ಸಿದ್ದರಾಮಯ್ಯ ದೇವರನ್ನು ನಂಬುತ್ತಾರೆ, ಮೂಢನಂಬಿಕೆಗಳನ್ನಲ್ಲ-ಶಾಸಕ ಎಚ್.ಕೆ.ಪಾಟೀಲ್
ಗದಗ, ಮೇ 10: ಈ ಚುನಾವಣೆ ಕರ್ನಾಟಕದ ಭವಿಷ್ಯ ಬರೆಯಲಿದೆ. ನನಗೆ ವಿಶ್ವಾಸ ಇದೆ, ಚಲುವ ಕನ್ನಡ ನಾಡು ಕಟ್ಟುವ ಕನುಸಗಾರರಿಗೆ ಈ ಚುನಾವಣೆ ಬಹುದೊಡ್ಡ ಬಾಗಿಲ ತೆರೆಯುತ್ತದೆ. ಭಗವಂತ ಆಶೀರ್ವಾದ ಮಾಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಹುಲಕೋಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗನಲ್ಲಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುತ್ತದೆ. ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಸರ್ಕಾರ ರಚನೆ ಮಾಡುತ್ತದೆ. ಸರ್ವೇ ಪ್ರಕಾರ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ವೇ ಸುಳ್ಳಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎನ್ನುವ ಬಿಜೆಪಿ ವಾದಕ್ಕೆ ತಿರುಗೇಟು ನೀಡಿದ ಎಚ್.ಕೆ.ಪಾಟೀಲ್ ಜನರ ಮನಸನ್ನು ಸುಳ್ಳು ಮಾಡಲು ಆಗುವುದಿಲ್ಲ. ಬಿಜೆಪಿಯವರು 13ನೇ ತಾರೀಖಿನಂದು ಅವರು ನಿರಾಸೆಗೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಸಿದ್ದರಾಮಯ್ಯನ ಹಾಗೂ ಅವರ ಪತ್ನಿ ದೇವರ ಬಗ್ಗೆ ಸಾಕಷ್ಟು ನಂಬಿಕೆ ಇರುವವರು ಆದರೆ ಡಂಭಾಚಾರ ,ಮೂಢನಂಬಿಕೆಗಳನ್ನು ನಂಬುವುದಿಲ್ಲ. ಬಿಜೆಪಿಯವರು ಮಾತ್ರ ದೇವರನ್ನು ನಂಬುವುದಿಲ್ಲ ಎಂದುಕೊಂಡಿದ್ದಾರೆ ಎಂದು ಮಂಗಳವಾರ ಮೈಸೂರಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿರುವ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಶಾಸಕ ಎಚ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications