ಹೈದರಾಬಾದಿನಲ್ಲಿ 81.44 ಲಕ್ಷ ಮೌಲ್ಯದ 814 ಕೆಜಿ ಗಾಂಜಾ ವಶ
ಹೈದರಾಬಾದ್, ಡಿಸೆಂಬರ್ 25: ಹೊಸವರ್ಷಕ್ಕಾಗಿ ಸಾಗಿಸುತ್ತಿದ್ದರು ಎನ್ನಲಾದ ರು 81.44 ಲಕ್ಷ ಮೌಲ್ಯದ 814ಕೆಜಿ ಗಾಂಜಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಹೈದರಾಬಾದಿನ ಶಂಶಾಬಾದಿನಲ್ಲಿ ವಶಪಡಿಕೊಂಡಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರಕ್ಕೆ ಗಾಂಜಾ ಬರುತ್ತದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶಂಶಾಬಾದಿನ ಫಾರಂ ಹೌಸ್ ಬಳಿ ಛತ್ತೀಸ್ ಗಢದ ಲಾರಿಯೊಂದನ್ನು ವಶಪಡಿಸಿಕೊಂಡರು. ಆದರೆ ಫಾರಂ ಹೌಸಿನಲ್ಲಿ ಮೊದಲೇ ಟವೇರಾ ಕಾರೊಂದು ಇತ್ತು ಅದರಲ್ಲಿ ಗಾಂಜಾವನ್ನು ಇರಿಸಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[ಮಾದಕ ವಸ್ತು ಜಾಲ ಪತ್ತೆ: 57 ಕೆಜಿ ಗಾಂಜಾ ವಶ]
ಇನ್ನು ಈ ಬಗ್ಗೆ ಮಾತನಾಡಿರುವ ಗುಪಚರ ಅಧಿಕಾರಿಗಳಿಗೆ ಲಾರಿಯಲ್ಲಿ 270 ಪ್ಯಾಕೇಟ್, 20 ಪ್ಯಾಕೇಟ್ ಟವೇರಾ ಗಾಡಿಯಲ್ಲಿ ಹಾಗೂ 60ಕ್ಕೂ ಹೆಚ್ಚು ಪ್ಯಾಕೇಟ್ ಗಳು ಫಾರಂ ಹೌಸಿನ ರೂಮಿನಲ್ಲಿ ಸಿಕ್ಕಿದ್ದು ಇವೆಲ್ಲಾ ಉತ್ತಮ ಗುಣಮಟ್ಟದ ಗಾಂಜಾ ಎಂದು ತಿಳಿಸಿದರು. ಇವೆಲ್ಲಾ ಪ್ಯಾಕೇಟ್ ಗಳು ಸೇರಿ ಒಟ್ಟು 814 ಕೆಜಿ ಇದರ ಮಾರುಕಟ್ಟೆ ಮೌಲ್ಯ ಒಟ್ಟು ರು 81.44 ಲಕ್ಷ ವಾಗಿದ್ದು, ಮಾಹಿತಿಯ ಪ್ರಕಾರ ಈ ಎಲ್ಲ ಮಾಲು ಆಂಧ್ರ- ಒಡಿಸ್ಸಾ ಮೂಲದಿಂದ ನಗರಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದರು.

ವಿಷಯ ತಿಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಅಬಕಾರಿ ಮತ್ತು ನಿಷೇಧ ಇಲಾಖೆ ಆಗಮಿಸಿದ್ದು ಗಾಂಜಾ ಮಾರಾಟ ಜಾಲದ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿಸಿದೆ.[ಹುಬ್ಬಳ್ಳಿಯಲ್ಲಿ ಗಾಂಜಾ ಸ್ಪಾಟ್, ಆರಕ್ಷಕರ ಭಯವೇ ಇಲ್ಲ]
ನಗರಕ್ಕೆ ಹೆಚ್ಚು ಗಾಂಜಾ ಸರಬರಾಜಾಗುತ್ತಿರುವುದು ಧೂಲ್ ಪೇಟೆಯಿಂದ ಹೀಗಾಗಿ ಗಾಂಜಾ ಆಮದಾಗುತ್ತಿರುವುದರ ಮೇಲೆ ಕಣ್ಣಿರಿಸಲಾಗಿದೆ. ಇಲ್ಲಿನ ವಿಶಾಖ ಎಜೆನ್ಸಿ ಪ್ರದೇಶದಲ್ಲಿ ಹಲವು ಮನೆಗಳಲ್ಲಿ ಗಾಂಜಾವನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿಯಿದೆ ಎಂದು ಸಹಾಯಕ ಅಬಕಾರಿ ಅಧೀಕ್ಷಕ ಎನ್.ಅಂಜಿ ರೆಡ್ಡಿ ತಿಳಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications