ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ
ಹಾಸನ, ನವೆಂಬರ್ 05: ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡ್ತಾರೆ, ಸೂಪರ್ ಸಿಎಂ ರೀತಿ ನಡನೆದುಕೊಳ್ಳುತ್ತಾರೆ ಎಂದೆಲ್ಲಾ ಕಾಂಗ್ರೆಸ್ ಸಚಿವರು ಅಸಮಾಧಾನ ಹೊಂದಿದ್ದ ಎಚ್ಡಿ.ರೇವಣ್ಣ ಅವರನ್ನು ಇಂದು ಅದೇ ಕಾಂಗ್ರೆಸ್ನ ಸಚಿವೆ ಜಯಮಾಲಾ ಅವರು ಹಾಡಿ ಹೊಗಳಿದ್ದಾರೆ.
ಹಾಸನದ ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು, ರೇವಣ್ಣ ಬದುಕಿರುವವರೆಗೂ ಚುನಾವಣೆಯಲ್ಲಿ ಅವರಿಗೆ ಸೋಲೆಂಬುದೇ ಇಲ್ಲ, ಅವರು ಸದಾ ಶಾಸಕರಾಗುತ್ತಲೇ ಇರುತ್ತಾರೆ ಎಂದು ಹೊಗಳಿದ್ದಾರೆ.
ರೇವಣ್ಣ ಅವರು ಹಾಸನದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿದರೆ ಗೊತ್ತಾಗುತ್ತದೆ ಅವರು ಎಂತಹಾ ಆಡಳಿತಗಾರ ಎಂದು, ವಿಧಾನಸೌಧದಲ್ಲಿ ಏಕೆ ಹಾಸನದಲ್ಲಿ ಆದಂತ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಬೇಕು ಎಂಬುದು ನನಗೆ ಗೊತ್ತಾಗಿದೆ ಎಂದು ಹಾಸನ ಅಭಿವೃದ್ಧಿಯನ್ನು ಹೊಗಳಿದರು ಜಯಮಾಲಾ.

ರೇವಣ್ಣ ಸೋಲಲು ದೇವರು ಬಿಡುವುದಿಲ್ಲ
ಮಹಿಳೆಯರು, ಮಕ್ಕಳ ಮೇಲೆ ರೇವಣ್ಣ ಹೊಂದಿರುವ ಮಾನವೀಯತೆ ದೃಷ್ಠಿ ಅವರು ದೇವರನ್ನು ನಂಬುವ ಪರಿ ರೇವಣ್ಣ ಅವರನ್ನು ಎಂದಿಗೂ ಸೋಲಲು ಬಿಡುವುದಿಲ್ಲ ಎಂದ ಜಯಮಾಲಾ ಹಾಸನದಂತಹಾ ಸ್ವಚ್ಛ ನಗರವನ್ನು ನೋಡಿಲ್ಲ ಎಂದರು.

ಭಟ್ಟಾರಕ ಸ್ವಾಮಿಯ ಬಿಟ್ಟು ರೇವಣ್ಣಗೆ ಹೊಗಳಿಕೆ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭದಲ್ಲಿ ಜಯಮಾಲಾ ಅವರು ಈ ಮಾತುಗಳನ್ನು ಹೇಳಿದರು. ಭಟ್ಟಾರಕ ಸ್ವಾಮೀಜಿ ಅವರಿಗೆ ಪ್ರಶಸ್ತಿ ನೀಡಿದ ಜಯಮಾಲಾ ಹೊಗಳಿದ್ದು ಮಾತ್ರ ರೇವಣ್ಣ ಅವರನ್ನು!

ಮಾಜಿ ಸಚಿವ ಎ.ಮಂಜು ಕಿಡಿ
ಜಯಮಾಲಾ ಅವರು ಸಚಿವ ರೇವಣ್ಣ ಅವರನ್ನು ಹೊಗಳಿರುವುದಕ್ಕೆ ಮಾಜಿ ಕಾಂಗ್ರೆಸ್ ಸಚಿವ ಎ.ಮಂಜು ಕಿಡಿ ಕಾರಿದ್ದಾರೆ. ರಾಜಕೀಯ ಅಜ್ಞಾನದಿಂದ ಜಯಮಾಲಾ ಅವರು ಹೀಗೆಲ್ಲಾ ಮಾತನಾಡಿದ್ದಾರೆ. ಅವರಿಗೆ ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೆ ಎಂಬುದು ಸಹ ನೆನಪಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಆಕ್ಸಿಡೆಂಟಲ್ ಮಿನಿಸ್ಟರ್
ಹಾಡು ಹೇಳಿಕೊಂಡು, ನೃತ್ಯ ಮಾಡಿಕೊಂಡು ಆರಾಮವಾಗಿದ್ದ ಜಯಮಾಲಾ ಅವರು ಅದೃಷ್ಟವಶಾತ್ ಸಚಿವೆ ಆಗಿದ್ದಾರೆ. ಅವರು ಆಕ್ಸಿಡೆಂಟಲ್ ಮಿನಿಸ್ಟರ್ ಅಷ್ಟೆ ಅವರಿಗೆ ರಾಜಕೀಯ ಅನುಭವವಾಗಲಿ, ಅದರ ಜ್ಞಾನವಾಗಲಿ ಇಲ್ಲ ಎಂದು ಜಯಮಾಲಾ ಅವರನ್ನು ಎ.ಮಂಜು ಟೀಕಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications