Get Updates
Get notified of breaking news, exclusive insights, and must-see stories!

ಸಂಸದ ಜೋಶಿಗೆ ಬೆದರಿಕೆ ಪತ್ರ: ತನಿಖೆಗೆ ಪೊಲೀಸ್ ಆಯುಕ್ತ ಆದೇಶ

ಹುಬ್ಬಳ್ಳಿ, ಫೆಬ್ರವರಿ 03 : ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಕುರಿತಂತೆ ತನಿಖೆ ನಡೆಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ. ನಾಗರಾಜ್ ಸೂಚಿಸಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಲಷ್ಕರ್ ತೋಯಿಬಾ ಸಂಘಟನೆಯಿಂದ ಬೆದರಿಕೆ ಎದುರಾಗಿತ್ತು ಆ ವೇಳೆಯೇ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಈಗಲೂ ಅವರಿಗೆ ಭದ್ರತೆಯನ್ನು ಮುಂದುವರೆಸಲಾಗುವುದು ಎಂದರು.

Police enquiry on threats to MP Prahlad Joshi

ಈ ಹಿಂದೆ ಬಸವರಾಜ ಹೊರಟ್ಟಿ ಸೇರಿದಂತೆ ಹಲವರಿಗೆ ಈ ತರಹದ ಪತ್ರಗಳು ಬಂದಿವೆ. ಡಿಸಿಪಿ ರೇಣುಕಾ ಸುಕುಮಾರ್ ಅವರಿಗೆ ತನಿಖೆ ಬಹಿಸಲಾಗಿದೆ. ಕುಮಾರ್ ಪಿಳ್ಳೈ ಹತ್ಯೆ ಪ್ರಕರಣದ ಆರೋಪಗಳ ವಿಚಾರಣೆ ನಡೆಯುತ್ತಿದೆ. ಸೈಂಟಿಸ್ಟ್ ಮಂಜ ಮತ್ತು ಸಹಚರರಿಂದ ಕಂಟ್ರಿಮೇಡ್ ಎರಡು ಪಿಸ್ತೂಲು, 8 ಜೀವಂತ ಗುಂಡುಗಳನ್ನು ವಶಪಡೆಯಲಾಗಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+