ಲಕ್ಷ್ಮೇಶ್ವರ; ಶಿಗ್ಲಿ ಗ್ರಾಮ ಪಂಚಾಯತಿಗೆ ರೈತರು ಬೀಗ ಜಡಿದಿದ್ದು ಯಾಕೆ?
ಗದಗ, ಅಕ್ಟೋಬರ್, 10: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸೋಮವಾರ ಇಂದು ರೈತ ಸಂಪರ್ಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ನೂರಾರು ರೈತರು ಗ್ರಾಮ ಪಂಚಾಯತಿಗೆ ದೌಡಾಯಿಸಿದ್ದಾರೆ. ಅಲ್ಲದೆ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕೈದು ವರ್ಷಗಳಿಂದಲೂ ಶಿಗ್ಲಿ ಗೋವನಾಳ ಮಧ್ಯದ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ರೈತರು ತಮ್ಮ ಜಮೀನುಗಳಿಗೆ ಹೋಗಲು ಹರಸಾಹಸ ಪಡುವಂತಾಗಿದೆ. ನೂರಾರು ಎಕರೆ ಜಮಿನು ಈ ಭಾಗದಲ್ಲಿದ್ದು, ರೈತರು ಜಮೀನಿನಲ್ಲಿ ಬೆಳೆದಿದ್ದ ದವಸ ಧಾನ್ಯಗಳನ್ನು ತರಲು ಪರದಾಡುವಂತಾಗಿದೆ. ಸಮಸ್ಯೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ, ಗ್ರಾಮ ಪಂಚಾಯತಿಯವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೈತ ಸಂಪರ್ಕ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದರು.
ಗದಗ; ಲಕ್ಷ್ಮೇಶ್ವರದಲ್ಲಿ ಮತ್ತೆ ಮಳೆ ಅವಾಂತರ, ದಿಂಗಾಲೇಶ್ವರ ಮಠದ ಆವರಣ ಜಲಾವೃತ
ಜನಪ್ರತಿನಿಧಿಗಳಿಗೆ
ಜನರಿಂದ
ತರಾಟೆ
ಸುದ್ದಿ
ತಿಳಿಯುತ್ತಿದ್ದಂತೆ
ಗ್ರಾಮ
ಪಂಚಾಯತಿ
ಅಧ್ಯಕ್ಷ
ಅಶೋಕಯ್ಯ
ಮುಳಗುಂದಮಠ,
ಉಪಾಧ್ಯಕ್ಷ
ಯಲ್ಲಪ್ಪ
ತಳವಾರ
ಸೇರಿದಂತೆ
ಗ್ರಾಮ
ಪಂಚಾಯತಿ
ಸದಸ್ಯರು
ಪ್ರತಿಭಟನೆ
ಸ್ಥಳಕ್ಕೆ
ದೌಡಾಯಿಸಿದ್ದಾರೆ.
ಈ
ಸಂದರ್ಭದಲ್ಲಿ
ಆಕ್ರೋಶಗೊಂಡಿದ್ದ
ರೈತರು
ಎಲ್ಲ
ಸದಸ್ಯರನ್ನೂ
ತರಾಟೆಗೆ
ತೆಗೆದುಕೊಂಡರು.
ನಾವು
ಅನುಭವಿಸುತ್ತಿರುವ
ಕಷ್ಟ
ನಿಮ್ಮ
ಕಣ್ಣಿಗೆ
ಕಾಣುತ್ತಿಲ್ಲವೆ?
ರಸ್ತೆ
ನಿರ್ಮಿಸುವಂತೆ
ಇನ್ನು
ಎಷ್ಟು
ಬಾರಿ
ಮನವಿ
ಕೊಡಬೇಕು?
ನಮ್ಮ
ತಾಳ್ಮೆಯನ್ನು
ಪರೀಕ್ಷಿಸಬೇಡಿ.
ರೈತ
ಸಂಪರ್ಕ
ರಸ್ತೆ
ನಿರ್ಮಿಸುವ
ಕುರಿತು
ಸ್ಪಷ್ಟ
ನಿರ್ಧಾರ
ಇಂದೇ
ಆಗಬೇಕು
ಎಂದು
ಪಟ್ಟು
ಹಿಡಿದು
ಕುಳಿತಿದ್ದರು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠ ರೈತರನ್ನು ಸಮಾಧಾನಪಡಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆಗ ಶಾಂತರಾದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.
ರೈತರಿಗೆ
ಕಂಟಕವಾಗಿದ್ದ
ಚಿರತೆ
ಕೊನೆಗೂ
ಸೆರೆ
ಮೂರನಾಲ್ಕು
ವರ್ಷಗಳಿಂದ
ರೈತರಿಗೆ
ಕಂಟಕವಾಗಿದ್ದ
ಚಿರತೆ
ಕೊನೆಗೂ
ಸೆರೆ
ಆಗಿದೆ.
ಗದಗ
ಜಿಲ್ಲೆಯ
ಗಜೇಂದ್ರಗಡ
ತಾಲೂಕಿನ
ನಾಗೇಂದ್ರಗಡ
ಗುಡ್ಡದಲ್ಲಿ
ಚಿರತೆ
ಬೋನಿಗೆ
ಬಿದ್ದಿದೆ.
ಹಲವು
ವರ್ಷಗಳಿಂದ
ರೈತರ
ಜಮೀನುಗಳಿಗೆ
ನುಗ್ಗಿ
ದನ-ಕರುಗಳನ್ನು
ತಿಂದು
ಹೋಗುತ್ತಿತ್ತು.
ಇದೂವರೆಗೂ
ಸುಮಾರು
10ಕ್ಕೂ
ಹೆಚ್ಚು
ಜಾನುವಾರಗಳನ್ನು
ತಿಂದು
ಹೋಗಿದೆ
ಎಂದು
ರೈತರು
ಅಳಲು
ತೋಡಿಕೊಂಡಿದ್ದಾರೆ.
ಕಳೆದ
ಸೆಪ್ಟೆಂಬರ್
ತಿಂಗಳಿನಲ್ಲಿ
ಎರಡು
ಹಸುಗಳನ್ನು
ತಿಂದು
ಹಾಕಿತ್ತು.
ಆಗಿನಿಂದ
ಚಿರತೆ
ಭಯದಿಂದ
ರೈತರು
ಜಮೀನುಗಳಿಗೆ
ಹೋಗಲು
ಭಯಪಡುತ್ತಿದ್ದರು.
ಅಲ್ಲಿನ
ಸ್ಥಳೀಯರು
ಸಾಕಷ್ಟು
ಬಾರಿ
ಅರಣ್ಯ
ಇಲಾಖೆಗೆ
ಚಿರತೆ
ಹಿಡಿಯುವಂತೆ
ಒತ್ತಾಯ
ಮಾಡಿದ್ದರು.
ಆದರೆ
ಅರಣ್ಯ
ಇಲಾಖೆಗೆ
ಇಲ್ಲಿ
ಚಿರತೆ
ಇರುವ
ಬಗ್ಗೆ
ಯಾವ
ಸ್ಪಷ್ಟ
ಸುಳಿವೂ
ಸಿಕ್ಕಿರಲಿಲ್ಲ.
ಹೀಗಾಗಿ
ಚಿರತೆ
ಇರಬಹುದು
ಎಂದು
ಊಹಿಸಿ
ಕೆಲ
ದಿನಗಳಿಂದ
ಬೋನ್
ಇಟ್ಟು
ಚಿರತೆ
ಸೆರೆಗಾಗಿ
ಕಾಯುತ್ತಿದ್ದು,
ಇಂದು
ಕೊನೆಗೂ
ಚಿರತೆ
ಬೋನಿಗೆ
ಬಿದ್ದಿದೆ.
ಇನ್ನು ಚಿರತೆ ಬೋನಿಗೆ ಬಿದ್ದಿದ್ದೇ ತಡ ಸುತ್ತಮುತ್ತಲಿನ ಗ್ರಾಮದ ಜನರು ಅದನ್ನು ನೋಡಲು ಮುಗಿಬಿದ್ದಿದ್ದರು. ಜನರನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ನಂತರ ಚಿರತೆಯನ್ನು ಸೆರೆ ಹಿಡಿದು ಕಪ್ಪತ್ತಗುಡ್ಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.