ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಸಾಲ ಬಾಧೆಗೆ ಮತ್ತಿಬ್ಬರು ರೈತರ ಬಲಿ

ಸೋಮನಾಥ ಹಳ್ಳಿ ಹಾಗೂ ಬ್ಯಾಡರ ಹಳ್ಳಿಯ ರೈತರ ಸಾವು; ಮುಂದುವರಿದೇ ಇದೇ ರಾಜ್ಯದ ಅನ್ನದಾತರ ಆತ್ಮಹತ್ಯೆ ಪ್ರಕರಣ

|
Google Oneindia Kannada News

ಹಾಸನ, ಮೇ 4: ಸಾಲ ಹೊರೆಯಿಂದ ಬೇಸತ್ತಿದ್ದ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಸೋಮನಾಥಹಳ್ಳಿಯ ಗ್ರಾಮದ ಚಿಕ್ಕೇಗೌಡ ( 44) ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಗೂರು ಬ್ಯಾಡರಹಳ್ಳಿ ಗ್ರಾಮದ ರಾಮಯ್ಯ ( 41) ತನ್ನ ಹೊಲದ ಹಲಸಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

Two farmers in Hasan committs suicide

ಬೆಳೆ ನಷ್ಟ ಹಾಗೂ ಬ್ಯಾಂಕ್ , ಕೈ ಸಾಲ ತೀರಿಸಲಾಗದೇ ಆ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರೈತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿ ಆತ್ಮಹತ್ಯೆ: ಲೋಕೋಪಯೋಗಿ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಶಿವ ಪ್ರಕಾಶ್ ಎಂಬುವರ ಪತ್ನಿ ರಾಧಿಕಾ ( 36) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಧಿಕಾ ಅವರು ಶಿವಪ್ರಕಾಶ್ ಅವರನ್ನು ಕೈ ಹಿಡಿದು ಎಂಟು ವರ್ಷಗಳಾಗಿದ್ದವು. ಪತಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two farmers committed suicide due to loan burden and crop loss in Hasan on May 4th, 2017. These farmers belong to Channarayapattana Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X