ಹುಬ್ಬಳ್ಳಿ: ಆಸ್ತಿಗಾಗಿ ಸಹೋದರಿ ಕೊಲೆ ಯತ್ನ, ಪೊಲೀಸರ ಅತಿಥಿಯಾದ ಸಹೋದರ

ಹುಬ್ಬಳ್ಳಿ, ಜುಲೈ 20: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಇಲ್ಲಿನ ಶಾಂತಿ ಕಾಲೊನಿ ಬಳಿ ಹೆಲ್ಮೆಟ್ ಹಾಕಿಕೊಂಡು ತನ್ನ ಸಹೋದರಿಯ ಕೊಲೆಗೆ ಯತ್ನಿಸಿದ್ದ ರಾಮಣ್ಣ ಮಣ್ಣೂರ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಶೋಕನಗರ ಠಾಣೆ ಪೊಲೀಸರು ಬೆಳಗಾವಿಯ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ ರಾಮಣ್ಣ ಮಣ್ಣೂರ ಎಂಬುವನನ್ನು ಬಂಧಿಸಿದ್ದಾರೆ. ನವಲಗುಂದದ ಹೆಬ್ಬಾಳ ಕ್ರಾಸ್ ಬಳಿ ರಾಮಣ್ಣನನ್ನು ಬಂಧಿಸಿರುವ ಪೊಲೀಸರು, ಆತನಿಂದ ಹಲ್ಲೆ ಮಾಡಲು ಬಳಸಿದ್ದ ಮಚ್ಚನ್ನು ವಶಕ್ಕೆ ಪಡೆದಿದ್ದಾರೆ.

Police has arrested Ramanna Mannur, who attacked his own sister

ರಾಮಣ್ಣನ ಸಹೋದರಿಯಾಗಿರುವ ಯಲ್ಲವ್ವ ಆಸ್ತಿಯಲ್ಲಿ ಪಾಲು ಕೊಡುವಂತೆ ಪೀಡಿಸುತ್ತಿದ್ದಳು. ಇದಕ್ಕಾಗಿ ಆಕೆಯ ಕೊಲೆಗೆ ರಾಮಣ್ಣ ಸಂಚು ರೂಪಿಸಿದ್ದ. ಈತ ಜುಲೈ 18 ರಂದು ಹೆಲ್ಮೆಟ್ ಹಾಕಿಕೊಂಡು ಮಚ್ಚಿನಿಂದ ಯಲ್ಲವ್ವ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯನ್ನು ತಡೆಯಲು ಬಂದ ಮಗಳು ಭಾರತಿ, ಆಕೆಯ ಮೈದುನ ಪ್ರದೀಪ್ ಅವರ ಮೇಲೂ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ.

ಇದೀಗ ಆತನನ್ನು ಬೆನ್ನತ್ತಿ ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+