ರಣಜಿಯಲ್ಲಿ ಪ್ರಿಯಾಂಕ ಪಾಂಚಾಲ್ ದ್ವಿಶತಕ
ಹುಬ್ಬಳ್ಳಿ, ನವೆಂಬರ್ 23: ಗುಜರಾತ್ ತಂಡವು ಆರಂಭಿಕ ಆಟಗಾರ ಪ್ರಿಯಾಂಕ ಪಾಂಚಾಲ್ ರ ದ್ವಿಶತಕದ ನೆರವಿನೊಂದಿಗೆ ಮುಂಬಯಿ ತಂಡದ ವಿರುದ್ಧ 437 ರನ್ ಗಳ ಬೃಹತ್ ಕಲೆ ಹಾಕಿತು.
ನಗರದ ರಾಜನಗರ ಕೆಎಎಸ್ಸಿಗೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮಂಗಳವಾರ ಗುಜರಾತ್ ತಂಡದ ಪ್ರಿಯಾಂಕ 232 ರನ್ ಗಳಿಸಿ ತಮ್ಮ ಚೊಚ್ಚಲ ದ್ವಿಶತಕ ಪೂರೈಸಿದರು.
ಪಾಂಚಾಲ್ 623 ನಿಮಿಷ ಕ್ರೀಸ್ ನಲ್ಲಿದ್ದು 434 ಎಸೆತಗಳಲ್ಲಿ 28 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 232 ರನ್ ಗಳಿಸಿ ಧವಲ್ ಕುಲಕರ್ಣಿ ಅವರ ಬೌಲಿಂಗ್ ಗೆ ಕ್ಲೀನ್ ಬೌಲ್ಡ್ ಅಗಿ ತಮ್ಮ ವಿಕೆಟ್ ಒಪ್ಪಿಸಿದರು.[ಹುಬ್ಬಳ್ಳಿಯಲ್ಲಿ ನ.21 ರಿಂದ ರಣಜಿ ಕ್ರಿಕೆಟ್ ಪಂದ್ಯ]

ತಮ್ಮ ದ್ವಿಶತಕದೊಂದಿಗೆ ಪಾಂಚಾಲ್ ರಾಜನಗರದ ಮೈದಾನದಲ್ಲಿ ಕ್ರಿಕೆಟ್ ನ ಮೂರನೇ ದ್ವಿಶತಕ ಹಾಗೂ ಗರಿಷ್ಠ ರನ್ ಗಳಿಸಿದ ಆಟಗಾರನೆಂಬ ದಾಖಲೆ ನಿರ್ಮಿಸಿದರು. 2014-15 ರಲ್ಲಿ ಕರ್ನಾಟಕ ತಂಡದ ವಿರುದ್ಧ ಹರ್ಯಾಣದ ಜಯಂತ್ ಯಾದವ್ (211), ಅಮಿತ ಮಿಶ್ರಾ (ಅಜೇಯ 202) ಧ್ವಿಶತಕ ಗಳಿಸಿದ್ದರು.
ಗುಜರಾತ್ ತಂಡವು ಒಟ್ಟು 160.1 ಓವರ್ ಗಳಲ್ಲಿ 437 ರ ನ್ ಗಳಿಸಿ ಆಲೌಟ್ ಆಯಿತು. ಗುಜರಾತ್ ತಂಡವನ್ನು ಮಣಿಸಲು ಮುಂಬಯಿ ತಂಡದ 10 ಅಟಗಾರರು ಬೌಲಿಂಗ್ ಮಾಡಿದರೂ ಕೇವಲ ವಿಶಾಲ ದಾಬೋಲ್ಕರ 6 ವಿಕೆಟ್ ಪಡೆಯಲು ಯಶಸ್ವಿಯಾದರು. ಉಳಿದಂತೆ ಜಸ್ಪ್ರೀತ್ ಬೂಮ್ರ 2, ಕರಣ ಪಟೇಲ್ 1 ವಿಕೆಟ್ ಪಡೆದರು.
ಯಾದವ್ ಆಸ್ಪತ್ರೆಗೆ:
ಮುಂಬಯಿ ತಂಡದ ಆಟಗಾರ ಸೂರ್ಯಕಾಂತ ಯಾದವ್ ಅನಾರೋಗ್ಯದಿಂದಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹವಾಮಾಣ ಬದಲಾವಣೆಯಿಂದ ಸೋಮವಾರವೇ ವಾಂತಿ-ಭೇದಿ ಶುರುವಾಗಿತ್ತೆನ್ನಲಾಗಿದೆ. ಮಂಗಳವಾರ ಚೇತರಿಸಿಕೊಂಡು ಮೈದಾನಕ್ಕಿಳಿದ್ದ ಯಾದವ್, ಮತ್ತೆ ವಾಂತಿ-ಭೇದಿಯಿಂದಾಗಿ ಬಳಲಾರಂಭಿಸಿದರು. ಕೂಡಲೇ ಅಂಬ್ಯುಲೆನ್ಸ್ ಮೂಲಕ ನಗರದ ಕಿಮ್ಸ್ ಗೆ ದಾಖಲಾಯಿಸಲಾಯಿತು. ಇನ್ನಿಬ್ಬರು ಆಟಗಾರರಿಗೆ ಕೂಡ ವಾಂತಿ-ಭೇದಿ ಶುರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಕೋರ್ ವಿವರ:
ಗುಜರಾತ್ ಪ್ರಥಮ ಇನ್ನಿಂಗ್ಸ್
160.1 ಓವರ್, 437 ರನ್.
ಮುಂಬಯಿ ಪ್ರಥಮ ಇನ್ನಿಂಗ್ಸ್
21 ಓವರ್ 3 ವಿಕೆಟ್ ಗೆ 58 ರನ್.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications