ಅಸ್ಸಾಂನಲ್ಲಿ ನೆಲೆ ಸ್ಥಾಪಿಸಲು ಅಲ್-ಖೈದಾ, ಎಬಿಟಿ ಪ್ರಯತ್ನ!

ಗುವಾಹಟಿ,ಜುಲೈ. 30: ಅಸ್ಸಾಂನಲ್ಲಿ ಅಲ್-ಖೈದಾ ತನ್ನ ನೆಲೆಯನ್ನು ಸ್ಥಾಪಿಸಲು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ರಾಜ್ಯದಲ್ಲಿ ಹಲವಾರು ಘಟಕಗಳನ್ನು ರಚಿಸಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.

ಅಸ್ಸಾಂ ಪೊಲೀಸರು ಇತ್ತೀಚೆಗೆ ಭಾರತೀಯ ಉಪಖಂಡದಲ್ಲಿ ಅಲ್-ಖೈದಾದ (ಎಕ್ಯೂಐಎಸ್) ಹಾಗೂ ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಎಂಬ ಎರಡು ಘಟಕಗಳನ್ನು ಮೊರಿಗಾಂವ್ ಮತ್ತು ಬಾರ್ಪೇಟಾ ಜಿಲ್ಲೆಗಳಲ್ಲಿ ಭೇದಿಸಿ, ಮದ್ರಸಾ ನಡೆಸುತ್ತಿದ್ದ ಒಬ್ಬ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಅಸ್ಸಾಂ ಪೊಲೀಸ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) (ವಿಶೇಷ ಶಾಖೆ) ಹಿರೇನ್ ನಾಥ್ ಮಾತನಾಡಿ, ಅಲ್-ಖೈದಾ ಅಸ್ಸಾಂನಲ್ಲಿ ತಮ್ಮ ಹೆಜ್ಜೆ ಗುರುತು ಮತ್ತು ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸಿದೆ. ಆದರೆ ನಾವು ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಭೇದಿಸಿದ್ದೇವೆ. ನಾವು ಎಲ್ಲವನ್ನೂ ಹಿಂಬಾಲಿಸುತ್ತಿದ್ದೇವೆ. ಅವರು ಕೆಲವು ಕೆಟ್ಟ ವಿನ್ಯಾಸಗಳ ಮೂಲಕ ತಮ್ಮ ಚಟುವಟಿಕೆಗಳನ್ನು ಬಹಳ ರಹಸ್ಯವಾಗಿ ಮಾಡುತ್ತಿದ್ದಾರೆ. ವಿಭಿನ್ನ ಹೆಸರುಗಳ ಮೂಲಕ ಸಾಕಷ್ಟು ಉಪದೇಶವನ್ನು ಮಾಡುತ್ತಿದ್ದು, ಜನರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಹೇಳಿದರು.

ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (ಎಕ್ಯೂಐಎಸ್) ಮತ್ತು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಕೆಲವು ಜಿಹಾದಿ ಸಾಹಿತ್ಯವನ್ನು ಅನುವಾದಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ., ಅಸ್ಸಾಂಗೆ ಸಂಬಂಧಿಸದ ಬಂಗಾಳಿ ಮತ್ತು ಅಸ್ಸಾಮಿ ಭಾಷೆಯಲ್ಲಿ ಕೆಲವು ಸಂಚಿಕೆಗಳನ್ನು ಅನುವಾದಿಸಿ ಅವುಗಳನ್ನು ವಿತರಿಸಲಾಗಿದೆ. ವಿಶೇಷವಾಗಿ ಅಸ್ಸಾಂ- ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಅವರ ನೆಲೆಗಳನ್ನು ಸ್ಥಾಪಿಸಲು ಕೆಲವು ಪ್ರಯತ್ನಗಳ ಬಗ್ಗೆ ಮಾಹಿತಿ ಇದೆ. ನಾವು ಈ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹಿರೇನ್ ನಾಥ್ ಹೇಳಿದರು.

ನಾವು ಮೋರಿಗಾಂವ್ ಜಿಲ್ಲೆಯಲ್ಲಿ ಪತ್ತೆ ಹಚ್ಚಿದವರಲ್ಲಿ ಮದ್ರಸಾವನ್ನು ನಡೆಸುತ್ತಿದ್ದ ಒಬ್ಬ ಮುಸ್ತಫಾ ಅಲಿಯಾಸ್ ಮುಫ್ತಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ನಾವು ಮುಸ್ತಫಾ ಅವರೊಂದಿಗೆ ಬಹಳ ನಿಕಟ ಸಂಪರ್ಕ ಹೊಂದಿರುವ ಅಫ್ಸರುದ್ದೀನ್ ಭುಯಾನ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸುತ್ತಿದ್ದ. ಅವನು ಕಂಪ್ಯೂಟರ್ ಅಂಗಡಿಯನ್ನು ನಡೆಸುತ್ತಿದ್ದನು. ಅವರು 2020 ರಿಂದ ಆಗಾಗ್ಗೆ ಮಧ್ಯಂತರದಲ್ಲಿ ಒಂದೆರಡು ವ್ಯಕ್ತಿಗಳಿಂದ ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಅವರಲ್ಲಿ ಒಬ್ಬರು ಅಮೀರುದ್ದೀನ್ ಅನ್ಸಾರಿ ಅಲಿಯಾಸ್ ಹುಜೂರ್, ಅವರನ್ನು ಪಶ್ಚಿಮ ಬಂಗಾಳದ ಹೌರಾದಿಂದ ಮತ್ತೊಂದು ತನಿಖಾ ಸಂಸ್ಥೆಯಿಂದ ಬಂಧಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಮಾಮುನುಲ್ ರಶೀದ್ ಅವರನ್ನು ಎರಡು ತಿಂಗಳ ಹಿಂದೆ ಬಾರ್ಪೇಟಾ ಪೊಲೀಸರು ಬಂಧಿಸಿದ್ದಾರೆ ಎಂದು ಎಡಿಜಿಪಿ ಹೇಳಿದರು.

 ಜಾನಿಯಾ ಮಾಡ್ಯೂಲ್ ಎನ್ನಲಾಗುತ್ತದೆ

ಜಾನಿಯಾ ಮಾಡ್ಯೂಲ್ ಎನ್ನಲಾಗುತ್ತದೆ

ಮುಸ್ತಫಾ ಅವರೊಂದಿಗೆ ಒಂದೆರಡು ಜನರು ಹಿಂದೆ ಉಳಿದುಕೊಂಡಿದ್ದರು. ಅವರಲ್ಲಿ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು. ಬಹುಶಃ ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ. ಬರ್ಪೇಟಾ ಘಟಕವನ್ನು ವಿಶೇಷವಾಗಿ ನಾವು ಜಾನಿಯಾ ಮಾಡ್ಯೂಲ್ ಎಂದು ಕರೆಯುತ್ತೇವೆ. ಏಕೆಂದರೆ ಬಾರ್ಪೇಟಾ ಜಿಲ್ಲೆಯ ಜಾನಿಯಾ ಪ್ರದೇಶದಿಂದ ಎಲ್ಲರನ್ನು ಬಂಧಿಸಲಾಗಿದೆ. 11 ಜನರನ್ನು ಬಂಧಿಸಿ ಅವರನ್ನು ಕೂಲಂಕಷವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.

 ಬಂಧಿತರಿಂದ ಜಿಹಾದಿ ಸಾಹಿತ್ಯದ ವಶ

ಬಂಧಿತರಿಂದ ಜಿಹಾದಿ ಸಾಹಿತ್ಯದ ವಶ

ಅವರ ವಿಚಾರಣೆಯ ನಂತರ ನಾವು ಮತ್ತೆ ಎಂಟು ಜನರನ್ನು ಬಂಧಿಸಿದ್ದೇವೆ. ಜಿಹಾದಿ ನಡೆಸುವ ಬಗ್ಗೆ ಸಾಕಷ್ಟು ಸಂಪರ್ಕವನ್ನು ಅವರು ಕಂಡುಕೊಂಡಿದ್ದರು. ಅವರಿಂದ ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಸಾಮಾಜಿಕ ಮಾಧ್ಯಮ ವೇದಿಕೆಗಳು ಜಿಹಾದಿ ಲಿಂಕ್‌ಗಳು ಮತ್ತು ಸಾಮಗ್ರಿಗಳಿಂದ ತುಂಬಿವೆ. ಈ ಬಗ್ಗೆ ನಾವು ಸಂಪೂರ್ಣವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

 ಮುಸ್ತಫಾ ಮುಫ್ತಿ ಹೌರಾ ಪ್ರದೇಶದ ಮನೆಯಲ್ಲಿ ತಂಗಿದ್ದ

ಮುಸ್ತಫಾ ಮುಫ್ತಿ ಹೌರಾ ಪ್ರದೇಶದ ಮನೆಯಲ್ಲಿ ತಂಗಿದ್ದ

ಮುಸ್ತಫಾ ಮುಫ್ತಿ ಎರಡು ಬಾರಿ ಕೋಲ್ಕತ್ತಾಗೆ ಹೋಗಿ ಅಮೀರುದ್ದೀನ್ ಅನ್ಸಾರಿ ಅಲಿಯಾಸ್ ಹುಜೂರ್ ನನ್ನು ಭೇಟಿಯಾಗಿ ಹೌರಾ ಪ್ರದೇಶದ ಅವರ ಮನೆಯಲ್ಲಿ ತಂಗಿದ್ದರು. ಅವರು ಅಮೀರುದ್ದೀನ್‌ನಿಂದ 49,000 ಹಾಗೂ 47,000 ರೂಪಾಯಿಗಳಂತೆ ಸಣ್ಣ ಕಂತುಗಳಲ್ಲಿ ಹಣವನ್ನು ಪಡೆದಿದ್ದಾರೆ ಎಂದು ಹಿರೇನ್ ನಾಥ್ ಹೇಳಿದರು.

 ಅಖ್ತರ್‌ ಹುಸೇನ್‌ಗೆ ಲಷ್ಕರ್‌ ಜೊತೆ ಸಂಬಂಧ

ಅಖ್ತರ್‌ ಹುಸೇನ್‌ಗೆ ಲಷ್ಕರ್‌ ಜೊತೆ ಸಂಬಂಧ

ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವ ಅಖ್ತರ್ ಹುಸೇನ್ ಲಷ್ಕರ್ ಸಂಬಂಧದ ಕುರಿತು ಮಾತನಾಡಿದ ಎಡಿಜಿಪಿ, ಅಸ್ಸಾಂ ಪೊಲೀಸರು ಬಂಧಿಸಿರುವ 11 ವ್ಯಕ್ತಿಗಳು ಮತ್ತು ಕಟಿಗೋರಾ ಮೂಲದ ಅಖ್ತರ್ ಹುಸೇನ್ ಲಷ್ಕರ್ ನಡುವೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದರು. ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+