ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಹುಬ್ಬಳ್ಳಿ, ಸೆಪ್ಟೆಂಬರ್, 19: ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾಗೆ ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ವಾಣಿಜ್ಯ ನಗರಿ ಹುಬ್ಬಳ್ಳಿಗೂ ಭೇಟಿ ನೀಡಲಿದ್ದಾರೆ.
ಇದುವರೆಗೂ ಯಾರೆಲ್ಲಾ ಮೈಸೂರು ದಸರಾ ಉದ್ಘಾಟನೆ ಮಾಡಿದ್ದಾರೆ; ಇಲ್ಲಿದೆ ಮಾಹಿತಿ
ರಾಷ್ಟ್ರಪತಿಯವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪೌರಸನ್ಮಾನ ಏರ್ಪಡಿಸಲಾಗಿದೆ. ಅವರಿಗೆ ನೆನಪಿನ ಕಾಣಿಕೆಯಾಗಿ ಸಿದ್ಧಾರೂಢರ 1.5 ಕೆ.ಜಿ ಬೆಳ್ಳಿಯ ಮೂರ್ತಿಯನ್ನು ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ 70 ನಿಮಿಷಗಳ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಪೌರಸನ್ಮಾನ ಕಾರ್ಯಕ್ರಮದಲ್ಲಿ 5 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. 500 ಜನ ಪೌರ ಕಾರ್ಮಿಕರಿಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಧಾರವಾಡ ಐಐಟಿಗೆ ಭೇಟಿ ನೀಡಿ 400 ವಿದ್ಯಾರ್ಥಿಗಳ ಜೊತೆಗೆ ಅವರು ಸಂವಾದ ನಡೆಸಲಿದ್ದಾರೆ ಎಂದರು.
ಇನ್ನೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿಗೆ ಭೇಡಿ ನೀಡಲಿದ್ದು, ಇವರು ಹುಬ್ಬಳ್ಳಿಗೆ ಭೇಟಿ ನೀಡಲಿರುವ ಮೂರನೇ ರಾಷ್ಟ್ರಪತಿಗಳಾಗಿದ್ದಾರೆ. ಈ ಹಿಂದೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭೇಟಿ ನೀಡಿದ್ದರು.
ದಸರಾ
ಉದ್ಘಾಟನೆಗೆ
ಆಗಮಿಸಲಿರುವ
ರಾಷ್ಟ್ರಪತಿ
2022ರ
ವಿಶ್ವ
ವಿಖ್ಯಾತ
ಮೈಸೂರು
ದಸರಾ
ಉದ್ಘಾಟನೆಯಲ್ಲಿ
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಅವರು
ಭಾಗಿ
ಆಗಲಿದ್ದಾರೆ.
ಆದ್ದರಿಂದ
ಮೊದಲ
ದಿನದ
ಆಹ್ವಾನ
ಪತ್ರಿಕೆ
ಇಂಗ್ಲಿಷ್ನಲ್ಲಿ
ಮುದ್ರಣವಾಗುತ್ತದೆ
ಎಂದು
ಜಿಲ್ಲಾ
ಉಸ್ತುವಾರಿ
ಸಚಿವ
ಎಸ್.ಟಿ
ಸೋಮಶೇಖರ್
ಹೇಳಿದ್ದರು.
ಮೈಸೂರಿನಲ್ಲಿ
ಮಾತನಾಡಿದ
ಅವರು
ರೈತ
ಹಾಗೂ
ಗ್ರಾಮೀಣ
ದಸರಾ
ಸೆಪ್ಟೆಂಬರ್
23ಕ್ಕೆ
ಆರಂಭಗೊಂಡು
25ಕ್ಕೆ
ಅಂತ್ಯ
ಆಗಲಿದೆ.
ಇದನ್ನು
ಕೃಷಿ
ಸಚಿವ
ಬಿ.ಸಿ
ಪಾಟೀಲ್
ಉದ್ಘಾಟನೆ
ಮಾಡಲಿದ್ದಾರೆ
ಎಂದು
ಹೇಳಿದ್ದರು.
ರಾಷ್ಟ್ರಪತಿ
ಕಚೇರಿಗೆ
ಗಣ್ಯರ
ಪಟ್ಟಿ
ರವಾನೆ:
ಹಿಂದಿನ
ವರ್ಷಗಳಲ್ಲಿದ್ದಂತೆ
ದಸರಾ
ಉದ್ಘಾಟನಾ
ಸಮಾರಂಭ
ವೇದಿಕೆಯಲ್ಲಿ
ಉಪಸ್ಥಿತರಿರಬಹುದಾದ
ಮೈಸೂರು
ಹಾಗೂ
ಚಾಮರಾಜನಗರ
ಜಿಲ್ಲೆಗಳ
ಶಾಸಕರು,
ಸಂಸದರು,
ಸಂಬಂಧಿಸಿದ
ಇಲಾಖೆ
ಸಚಿವರು,
ಮೇಯರ್,
ಕಾರ್ಪೊರೇಟರ್ಗಳು,
ಅಧಿಕಾರಿಗಳು
ಸೇರಿದಂತೆ
ಒಟ್ಟು
49
ಗಣ್ಯರ
ಪಟ್ಟಿಯನ್ನು
ರಾಷ್ಟ್ರಪತಿ
ಕಚೇರಿಗೆ
ಕಳುಹಿಸಲಾಗಿದೆ.
ವೇದಿಕೆಯಲ್ಲಿ
ಯಾರಿಗೆ
ಅವಕಾಶ
ಕಲ್ಪಿಸಬೇಕು
ಎಂಬುದನ್ನು
ರಾಷ್ಟ್ರಪತಿ
ಕಚೇರಿಯಿಂದಲೇ
ನಿರ್ದೇಶನ
ನೀಡಲಾಗುತ್ತದೆ.
ಒಂದು
ವೇಳೆ
ವೇದಿಕೆಯಲ್ಲಿ
ಎಲ್ಲರಿಗೂ
ಅವಕಾಶ
ಇಲ್ಲವಾದರೆ
ಮುಂಭಾಗದಲ್ಲಿ
ಆಸನ
ವ್ಯವಸ್ಥೆ
ಮಾಡಲಾಗುವುದು.
ಆ
ದಿನ
ಸಾರ್ವಜನಿಕರಿಗೆ
ನಿರ್ಬಂಧವಿರುವುದಿಲ್ಲ.
ಹಾಗಾಗಿ
ಇನ್ನೂ
2
ಸಾವಿರ
ಆಸನ
ವ್ಯವಸ್ಥೆ
ಮಾಡಲಾಗುತ್ತದೆ
ಎಂದರು.
ದೀಪಾಲಂಕರದಲ್ಲೂ
ಮೂಡಲಿರುವ
ಅಪ್ಪು:
ದಸರಾ
ವಸ್ತು
ಪ್ರದರ್ಶನದಲ್ಲಿ
ಮರಳಿನಲ್ಲಿ
ಪುನೀತ್
ರಾಜ್ಕುಮಾರ್
ಅವರ
ಆಕೃತಿ
ನಿರ್ಮಿಸಲಾಗಿದೆ.
ವಿದ್ಯುತ್
ದೀಪಾಲಂಕಾರದಲ್ಲೂ
ಅಪ್ಪು
ಅವರ
ಆಕೃತಿ
ಸೃಷ್ಟಿ
ಆಗಲಿದೆ.
ಸೆಪ್ಟೆಂಬರ್
27ರಿಂದ
ಯುವ
ದಸರಾ
ಆರಂಭವಾಗಲಿದ್ದು,
ಅಕ್ಟೋಬರ್
1ರಂದು
ನಟ
ಪುನೀತ್
ರಾಜ್
ಕುಮಾರ್
ಹಾಡಿರುವ
ಹಾಗೂ
ಅಭಿನಯಿಸಿರುವ
ಗೀತ
ಗಾಯನ
ನಡೆಯಲಿದೆ.
ಇನ್ನು
ದಸರಾ
ಚಲನಚಿತ್ರೋತ್ಸವದಲ್ಲಿ
ಸೆಪ್ಟೆಂಬರ್
27ರಂದು
ಅಪ್ಪು
ಅಭಿನಯದ
ಚಿತ್ರಗಳ
ಪ್ರದರ್ಶನ
ಏರ್ಪಡಿಸಲಾಗಿದೆ.
ಇದನ್ನು
ಅವರ
ಪತ್ನಿ
ಅಶ್ವಿನಿ
ಅವರು
ಉದ್ಘಾಟನೆ
ನೆರವೇರಿಸಲು
ಒಪ್ಪಿಗೆ
ಸೂಚಿಸಿದ್ದಾರೆ
ಎಂದು
ಸಚಿವ
ಎಸ್.ಟಿ.ಸೋಮಶೇಖರ್
ತಿಳಿಸಿದರು.