ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಕಿಡ್ನಾಪ್ ಆದ ಬಾಲಕ ಬಚಾವ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್, 31: ದಾವಣಗೆರೆಯಲ್ಲಿ ಐದನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಆಕಾಶ್ ಅಪಹರಣಕಾರರಿಂದ ತಪ್ಪಿಸಿಕೊಂಡು ಹುಬ್ಳಳ್ಳಿಯ ರೈಲ್ವೆ ಪೊಲೀಸರಿಗೆ ಸಿಕ್ಕಿದ್ದಾನೆ.

ದಾವಣಗೆರೆಯ ಮಾಡರ್ನ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಕೆ.ಸಿ.ಆಕಾಶ ಎಂಬ ಬಾಲಕನು ತನ್ನ ಅಜ್ಜಿಯೊಂದಿಗೆ ಖಾಸಗಿ ಆಸ್ಪತ್ರೆಗೆ ಬಂದಾಗ ನಾಲ್ವರು ದುಷ್ಕರ್ಮಿಗಳು ಮತ್ತು ಬರಿಸುವ ಔಷಧ ನೀಡಿ ಕ್ರೂಸರ್ ನಲ್ಲಿ ಅಪಹರಿಸಿದ್ದರು.[ಪೊಲೀಸನ ವೇಷ ಧರಸಿ ಬಂದ ಅಸಲಿ ಕಾರು ಕಳ್ಳ!]

kidnapped school boy

ದಾವಣಗೆರೆಯಿಂದ ಹುಬ್ಬಳ್ಳಿ ಕಡೆಗೆ ಕ್ರೂಸರ್ ವಾಹನದಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ವಾಹನ ನಿಲ್ಲಿಸಲಾಗಿದೆ. ಈ ಸಮಯದಲ್ಲಿ ಎಚ್ಚರಗೊಂಡ ಆಕಾಶ್ ಕೂಡಲೇ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಹುಬ್ಬಳ್ಳಿಗೆ ಬಂದು ದಾವಣಗೆರೆಗೆ ಹೋಗಲು ರೈಲಿಗಾಗಿ ಕಾಯುತ್ತಿರುವಾಗ ಹುಬ್ಬಳ್ಳಿ ರೈಲ್ವೆ ಪೊಲೀಸರ ಕೈಗೆ ಸಿಕ್ಕಿದ್ದಾನೆ.

ಆತನನ್ನು ವಿಚಾರಿಸಿದಾಗ ಅಪಹರಣದ ಪ್ರಕರಣ ಬಯಲಿಗೆ ಬಂದಿದೆ. ಕ್ರೂಸರ್ ನಲ್ಲಿ ಇನ್ನೂ 6 ಮಕ್ಕಳಿದ್ದಾರೆ ಎಂದು ಹೇಳಿದ ಆಕಾಶ್, ಅಪಹರಿಸಿದ ಕೂಡಲೇ ಶಾಲಾ ಸಮವಸ್ತ್ರ ತೆಗೆಸಿ, ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಹೇಳಿದ್ದಾನೆ.

English summary
A school boy kidnapped in Davanagere escaped from Kidnappers. He reached Hubballi railway station, enquired by railway police. K.C.Akash is a student of Davanagere modern high school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X