ಅರಕಲಗೂಡಿನಲ್ಲಿ ಮೈನವಿರೇಳಿಸುವ ಜೋಡೆತ್ತು ಓಟ ಸ್ಫರ್ಧೆ: ಸಂಭ್ರಮಿಸಿದ ರೈತರು
ಹಾಸನ, ಜನವರಿ 2: ಹೊಸ ವರ್ಷದ ಪ್ರಯುಕ್ತ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಎರಡು ದಿನಗಳ ಕಾಲ ಜೋಡೆತ್ತಿನ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹಾಸನ ಜಿಲ್ಲೆ ಸೇರಿದಂತೆ ದೂರದ ಹೊರ ಜಿಲ್ಲೆಗಳಿಂದ ರೈತರು ತಮ್ಮ ದುಬಾರಿ ಬೆಲೆಯ ಎತ್ತುಗಳ ಜೊತೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎತ್ತಿನಗಾಡಿ ಓಟದ ಸ್ಪರ್ಧೆ ನೆರೆದಿದ್ದವರನ್ನು ರೋಮಾಂಚಕಗೊಳಿಸಿತು. ಎರಡು ಟ್ರಾಕ್ಗಳಲ್ಲಿ ವೇಗವಾಗಿ ಎತ್ತುಗಳು ಓಡುವುದನ್ನು ನೋಡಿದವರ ಎದೆ ಜಲ್ ಎನಿಸಿತು.
ಸ್ಪರ್ಧೆಯಲ್ಲಿ ವಿಜೇತರಾದ ಎತ್ತುಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿ ನೀಡಲಾಯಿತು. ಸ್ಪರ್ಧೆಯಲ್ಲಿ ದುಬಾರಿ ಬೆಲೆಯ ಎತ್ತುಗಳನ್ನು ಪ್ರದರ್ಶನ ಮಾಡಲಾಯಿತು. ಜೋಡೆತ್ತುಗಳ ಆಕರ್ಷಕ ಮೈಕಟ್ಟು ಕಂಡು ರೈತರು ಸಂತಸಪಟ್ಟರು.

ಹಳ್ಳಿಕಾರ್ ತಳಿಯ ಜೋಡೆತ್ತುಗಳ ಎತ್ತಿನಗಾಡಿ ಓಟ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಇತರೆ ಕ್ರೀಡೆಗಳಿಗೆ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ದಿವಾಕರ್ ಅರಕಲಗೂಡು ಪಟ್ಟಣದ ತಾಲೂಕು ಕ್ರೀಡಾಂಗದಲ್ಲಿ ಎರಡು ದಿನಗಳ ಗ್ರಾಮೀಣ ಸೊಗಡಿನ ಹಳ್ಳಿಕಾರ್ ತಳಿಯ ಜೋಡೆತ್ತುಗಳ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದರು. ಎರಡು ಟ್ರಾಕ್ಗಳಲ್ಲಿ ಟೈಯರ್ ಗಾಡಿಗೆ ಎರಡು ಎತ್ತುಗಳನ್ನು ಕಟ್ಟಿ ಕಡಿಮೆ ಸಮಯದಲ್ಲಿ ಗುರಿಮುಟ್ಟಲು ಗಾಡಿಯನ್ನು ಓಡಿಸುತ್ತಿದ್ದ ದೃಶ್ಯ ನಿಜಕ್ಕೂ ಮೈಜುಮ್ಮೆನಿಸಿತು. ಎತ್ತುಗಳ ಓಟದ ವೇಗ ನೋಡಿದ ನೆರೆದಿದ್ದವರು ಶಿಳ್ಳೆ ಚಪ್ಪಾಳೆ ಹೊಡೆದು ಹುರಿದುಂಬಿಸಿದರು.

ರೋಮಾಂಚನಕಾರಿಯಾದ ಬೆಲೆ ಬಾಳುವ ಎತ್ತುಗಳ ಓಟ
ಹಾಸನ, ಚಿಕ್ಕಮಗಳೂರು, ಧಾರವಾಡ, ಕಡೂರು, ಹರಿಹರ, ಮಂಡ್ಯ, ಕೆ.ಆರ್.ನಗರ, ರಾಣಿಬೆನ್ನೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 56 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟಾಟಾ ಏಸ್ ವಾಹನ ಹಾಗೂ ಇತರೆ ವಾಹನಗಳಲ್ಲಿ ಎತ್ತುಗಳನ್ನು ಕರೆತರಲಾಗಿತ್ತು. ಎರಡು ಲಕ್ಷದಿಂದ ಏಳು ಲಕ್ಷದವರೆಗೆ ಬೆಲೆ ಬಾಳುವ ಎತ್ತುಗಳು ಓಟ ರೋಮಾಂಚನಕಾರಿಯಾಗಿತ್ತು. ಎತ್ತುಗಳನ್ನು ಗಾಡಿಗೆ ಕಟ್ಟಿ ಸ್ಪರ್ಧೆಗೆ ಬಿಡಲು ಅದರ ಮಾಲೀಕರು ಹರಸಾಹಸಪಡಬೇಕಾಯಿತು. ಕೆಲವು ಜನರ ಕೂಗಾಟ, ಶಿಳ್ಳೆ, ಚಪ್ಪಾಳೆ ಕೇಳಿ ತೀರ್ಪುಗಾರರು ರೇಸ್ಗೆ ಬಾವುಟ ತೋರುವ ಮುನ್ನವೇ ಎಲ್ಲರನ್ನೂ ಎಳೆದುಕೊಂಡು ನುಗ್ಗಿತ್ತಿದ್ದವು. ಅವುಗಳನ್ನು ಹಿಡಿದು ನಿಲ್ಲಿಸಿ ವಾಪಾಸ್ ಗಾಡಿಗೆ ಕಟ್ಟಿ ಸ್ಪರ್ಧೆಗೆ ಇಳಿಯುವಷ್ಟರಲ್ಲಿ ಅದರ ಮಾಲೀಕರು ಹೈರಾಣಾದರು. ಕೆಲವು ಎತ್ತುಗಳು ನೆಟ್ಟಿದ್ದ ಮರದ ಕಂಬಗಳ ಮೇಲೆಯೇ ನುಗ್ಗಿದವು.

ಜೋಡೆತ್ತುಗಳ ನಡುವೆ ಸಖತ್ ಪೈಪೋಟಿ
ಹಲವು ಜಿಲ್ಲೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಎತ್ತುಗಳಿಗೆ ಇದೇ ಮೊದಲಬಾರಿಗೆ ರೇಸ್ನಲ್ಲಿ ಭಾಗವಹಿಸಿದ್ದ ಜೋಡೆತ್ತುಗಳು ಸಕತ್ ಪೈಪೋಟಿ ನೀಡಿದವು. ಒಂದೆರಡು ಸೆಕೆಂಡ್ಗಳಲ್ಲಿ ಕೆಲವು ಜೋಡೆತ್ತುಗಳು ಸೋಲು ಅನುಭವಿಸಿದವರು. ಮೊದಲ ಸುತ್ತು, ಎರಡನೇ ಸುತ್ತಿನಲ್ಲಿ ಸೋತ ಎತ್ತುಗಳು ಬಹುಮಾನ ಪಡೆಯುವಲ್ಲಿ ವಿಫಲವಾದರು ಜನರಿಗೆ ಮನರಂಜನೆ ನೀಡಿದವು. ಇನ್ನೂ ಮೂರು ಸುತ್ತುಗಳಲ್ಲಿ ಜಯಗಳಿಗೆ ಅಂತಿಮವಾಗಿ ಬಹುಮಾನ ಪಡೆದ ಎತ್ತುಗಳ ಮಾಲೀಕರು ಹಿರಿಹಿರಿ ಹಿಗ್ಗಿದರು.

ಜೋಡೆತ್ತು ಓಟ ನೋಡಿ ಹುಚ್ಚೆದ್ದು ಕುಣಿದ ರೈತರು
ಮೊದಲನೆ ಸ್ಥಾನ ಪಡೆದ ಜೋಡೆತ್ತುಗಳಿಗೆ ಐವತ್ತು ಸಾವಿರ ನಗದು ಹಾಗೂ ಟ್ರೋಫಿ, ಎರಡನೇ ಸ್ಥಾನ ಪಡೆದ ಜೋಡೆತ್ತುಗಳಿಗೆ ನಲವತ್ತು ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ಎತ್ತುಗಳಿಗೆ ಮೂವತ್ತು ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕು ಹಾಗೂ ಐದನೇ ಸ್ಥಾನ ಪಡೆದ ಜೋಡೆತ್ತುಗಳಿಗೆ ಇಪ್ಪತ್ತು ಹಾಗೂ ಹತ್ತು ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸಿ ಕ್ರೀಡೆಗಳನ್ನು ಉಳಿಸಬೇಕೆಂದು ಸ್ಪರ್ಧಿಗಳು ಹಾಗೂ ರೈತರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ವಿವಿಧೆಡೆ ಎತ್ತಿನಗಾಡಿ ಓಟದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಆದರೆ ರೈತರು ದುಬಾರಿ ಹಣ ನೀಡಿ ಸಾಕಿರುವ ಎತ್ತುಗಳನ್ನು ರೇಸ್ಗೆ ಕರೆತಂದು ತಾವೇ ಗಾಡಿ ಓಡಿಸಿದ್ದು ಮಾತ್ರ ನಿಜಕ್ಕೂ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications