ರಣಜಿಯಲ್ಲಿ ಪ್ರಿಯಾಂಕ ಪಾಂಚಾಲ್ ದ್ವಿಶತಕ
ಹುಬ್ಬಳ್ಳಿ, ನವೆಂಬರ್ 23: ಗುಜರಾತ್ ತಂಡವು ಆರಂಭಿಕ ಆಟಗಾರ ಪ್ರಿಯಾಂಕ ಪಾಂಚಾಲ್ ರ ದ್ವಿಶತಕದ ನೆರವಿನೊಂದಿಗೆ ಮುಂಬಯಿ ತಂಡದ ವಿರುದ್ಧ 437 ರನ್ ಗಳ ಬೃಹತ್ ಕಲೆ ಹಾಕಿತು.
ನಗರದ ರಾಜನಗರ ಕೆಎಎಸ್ಸಿಗೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮಂಗಳವಾರ ಗುಜರಾತ್ ತಂಡದ ಪ್ರಿಯಾಂಕ 232 ರನ್ ಗಳಿಸಿ ತಮ್ಮ ಚೊಚ್ಚಲ ದ್ವಿಶತಕ ಪೂರೈಸಿದರು.
ಪಾಂಚಾಲ್ 623 ನಿಮಿಷ ಕ್ರೀಸ್ ನಲ್ಲಿದ್ದು 434 ಎಸೆತಗಳಲ್ಲಿ 28 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 232 ರನ್ ಗಳಿಸಿ ಧವಲ್ ಕುಲಕರ್ಣಿ ಅವರ ಬೌಲಿಂಗ್ ಗೆ ಕ್ಲೀನ್ ಬೌಲ್ಡ್ ಅಗಿ ತಮ್ಮ ವಿಕೆಟ್ ಒಪ್ಪಿಸಿದರು.[ಹುಬ್ಬಳ್ಳಿಯಲ್ಲಿ ನ.21 ರಿಂದ ರಣಜಿ ಕ್ರಿಕೆಟ್ ಪಂದ್ಯ]

ತಮ್ಮ ದ್ವಿಶತಕದೊಂದಿಗೆ ಪಾಂಚಾಲ್ ರಾಜನಗರದ ಮೈದಾನದಲ್ಲಿ ಕ್ರಿಕೆಟ್ ನ ಮೂರನೇ ದ್ವಿಶತಕ ಹಾಗೂ ಗರಿಷ್ಠ ರನ್ ಗಳಿಸಿದ ಆಟಗಾರನೆಂಬ ದಾಖಲೆ ನಿರ್ಮಿಸಿದರು. 2014-15 ರಲ್ಲಿ ಕರ್ನಾಟಕ ತಂಡದ ವಿರುದ್ಧ ಹರ್ಯಾಣದ ಜಯಂತ್ ಯಾದವ್ (211), ಅಮಿತ ಮಿಶ್ರಾ (ಅಜೇಯ 202) ಧ್ವಿಶತಕ ಗಳಿಸಿದ್ದರು.
ಗುಜರಾತ್ ತಂಡವು ಒಟ್ಟು 160.1 ಓವರ್ ಗಳಲ್ಲಿ 437 ರ ನ್ ಗಳಿಸಿ ಆಲೌಟ್ ಆಯಿತು. ಗುಜರಾತ್ ತಂಡವನ್ನು ಮಣಿಸಲು ಮುಂಬಯಿ ತಂಡದ 10 ಅಟಗಾರರು ಬೌಲಿಂಗ್ ಮಾಡಿದರೂ ಕೇವಲ ವಿಶಾಲ ದಾಬೋಲ್ಕರ 6 ವಿಕೆಟ್ ಪಡೆಯಲು ಯಶಸ್ವಿಯಾದರು. ಉಳಿದಂತೆ ಜಸ್ಪ್ರೀತ್ ಬೂಮ್ರ 2, ಕರಣ ಪಟೇಲ್ 1 ವಿಕೆಟ್ ಪಡೆದರು.
ಯಾದವ್ ಆಸ್ಪತ್ರೆಗೆ:
ಮುಂಬಯಿ ತಂಡದ ಆಟಗಾರ ಸೂರ್ಯಕಾಂತ ಯಾದವ್ ಅನಾರೋಗ್ಯದಿಂದಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹವಾಮಾಣ ಬದಲಾವಣೆಯಿಂದ ಸೋಮವಾರವೇ ವಾಂತಿ-ಭೇದಿ ಶುರುವಾಗಿತ್ತೆನ್ನಲಾಗಿದೆ. ಮಂಗಳವಾರ ಚೇತರಿಸಿಕೊಂಡು ಮೈದಾನಕ್ಕಿಳಿದ್ದ ಯಾದವ್, ಮತ್ತೆ ವಾಂತಿ-ಭೇದಿಯಿಂದಾಗಿ ಬಳಲಾರಂಭಿಸಿದರು. ಕೂಡಲೇ ಅಂಬ್ಯುಲೆನ್ಸ್ ಮೂಲಕ ನಗರದ ಕಿಮ್ಸ್ ಗೆ ದಾಖಲಾಯಿಸಲಾಯಿತು. ಇನ್ನಿಬ್ಬರು ಆಟಗಾರರಿಗೆ ಕೂಡ ವಾಂತಿ-ಭೇದಿ ಶುರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಕೋರ್ ವಿವರ:
ಗುಜರಾತ್ ಪ್ರಥಮ ಇನ್ನಿಂಗ್ಸ್
160.1 ಓವರ್, 437 ರನ್.
ಮುಂಬಯಿ ಪ್ರಥಮ ಇನ್ನಿಂಗ್ಸ್
21 ಓವರ್ 3 ವಿಕೆಟ್ ಗೆ 58 ರನ್.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications