Just in: ಹುಬ್ಬಳ್ಳಿಯಿಂದ ವಾರಣಾಸಿಗೆ ವಿಶೇಷ ರೈಲು
ಹುಬ್ಬಳ್ಳಿ, ಆ.9: ಹೆಚ್ಚುವರಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೇಡಿಕೆ ಮೇರೆಗೆ ಹುಬ್ಬಳ್ಳಿಯಿಂದ ವಾರಣಾಸಿಗೆ ಒಂದೇ ಮಾರ್ಗದ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಒದಗಿಸಿದೆ.
ರೈಲು ಸಂಖ್ಯೆ 07305 ಶ್ರೀ ಸಿದ್ದಾರೂಡ ಸ್ವಾಮಿ ಹುಬ್ಬಳ್ಳಿ- ಬನಾರಸ್ ವಿಶೇಷ ಎಕ್ಸ್ಪ್ರೆಸ್ ರೈಲು ಆ.10ರಂದು ಸಂಜೆ 6.15ಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ಸ್ವಾಮೀಜಿ ನಿಲ್ದಾಣದಿಂದ ಹೊರಟು ಆ.12ರಂದು ಬೆಳಗ್ಗೆ 8.40ಕ್ಕೆ ಬನಾರಸ್ ನಿಲ್ದಾಣ ತಲುಪುತ್ತದೆ.
ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೊಲ್ಲಾಪುರ, ದೌಂಡ, ಅಹ್ಮದ್ನಗರ, ಕೋಪರಗಾವ್, ಮನ್ಮಾಡ್, ಭೂಸವಾಲ್, ಖಂಡ್ವಾ, ಇಟಾರ್ಸಿ, ಪಿಪರಿಯಾ, ನರಸಿಂಗಪುರ್, ಜಬಲ್ಪುರ್, ಕಟನಿ ಜಂಕ್ಷನ್, ಮೈಹಾರ, ಸತನಾ, ಮಾಣಿಕಪುರ, ಪ್ರಯಾಗರಾಜ್, ಮಿರ್ಜಾಪುರ ಮೂಲಕ ವಾರಣಾಸಿ ತಲುಪುತ್ತದೆ.
ಈ ರೈಲಿನಲ್ಲಿ ಐದು ಹವಾನಿಯಂತ್ರಿ 3ಟೈರ್ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ಗಳನ್ನು ಒಳಗೊಂಡಿರುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
Recommended Video