ನವೆಂಬರ್ಗೆ ಹುಬ್ಬಳ್ಳಿ- ಚಿತ್ರದುರ್ಗ ಷಟ್ಪಥ ರಸ್ತೆ ಕಾಮಗಾರಿ ಆರಂಭ
ದಾವಣಗೆರೆ, ಜುಲೈ 14 : ಹುಬ್ಬಳ್ಳಿ- ಚಿತ್ರದುರ್ಗ ನಡುವಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-4 ಇನ್ಮುಂದೆ ಷಟ್ಪಥವಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ ವೇಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಗುರುವಾರ ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ಧೇಶ ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ತಿಳಿಸಿದರು.
210 ಕಿ.ಮೀ ಉದ್ದದ ಹೆದ್ದಾರಿ ಮೇಲ್ದರ್ಜೆ ಕಾಮಗಾರಿಯನ್ನು ಚಿತ್ರದುರ್ಗ-ದಾವಣಗೆರೆ, ದಾವಣಗೆರೆ-ಹಾವೇರಿ ಹಾಗೂ ಹಾವೇರಿ-ಹುಬ್ಬಳ್ಳಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಿಭಾಗಕ್ಕೂ ತಲಾ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.
ಕಾಮಗಾರಿಯ ಗುತ್ತಿಗೆ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಬಾಕಿ ಇರುವ ಭೂ ಸ್ವಾಧೀನ ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ಸಿಗುವ ಸಾಧ್ಯತೆ ಇದೆ.
ಸಮಸ್ಯೆಗಳನ್ನು
ನಿವಾರಿಸಿ
ಹೆದ್ದಾರಿ
ಮಾರ್ಗದಲ್ಲಿ
ವಿದ್ಯುತ್
ಟವರ್,
ಕುಡಿಯುವ
ನೀರಿನ
ಪೈಪ್ಲೈನ್
ಸ್ಥಳಾಂತರ
ಕೆಲಸಗಳನ್ನು
ಬೇಗ
ಮುಗಿಸಬೇಕಿದ್ದು,
ಈ
ಬಗ್ಗೆ
ಸಂಬಂಧಪಟ್ಟ
ಇಲಾಖೆ
ಅಧಿಕಾರಿಗಳು
ವಿಳಂಬ
ಮಾಡದೇ
ಪ್ರಾಧಿಕಾರದೊಂದಿಗೆ
ಸಹಕರಿಸಬೇಕು
ಎಂದು
ಸಂಸದ
ಸಿದ್ಧೇಶ
ಅಧಿಕಾರಿಗಳಿಗೆ
ಕಟ್ಟುನಿಟ್ಟಿನ
ಸೂಚನೆ
ನೀಡಿದರು.
ಈಗಿರುವ ಸಮಸ್ಯೆಗಳನ್ನು ನೀಗಿಸಿ ಅಗತ್ಯವಿರುವ ಕಡೆಗಳಲ್ಲಿ ಮೇಲ್ಸೇತುವೆ ಮತ್ತು ಪಾಸಿಂಗ್ ಅಂಡರ್ಬ್ರಿಜ್ ಜತೆಗೆ ಸರ್ವಿಸ್ ರಸ್ತೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಪರಿಹರಿಸಬೇಕು. ಹೆದ್ದಾರಿ ಬದಿಯಲ್ಲಿರುವ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೊಳ್ಳಬೇಕು ಎಂದು ಹೇಳಿದರು.