲಿ ಎರಡು ವರ್ಷಗಳ ಹಿಂದೆ ಟಿಎಸ್ ವೈದ್ಯಕೀಯ ವಿಮಾ ಸೇವೆ ಮತ್ತು ನೌಕರರ ರಾಜ್ಯ ವಿಮಾ ನಿಗಮದಡಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಶ್ರೀನಿವಾಸ್ ರೆಡ್ಡಿ ನಿವಾಸ ಹಾಗೂ ಅವರ ಸಹಾಯಕರ ನಿವಾಸದಲ್ಲಿ ಪರಿಶೀಲನೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 3 ಕೋಟಿ ನಗದು, 1 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬ್ಯಾಂಕ್ ಚೆಕ್, ಆಸ್ತಿ ಪತ್ರಗಳು ಮತ್ತು ಡಿಜಿಟಿಲ್ ಡಿವೈಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ESI Scam: ED Officers Conducts Raids At 7 Locations in Telangana

ತೆಲಂಗಾಣದಲ್ಲಿ ಇಡಿ ಅಧಿಕಾರಿಗಳ ದಾಳಿ:

ರಾಜ್ಯ ನೌಕರರ ವಿಮಾ ನಿಗಮಕ್ಕೆ ಸಂಬಂಧಿಸಿದ ಹಗರಣದಲ್ಲಿ ತೆಲಂಗಾಣದ ಮಾಜಿ ಗೃಹ ಸಚಿವ ನಯಿನಿ ನರಸಿಂಹ ರೆಡ್ಡಿ ಅಳಿಯ ಶ್ರೀನಿವಾಸ್ ರೆಡ್ಡಿ, ಮುಕುಂದ್ ರೆಡ್ಡಿ, ಮಾಜಿ ಸಚಿವ ನಯಿನಿ ರೆಡ್ಡಿ ಅವರ ಮಾಜಿ ಪಿಎಸ್ ದೇವಿಕಾ ರಾಣಿ, ಐಎಸ್ಐಸಿ ಮಾಜಿ ನಿರ್ದೇಶಕ ಸೇರಿದಂತೆ ಏಳು ಮಂದಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+