ರಾಮಮಂದಿರ ನಿರ್ಮಾಣಕ್ಕೆ ಶಪಥ: 15 ವರ್ಷಗಳ ಬಳಿಕ ಕೇಶಕ್ಕೆ ಕತ್ತರಿ ಹಾಕಿದ ಗನು ಜರತಾಘರ
ಹುಬ್ಬಳ್ಳಿ, ಫೆಬ್ರವರಿ 23: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಬಹುದಿನಗಳ ಕನಸು ಮತ್ತು ಹೋರಾಟ. ಅನೇಕರು ಅನೇಕ ರೀತಿಯಲ್ಲಿ ತ್ಯಾಗ ಮಾಡಿದ್ದು, ಬಲಿದಾನ ಸಹ ಆಗಿದೆ. ಜೊತೆಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ತಮ್ಮದೇ ಆದ ರೀತಿಯಲ್ಲಿ ಬೇಡಿಕೆ ಇರಿಸಿಕೊಂಡಿದ್ದರು. ಇದರಲ್ಲಿ ಹುಬ್ಬಳ್ಳಿಯ ಗನು ಅಲಿಯಾಸ್ ಗಣೇಶ ಜರತಾರಘರ ಸಹ ಒಬ್ಬರು.
ಸತತವಾಗಿ 15 ವರ್ಷ 6 ತಿಂಗಳು ಕಾಲ ಕೇಶ ಮುಂಡನ ಮಾಡುದಿಲ್ಲ ಎಂದು ಶಪಥ ಮಾಡಿದರು. ಈಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆದ ಬಳಿಕ ಕೇಶ ಮುಂಡನ ನೀಡಿದರು.

2003ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಹುಬ್ಬಳ್ಳಿಯಿಂದ ಅಶೋಕ ಸಿಂಘಾಲ್ ಅವರ ಕರೆ ಮೆರೆಗೆ ನೂರಾರು ಕರ ಸೇವಕರು ಹೋಗಿದ್ದರು. ಸಾಕಷ್ಟು ತೊಂದರೆ ನಡುವೆಯೂ ಗನು ಅಲಿಯಾಸ್ ಗಣೇಶ ಜರತಾಘರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂದು ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಕೂಡದು ಎಂದು ಕೆಲ ಸಂಘಟನೆಗಳು ಹಾಗೂ ಕೆಲವರು ಷಡ್ಯಂತ್ರ ಮಾಡಿದ್ದರು. ಅಂದಿನ ಸನ್ನಿವೇಶದಿಂದ ಬೇಸತ್ತ ಗನು ಅವರು ತಾವು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನೆ ಆಗುವವರೆಗೂ ಕೇಶ ಮುಂಡನೆ ಮಾಡಿಸಿಕೊಳ್ಳಲ್ಲ ಅಂತಾ ಶಪಥ ಮಾಡಿದರು. ಅಂದಿನಿಂದ ಇಂದಿನವರೆಗೂ ಅನೇಕ ಹೋರಾಟ ತೊಂದರೆ ಅನುಭವಿಸಿದವರು ಗನು ಅಲಿಯಾಸ್ ಗಣೇಶ ಜರತಾರಘರ.

ಸಂಘ ಪರಿವಾರದ ಕುಟುಂಬದಿಂದ ಬಂದ ಇವರು ಬಾಲ್ಯದಿಂದಲೇ ಆರ್ಎಸ್ಎಸ್ನಲ್ಲಿ ಕಾರ್ಯಕರ್ತರಾಗಿ ಅನೇಕ ಹಿಂದೂ ಪರ ಹೋರಾಟದಲ್ಲಿ ಭಾಗವಹಿಸಿದ್ದರು. 1991ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋರಾಟ ಮಾಡಿ ಸೆರೆಮನೆ ವಾಸ ಸಹ ಅನುಭವಿಸಿದವರು.
ವಿಶ್ವ ಹಿಂದೂ ಪರಿಷತ್ ಸಂಘಟನೆಗೆ 2000 ರಲ್ಲಿ ಸೇರ್ಪಡೆಗೊಂಡು ಅನೇಕ ಹೋರಾಟ ಮಾಡಿ 2004ರಲ್ಲಿ ಭಜರಂಗದಳದ ಸಹ ಸಂಚಾಲಕ ಹಾಗೂ 2011ರಲ್ಲಿ ಸಂಚಾಲಕರಾಗಿ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಡೆಸಿಕೊಂಡು ಹೋದವರು.
ಇಂತಹ ರಾಷ್ಟ್ರ ಭಕ್ತರಾದ ಗನು ಅಲಿಯಾಸ್ ಗಣೇಶ ಅವರ ಒಡನಾಟ ಹಾಗೂ ಮಾರ್ಗದರ್ಶನ ನಾವು ಬೆಳದವರು ಎಂದ ಅವರ ಹಿಂಬಾಲಕರಾದ ಶಿಷ್ಯ ಸಿದ್ದು ಶೆಟ್ಟರ್, ಎಷ್ಟೇ ಬೆದರಿಕೆ ಕರೆ ಬಂದವು, ಅವರ ಮೇಲೆ ಹಲ್ಲೆ ನಡೆಸಲಾಯಿತು. ಯಾವುದಕ್ಕೂ ಹೆದರದ ಅವರು ಹೋರಾಟ ಮಾಡಿ ತಮ್ಮದೇ ಆದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಜೊತೆಗೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಮಾಡುವವರೆಗೂ ಹೋರಾಟ ಬಿಡರದ ಛಲದಂಕ ಮಲ್ಲ ಅವರು ಎಂದು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಇಡೀ ಜಗತ್ತೇ ಅಯೋಧ್ಯೆಯಲ್ಲಿ ರಾಮನಮಂದಿರ ಆಗಬೇಕು ಎನ್ನುವಾಗ ಕೆಲವರು ವಿರೋಧ ಮಾಡಿದರು. ಆದ್ದರಿಂದ ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಜೊತೆಗೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಮಾಡುವವರೆಗೋ ಹೋರಾಟ ಬಿಡಲ್ಲ ಮತ್ತು ನನ್ನ ಕೇಶ ಮುಂಡನ ಮಾಡಿಸಿಕೊಳ್ಳಲ್ಲ ಅಂತಾ ಶಪಥ ಮಾಡಿ ಬರೋಬ್ಬರಿ 15 ವರ್ಷ 6 ತಿಂಗಳು ಕಾಲ ಕೇಶ ಮುಂಡನ ಬಿಟ್ಟಿದ್ದರು .
ಈಗ ಮಂದಿರ ನಿರ್ಮಾಣದ ಜೊತೆಗೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಆಗಿದೆ. ಕೇಶ ಮುಂಡನ ಕೊಟ್ಟಿದ್ದಾರೆ ಎಂದು ತಮ್ಮ ಶಪಥ ಬಗ್ಗೆ ಗನು ಅಲಿಯಾಸ್ ಗಣೇಶ ಜರತಾರಘರ ಹೇಳಿದರು. ಇಂತಹ ಅನೇಕ ಹೋರಾಟಗಾರರ ಭಕ್ತರ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾನೆ ಆಗಿ ಕೋಟ್ಯಾಂತರ ಭಕ್ತರು ದರ್ಶನ ಪಡೆಯುವಂತಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications