ಅಸ್ಸಾಂ ಮಳೆ: ​​​​ಸರ್ಕಾರದ ಸಹಾಯ ಕೋರಿದ ಭಾರತೀಯ ಚಹಾ ಸಂಘ

ಅಸ್ಸಾಂನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತೀವ್ರ ಪ್ರವಾಹ ಉಂಟಾಗಿದೆ. ಇದು ರಾಜ್ಯದ ದಕ್ಷಿಣ ಭಾಗದಲ್ಲಿರುವ ಬರಾಕ್ ಕಣಿವೆಯಲ್ಲಿನ ಚಹಾ ತೋಟಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ. ಬರಾಕ್ ಕಣಿವೆ (NSE) ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತಗೊಂಡಿರುವುದರಿಂದ, ಚಹಾ ಎಸ್ಟೇಟ್‌ಗಳು ಚಹಾಗಳನ್ನು ರವಾನಿಸಲು ಸಾಧ್ಯವಾಗುತ್ತಿಲ್ಲ. ಇದು ಉದ್ಯಮಕ್ಕೆ ಗಂಭೀರ ಆರ್ಥಿಕ ಅಡಚಣೆಯನ್ನು ಉಂಟುಮಾಡುತ್ತಿದೆ. ಆ ಪ್ರದೇಶದಲ್ಲಿ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ಸೂಕ್ತ ಕ್ರಮಗಳಿಗಾಗಿ ಭಾರತೀಯ ಚಹಾ ಸಂಘ ​​ಅಸ್ಸಾಂ ಸರ್ಕಾರದ ಸಹಾಯವನ್ನು ಕೋರಿದೆ.

ಐತಿಹಾಸಿಕವಾಗಿ ಹಲವಾರು ಸಾಂಪ್ರದಾಯಿಕ ಸಮಸ್ಯೆಗಳಿಂದ ಬಳಲುತ್ತಿರುವ ಬರಾಕ್ ವ್ಯಾಲಿ ಚಹಾ ಉದ್ಯಮ ಸದ್ಯ ಮತ್ತೊಂದು ಹೊಡೆತ ಕಂಡಿದೆ. ದೀರ್ಘ ಆರ್ಥಿಕ ಹಿಂಜರಿತದ ಪರಿಸ್ಥಿತಿಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿದೆ. ಮೇ ಮೊದಲ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಬರಾಕ್ ಕಣಿವೆ ತೀವ್ರ ಪ್ರವಾಹದ ಹಿಡಿತದಲ್ಲಿದೆ. ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಎಲ್ಲಾ ನದಿಗಳು ಚಟುವಟಿಕೆಗಳ ಮುಖ್ಯ ಕೇಂದ್ರವಾದ ಸಿಲ್ಚಾರ್ ಸೇರಿದಂತೆ ಆ ಪ್ರದೇಶದ ಹಲವಾರು ಪಟ್ಟಣಗಳನ್ನು ಮುಳುಗಿಸುವುದರ ಜೊತೆಗೆ ಹಲವಾರು ಪ್ರದೇಶಗಳಲ್ಲಿ ಭೂ ಸವೆತಕ್ಕೆ ಕಾರಣವಾಗಿವೆ. ಹಲವಾರು ಸ್ಥಳಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಪರಿಣಾಮವಾಗಿ, ಬರಾಕ್ ಕಣಿವೆ ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತವಾಗಿದೆ.

ಸರ್ಕಾರಕ್ಕೆ ಸಹಾಯ ಕೋರಿದ ಟೀ ಅಸೋಸಿಯೇಷನ್

ಸರ್ಕಾರಕ್ಕೆ ಸಹಾಯ ಕೋರಿದ ಟೀ ಅಸೋಸಿಯೇಷನ್

"ಇದು ಪ್ರತಿಯಾಗಿ ಹಲವಾರು ಅಗತ್ಯ ಒಳಹರಿವಿನ ಪೂರೈಕೆ ಮತ್ತು ತಯಾರಿಸಿದ ಚಹಾಗಳ ರವಾನೆಗೆ ತೀವ್ರವಾಗಿ ಪರಿಣಾಮ ಬೀರಿದೆ. ಆ ಪ್ರದೇಶದ ಪ್ರಮುಖ ಪಟ್ಟಣಗಳಿಂದ ಹಲವಾರು ಟೀ ಎಸ್ಟೇಟ್‌ಗಳಿಗೆ ರಸ್ತೆ ಸಂಪರ್ಕದ ಅಡಚಣೆಯು ಪರಿಣಾಮ ಬೀರಿದೆ "ಎಂದು ಐಟಿಎ ಹೇಳಿದೆ.

ಈ ಹವಾಮಾನ ಬದಲಾವಣೆಯಿಂದಾಗಿ ವಿದ್ಯುತ್‌ ಅಡಚಣೆ ಮತ್ತು ದೂರಸಂಪರ್ಕದಲ್ಲಿ ಅಸ್ಥಿರತೆ ಉಂಟಾಗಿದೆ. ಇದರೊಂದಿಗೆ ಕಲ್ಲಿದ್ದಲು ಮುಂತಾದ ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಹೆಚ್ಚಿನ ಆತಂಕವಿದೆ ಎಂದು ಐಟಿಎ ಹೇಳಿದೆ. ಇದೇ ರೀತಿಯ ವಾತಾವರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕೊರತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸಂಘ ತಿಳಿಸಿದೆ.

26 ಜಿಲ್ಲೆಗಳಲ್ಲಿ 4,03,352 ಸಂತ್ರಸ್ತರು

26 ಜಿಲ್ಲೆಗಳಲ್ಲಿ 4,03,352 ಸಂತ್ರಸ್ತರು

ಅಸ್ಸಾಂನಲ್ಲಿ ಭಾರೀ ಮಳೆ ಪ್ರವಾಹ ಹಾನಿಯನ್ನುಂಟುಮಾಡುತ್ತಿದೆ. ಕಳೆದ ದಿನಕ್ಕಿಂತ ಸಂತ್ರಸ್ತರ ಸಂಖ್ಯೆ ದ್ವಿಗುಣಗೊಂಡಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಮಂಗಳವಾರ ಸರ್ಕಾರದ ಹೇಳಿಕೆಯ ಪ್ರಕಾರ ವಿಪತ್ತಿನಿಂದಾಗಿ ಇನ್ನೂ ಮೂರು ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಒಟ್ಟು ಎಂಟಕ್ಕೆ ಏರಿಕೆಯಾಗಿದೆ. ಸೋಮವಾರ 20 ಜಿಲ್ಲೆಗಳಲ್ಲಿ 1,97,248 ಇದ್ದ ಸಂತ್ರಸ್ತರ ಸಂಖ್ಯೆ ಇಂದು 26 ಜಿಲ್ಲೆಗಳಲ್ಲಿ ಪೀಡಿತ ಜನರ ಸಂಖ್ಯೆ 4,03,352 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಬುಲೆಟಿನ್ ತಿಳಿಸಿದೆ.

ರೈಲು ಸಂಪರ್ಕ ಸ್ಥಗಿತ

ರೈಲು ಸಂಪರ್ಕ ಸ್ಥಗಿತ

ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆಗೆ ರೈಲು ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೂಕುಸಿತಗಳು ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ವಿನಾಶವನ್ನುಂಟುಮಾಡಿವೆ. ಮಾತ್ರವಲ್ಲದೆ ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಪ್ರವಾಹದ ನೀರಿನಿಂದ 16,645.61 ಹೆಕ್ಟೇರ್ ಬೆಳೆಗಳು ಮುಳುಗಿ ನಾಶವಾಗಿದೆ.

ಕ್ಯಾಚಾರ್ 96,697 ಪೀಡಿತ ಜನರೊಂದಿಗೆ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ ಗುವಾಹಟಿ, ಅಸ್ಸಾಂನಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ, ಜೊತೆಗೆ ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತದೆ ಎಂದು ತಿಳಿಸಿದೆ. ಇದರಿಂದಾಗಿ ವಿವಿಧ ಪೀಡಿತ ಪ್ರದೇಶಗಳಲ್ಲಿ 89 ಪರಿಹಾರ ಶಿಬಿರಗಳಲ್ಲಿ ಸುಮಾರು 40,000 ಜನರು ಆಶ್ರಯ ಪಡೆದಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆ

ಅಗತ್ಯ ವಸ್ತುಗಳ ಪೂರೈಕೆ

ಹನ್ನೊಂದಕ್ಕೂ ಹೆಚ್ಚು ಒಡ್ಡುಗಳು ಒಡೆದಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯಾಗುವುದರ ಜೊತೆಗೆ ಇನ್ನೂ ಆರು ಜಿಲ್ಲೆಗಳು ಬಾಧಿತವಾಗಿವೆ. ದರ್ರಾಂಗ್ ಜಿಲ್ಲೆಯ ಗುವಾಹಟಿ ಮತ್ತು ಖಾರುಪೇಟಿಯಾದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ ಎಂದು ASDMA ಬುಲೆಟಿನ್ ತಿಳಿಸಿದೆ.

ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಹನ ಮಾರ್ಗಗಳನ್ನು ಪುನಃಸ್ಥಾಪಿಸಲು ರಾಜ್ಯ ಆಡಳಿತ ಕ್ರಮಗಳನ್ನು ಅನುಸರಿಸುತ್ತಿರುವಾಗಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂಗೆ ಕೇಂದ್ರ ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ರಕ್ಷಣಾ ಕಾರ್ಯಾಚರಣೆಗೆ ಕರೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+