COVID JN-1 Death in Karnataka: ಕೊರೊನಾ ರೂಪಾಂತರಿಗೆ ರಾಜ್ಯದಲ್ಲಿ ಮೊದಲ ಬಲಿ-ಎಲ್ಲಿ?
ಹಾಸನ, ಡಿಸೆಂಬರ್, 25: ಈ ಹಿಂದೆ ಕೊರೊನಾ ಇಡೀ ದೇಶ ಅಲ್ಲದೆ, ಇಡೀ ಪ್ರಪಂಚವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಬಳಿಕ ಒಮಿಕ್ರಾನ್ ಕಾಟ. ಇದೀಗ ರೂಪಾಂತರಿ ಜೆಎನ್-1 ತಾಂಡವವಾಡುತ್ತಿದ್ದು, ಈ ವೈರಸ್ಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಲಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾವ ಜಿಲ್ಲೆಯಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೊರೊನಾ ಉಪ ತಳಿ ಜೆಎನ್ 1ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಹಾಸನ ಜಿಲ್ಲೆಯ ಐವರಲ್ಲಿ ಓಮ್ರಿಕಾನ್ ಜೆಎನ್-1 ರೂಪಾಂತರಿ ತಳಿ ಪತ್ತೆಯಾಗಿದ್ದು, ಈ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿ ಚನ್ನರಾಯಪಟ್ಟಣ ಮೂಲದವರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಜೆಎನ್-1 ಸೋಂಕು ತಗುಲಿತ್ತು. ಆದರೆ ಆ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನಿಗೆ ಜೆಎನ್-1 ಸೋಂಕು ತಗುಲಿರುವುದು ವರದಿಯಲ್ಲಿ ತಿಳಿದುಬಂದಿದೆ ಅಂತಾ ಟಿವಿ 9 ಕನ್ನಡ ವರದಿ ಮಾಡಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಯಾಂಪಲ್ಗಳನ್ನು ಜೆನಾಮಿಕ್ಗೆ ಕಳುಹಿಸಿತ್ತು. ಸೋಮವಾರ (ಡಿಸೆಂಬರ್ 25) ಐವರಲ್ಲಿ ಜೆಎನ್-1 ಸೋಂಕು ದೃಢಪಟ್ಟಿದ್ದು, ಈ ಪೈಕಿ ಚನ್ನರಾಯಪಟ್ಟಣದ ವ್ಯಕ್ತಿ ಈಗಾಗಲೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ವರು ಹೋಂ ಐಸೋಲೇಷನ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಜನರು ಭಯಪಡಬಾರದು ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ ಅಂತಾ ವರದಿ ಮಾಡಿದೆ.












Click it and Unblock the Notifications